ಕೊನೆಗೂ ಎಚ್ ಆರ್ ರಂಗನಾಥ್ ಶಶಿಧರ್ ಭಟ್ ಅವರನ್ನು ಸುವರ್ಣ ಗ್ರೂಪಿನಿಂದ ಹೊರದೂಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಇವತ್ತು ಬೆಳಿಗ್ಗೆ ಭಟ್ಟರನ್ನು ಅವರ ಅಪೀಸಿನಲ್ಲಿ ಕಂಡ ಸಿ.ಇ. ಒ ಸಂಜಯ ಪ್ರಭು, ನಿಮ್ಮ ಮೇಲೆ ಸುವರ್ಣ ನ್ಯೂಸ್ ಮುಖ್ಯಸ್ಥರಾದ ರಂಗನಾಥ್ ಹತ್ತು ಆರೋಪಗಳನ್ನು ಮಾಡಿದ್ದಾರೆ. ಅದಕ್ಕಾಗಿ ನೀವು ವಿಚಾರಣೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿದರಂತೆ. ಅದಕ್ಕೆ ಭಟ್ಟರು, ನೀವು ಅವರನ್ನು ನಂಬುತ್ತಿರಿ ಅಂದ ಮೇಲೆ ನಾನು ನನ್ನನ್ನು ಸಮರ್ಥಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಎಂದು ಸಂಸ್ಥೆಯಿಂದ ಹೊರಬಂದಿದ್ದಾರೆ.
ಭಟ್ಟರನ್ನು ಹೊರಹಾಕಲು ರಂಗನಾಥನಿಗೆ ಸಿಕ್ಕ ಪ್ರಮುಖ ಕಾರಣವೇನು ಗೊತ್ತಾ? ಸಮಯ ನ್ಯೂಸ್ ಚಾನಲ್ ನ ಉದ್ಘಾಟನೆಯಂದು ಅದರ ಮಾಲೀಕರಾದ ಜಾರಕಿ ಹೊಳೆಯವರು ಭಟ್ಟರನ್ನು ಕೃತಜ್ನತೆಯಿಂದ ಸ್ಮರಿಸಿಕೊಂಡದ್ದು. ಕೃತಜ್ನತೆ ಎಂದರೆನೆಂಬುದು ರಂಗನಾಥನಿಗೆ ಅರ್ಥವಾಗದ ಪದ [ಹೆಚ್ಚಿನ ವಿವರಕ್ಕೆ ಇದೇ ಬ್ಲಾಗಿನಲ್ಲಿ ’ರಂಗನಾಥನೆಂಬ ಸಂಕೇತಿಯೂ ಶಶಿಧರ ಭಟ್ಟರೂ..” ಎಂಬ ಪೋಸ್ಟ್ ಅನ್ನು ನೋಡಿ] ಸುಮಾರು ಹನ್ನೆರಡು ವರ್ಷಗಳ ಹಿಂದೆ-ಆಗ ಭಟ್ಟರು ಝೀ ಟೀವಿ ಮಾಲಕತ್ವದ ಕಾವೇರಿ ಚಾನಲ್ ನ ಮುಖ್ಯಸ್ಥರಾಗಿದ್ದರು-] ಜಾರಕಿ ಹೊಳೆಯವರ ಕೋರಿಕೆಯ ಮೇರೆಗೆ ಕನ್ನಡದಲ್ಲಿ ಚಾನಲ್ಲೊಂದನ್ನು ಪ್ರಾರಂಭಿಸುವುದರ ಕುರಿತಾಗಿ ವಿವರವಾದ ಯೋಜನಾ ವರಧಿಯೊಂದನ್ನು ಸಲ್ಲಿಸಿದ್ದರು. ಸಮಯ ಚಾನಲ್ ಆರಂಭಿಸುವುದಕ್ಕೆ ಅದೇ ತಮಗೆ ಸ್ಪೂರ್ತಿಯಾಗಿತ್ತು ಎಂದು ಅವರು ಕೃತಜ್ನತೆಯಿಂದ ನೆನೆಸಿಕೊಂಡಿದ್ದಾರೆ. ಅದು ಸಮಯ ಚಾನಲ್ ನಲ್ಲಿ ಪ್ರಸಾರವಾಗಿದೆ.
ರಂಗನಾಥ್ ಜಾರಕಿಹೊಳೆಯವರ ಭಾಷಣವನ್ನು ಎಡಿಟ್ ಮಾಡಿಸಿ ಸುವರ್ಣದ ಮಾಲಕರಾದ ರಾಜೀವ್ ಚಂದ್ರಶೇಖರ್ ಅವರಿಗೆ ಕಳುಹಿಸಿದ್ದಾರೆ. ಅದರ ಜೊತೆಗೆ ಭಟ್ಟರ ಮೇಲೆ ಹತ್ತು ಅಪಾದನೆಗಳನ್ನು ಹೊರಿಸಿದ್ದಾರೆ. ಅದರ ಮುಖ್ಯ ತಿರುಳೆಂದರೆ ಭಟ್ಟರು ಚಾನಲ್ಲಿನಲ್ಲಿ ಇದ್ದುಕೊಂಡೇ ಅದರ ಅದಪತನಕ್ಕೆ ಹೇಗೆ ಕಾರಣರಾಗುತ್ತಿದ್ದಾರೆ ಎಂಬುದು. ಕನ್ನಡದ ಗಂಧ ಗಾಳಿಯೂ ಗೊತ್ತಿಲ್ಲದ ಸುವರ್ಣದ ಮುಖ್ಯಸ್ಥರಿಗೆ ರಂಗನಾಥ ಹೇಳಿದುದೆಲ್ಲಾ ವೇದ ವಾಕ್ಯವಾಗುತ್ತಿದೆ.
ಪತ್ರಿಕಾರಂಗವನ್ನು ಉದ್ಯಮವೆಂದು ಪರಿಗಣಿಸುವವರಿಗೆ ಪತ್ರಕರ್ತರು ಮತ್ತುದಲ್ಲಾಳಿಗಳ ನಡುವೆ ವ್ಯತ್ಯಾಸ ಗೊತ್ತಾಗಲಾರದು. ಅದರ ಪ್ರಯೋಜನವನ್ನು ಈಗಿನ ಬಹಳಷ್ಟು ಪತ್ರಕರ್ತರು ಪಡೆಯುತ್ತಿದ್ದಾರೆ. ಈ ಬೆಳವಣಿಗೆ ಪತ್ರಿಕಾರಂಗವನ್ನು ಸೇವಾಕ್ಷೇತ್ರವೆಂದು ಈಗಲೂ ನಂಬಿರುವ ಕೆಲವು ಮನಸ್ಸುಗಳಿಗಾಗುತ್ತಿರುವ ಆಘಾತ.
ಬ್ರೇಕಿಂಗ್ ನ್ಯೂಸ್; ಸುವರ್ಣದಿಂದ ಶಶಿಧರ್ ಭಟ್ ಹೊರಕ್ಕೆ....?
Posted by
Nishada Kanjari
on Wednesday, June 23, 2010
0 comments:
Post a Comment