tag:blogger.com,1999:blog-42619688030821030082024-02-06T21:33:18.353-08:00Nishadaಬೇಟೆಗಾರಳೇ? ಸಪ್ತ ಸ್ವರಗಳಲ್ಲಿ ಒಂದೇ?
ಅಂತರಂಗ ಬಹಿರಂಗಗಳ ಹದವಾದ ಮಿಳಿತ.Nishada Kanjarihttp://www.blogger.com/profile/00365956604807120745noreply@blogger.comBlogger15125tag:blogger.com,1999:blog-4261968803082103008.post-4813689334330460982011-02-16T18:41:00.001-08:002011-02-16T19:29:02.014-08:00ಜನಶ್ರೀ ಎಂಬ ಆನೆಯೂ ಸುದ್ದಿಚಾನಲ್ ಗಳೆಂಬ ನಾಯಿಗಳೂ<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgS5-RJKH9xYUtmCo1flKxCvgI7IlMibOBHnSImjy1GcbB-i8E0tJPkT-dq8o2IznPy3fPT9Qo8WlwSt9kABzrjM7mSQEmk0dxcofAdTL3XbDBSttUPtS4nzIVtaii301ZWC5cho2UkN5O6/s1600/mail.google.com.jpg"><img style="display:block; margin:0px auto 10px; text-align:center;cursor:pointer; cursor:hand;width: 226px; height: 141px;" src="https://blogger.googleusercontent.com/img/b/R29vZ2xl/AVvXsEgS5-RJKH9xYUtmCo1flKxCvgI7IlMibOBHnSImjy1GcbB-i8E0tJPkT-dq8o2IznPy3fPT9Qo8WlwSt9kABzrjM7mSQEmk0dxcofAdTL3XbDBSttUPtS4nzIVtaii301ZWC5cho2UkN5O6/s320/mail.google.com.jpg" border="0" alt="" id="BLOGGER_PHOTO_ID_5574495316012083106" /></a><br /><div><br /></div><div><br /></div><div><br /></div><div>ಮೇಲಿನ ಪೋಟೋ ಗಮನಿಸಿದ್ದೀರಾ? ಇದನ್ನು ನನ್ನ ಗೆಳೆಯನೊಬ್ಬ ನನಗೆ ಮೇಲ್ ಮಾಡಿದ್ದ. ಜೊತೆಗೆ ಆತ ಹೇಳಿದ; ಒರಿಜನಲ್ ಪೋಟೊದಲ್ಲಿ ಇಲ್ಲದ ಮೋಡಿಫೈಡ್ ಗ್ರಾಪಿಕ್ ಮಾಡಿದ್ದೇನೆ, ಖೆಡ್ಡಾ...ಹ್ಹ..ಹ್ಹಾ.. ಎಂದು ನಗಾಡಿದ. </div><div><br /></div><div>ಇದನ್ನು ನೋಡಿ ನಿಮಗೇನನ್ನಿಸಿತೋ ಅದು ನನಗೆ ಗೊತ್ತಿಲ್ಲ. ಆದರೆ ಟೀವಿ೯ ಮುಖ್ಯಸ್ಥರಾಗಿರುವ ಮಹೇಂದ್ರ ಮಿಶ್ರಾ ಅವರಿಗೆ ಕಂಡಾಬಟ್ಟೆ ಸಿಟ್ಟು ಬಂದಿತ್ತು. ’ವೋ ಹಾತಿ ಹೈ ಕ್ಯಾ? ಹಮ್ ಕ್ಯಾ ಹೈ ಕುತ್ತಾ? ವೋ ಕ್ಯಾ ಸಮ್ಜತಾ ಹೈ?’ ಎಂದೆಲ್ಲಾ ರೇಗಾಡಿದ್ದರು.</div><div><br /></div><div>ನನಗೆ ಆ ಹೊರ್ಡಿಂಗ್ಸ ಹಿಂದೆ ಕೆಲಸ ಮಾಡಿದ ಮನಸ್ಸುಗಳ ಬಗ್ಗೆ ಕುತೂಹಲ ಮೂಡಿತು. ಅವರು ಪ್ರಾಣಿಗಳನ್ನೇ ರೂಪಕಗಳನ್ನಾಗಿ ಯಾಕೆ ಆಯ್ಕೆ ಮಾಡಿಕೊಂಡರು? ಸರಿ, ’ಆನೆ ನಡೆದುದೇ ದಾರಿಯಲ್ತೆ’ ಎಂದು ಆದಿ ಕವಿ ಪಂಪ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದಾನೆ. ಕನ್ನಡದ ಮೂರ್ನಾಕು ಸುದ್ದಿ ಚಾನಲ್ ಗಳು ಈಗಾಗ್ಲೇ ಹಾದಿ ಮಾಡಿಕೊಂಡು ಬಹುದೂರ ಸಾಗಿ ಬಂದಾಗಿದೆ. ಜನಶ್ರೀ ಯಾವ ಹೊಸ ಹಾದಿಯನ್ನು ಮಾಡುತ್ತೆ? </div><div><br /></div><div>ಜನಶ್ರೀ ಆನೆಯ ಅಹಂಕಾರ, ನಡಿಗೆಯ ಗತ್ತು ನೋಡಿ! ’ಸೈಡ್ ಪ್ಲೀಸ್’ ಎಂದು ಆನೆ ಯಾರಿಗೆ ಹೇಳುತ್ತೆ? ಅದು ನಡೆದು ಬರುತ್ತಿರುವ ದಾರಿಯಲ್ಲಿರುವ ಸಣ್ಣಪುಟ್ಟ ಶ್ವಾನಗಳಿಗೆ. ಆ ಶ್ವಾನಗಳ ಮೈ ಬಣ್ಣವನ್ನು ಗಮನಿಸಿ. ಅದು ಈಗಾಗಲೇ ಅಸ್ತಿತ್ವದಲ್ಲಿರುವ ಸುದ್ದಿ ಚಾನಲ್ ಗಳನ್ನು ಪ್ರತಿನಿಧಿಸುತ್ತೆ ಅಲ್ಲವೇ? ಅಲ್ಲಿ ಇನ್ನೂ ಹಲವು ನಾಯಿಗಳಿವೆ ಅವು ಪತ್ರಿಕೆಗಳಿರಬಹುದೇ? ಅಂದರೆ ಜನಶ್ರೀ ದೃಷ್ಟಿಯಲ್ಲಿ ಮಾದ್ಯಮದವರೆಲ್ಲ ನಾಯಿಗಳೇ? ಇಂಥ ಕೀಳುಮಟ್ಟದ ಅಭಿರುಚಿಯಿರುವವರನ್ನು ನಾವು ಯಾವ ಪ್ರಾಣಿಗೆ ಹೋಲಿಸಬಹುದು?</div><div><br /></div><div>ಇಲ್ಲಿ ನನಗೆ ಇನ್ನೊಂದು ಕುತೂಹವಿದೆ. ಈ ಹೋರ್ಡಿಂಗ್ಸ್ ಅನ್ನು ರೂಪಿಸಿದವರಿಗೆ ಹೋಲಿಕೆಗೆ ನಾಯಿಯೇ ಯಾಕೆ ನೆನಪಾಯಿತು? ಈ ಭೂಮಿಯ ಮೇಲೆ ಅನೇಕ ಪ್ರಾಣಿಗಳಿವೆ. ಕತ್ತೆಯಿದೆ, ಕುದುರೆಯಿದೆ, ಹಂದಿಯಿದೆ, ಹೆಗ್ಗಣವಿದೆ, ಇಲಿಯಿದೆ....ಇದನ್ನೆಲ್ಲಾ ಬಿಟ್ಟು ನಾಯಿಯೇ ನೆನಪಾಗಬೇಕಾದರೆ ನಾಯಿಗೂ ಅವರಿಗೂ ಜನ್ಮ ಜನ್ಮಾಂತರದ ಸಂಬಂಧವಿರಲೇಬೇಕು. ಈ ಜನ್ಮದಲ್ಲಿಯೂ ಅವರು ಅನೇಕ ನಾಯಿಗಳನ್ನು ಸಾಕಿರಬೇಕು. ಅದಕ್ಕೆ ಕಾಲ ಕಾಲಕ್ಕೆ ರೊಟ್ಟಿ ಹಾಕಿ ಸಾಕುತ್ತಿರಬೇಕು. ಅವು ಕೂಡಾ ಸ್ವಾಮಿನಿಷ್ಠೆ ತೋರಿಸುತ್ತಿರಬೇಕು. ಸ್ವಾಮಿಜಿಯೊಬ್ಬರು ಪತ್ರಕರ್ತರನ್ನು ನಾಯಿಗಳೆಂದು ಕರೆದು ಇದನ್ನು ಪುಷ್ಟಿಕರಿಸಿದ್ದಾರೆ.ಪತ್ರಕರ್ತರು ಪ್ರಜಾಪ್ರಭುತ್ವದ ಕಾವಲು ನಾಯಿಗಳೆಂದು ತಲೆ ಮಾಸಿದ ಒಂದಷ್ಟು ಪತ್ರಕರ್ತರು ಬಡಬಡಿಸುತ್ತಿರುವುದು ಆನೆಯ ದಪ್ಪ ಚರ್ಮಕ್ಕೂ ತಾಗಿ ಅದು ’ಸೈಡ್ ಪ್ಲೀಸ್’ ಅನ್ನುತ್ತಿರಬಹುದೇ? </div><div><br /></div><div>ಜನಶ್ರೀ ಹೆಸರಿನ ಬಗ್ಗೆನೇ ನನಗೆ ತಕರಾರು ಇದೇರಿ.. ಜನ ಅಂದರೆ ಜನತೆ, ಜನಸಾಮಾನ್ಯರು. ಶ್ರೀ ಅಂದರೆ ಸಂಪತ್ತು. ಜನಸಾಮಾನ್ಯರು ಮತ್ತು ಶ್ರೀಮಂತಿಕೆ ಹ್ಯಾಗ್ರಿ ಒಂದೇ ಕಡೆ ಸೇರುತ್ತೆ? ಇದೇ ಪೆದ್ದು ಪ್ರಶ್ನೆಯನ್ನು ನನ್ನ ಗೆಳೆಯನ ಮುಂದಿಟ್ಟೆ. ಅದಕ್ಕವನು, ಅಯ್ಯೋ ಪೆದ್ದೆ ಜನ ಅಂದ್ರೆ ಜನಾರ್ಧನ ರೆಡ್ಡಿ ಶ್ರೀ ಅಂದ್ರೆ ಶ್ರೀರಾಮುಲು ಅಂದ. ಓ ಅರ್ಥಗರ್ಭಿತವಾಗಿದೆ ನಾಮಧೇಯ, ಅವರಿಬ್ಬರು ಬರುತ್ತಿದ್ದರೆ ಮದಗಜಗಳು ಮೇಲೇರಿ ಬಂದಂತೆ ಎಂದು ನಾನೂ ನಕ್ಕೆ. </div><div><br /></div><div>ನನ್ನ ಗೆಳೆಯ ಚಿತ್ರದಲ್ಲಿ ಖೆಡ್ಡ ಬಿಡಿಸಿದ. ನಿಜವಾದ ಖೆಡ್ಡಾ ತೋಡಬೇಕಾದವರು ಮೌನವಾಗಿದ್ದಾರೆ. ಮೌನಕ್ಕೆ ಅಪಾರ ಶಕ್ತಿ ಇದೆ ಎಂದು ನಂಬಿರುವವಳು ನಾನು. ಒಂದು ದಿನ ಆ ಶಕ್ತಿಯ ಸ್ಫೋಟ ಆಗಲೇ ಬೇಕು. ಈಗ ಆನೆ ಖೆಡ್ಡಾದಲ್ಲಿ ಬೀಳುತ್ತೋ ಇಲ್ವೋ ನನಗೆ ಗೊತ್ತಿಲ್ಲ. ಆದರೆ ಆಲ್ಲಿರುವ ಪತ್ರಕರ್ತರನ್ನು ಗಮನಿಸಿದರೆ ಅದು ಸಕ್ಕರೆಬೈಲಿಗೆ ಹೋಗುವುದರಲ್ಲಿ ಸಂಶಯವಿಲ್ಲ ಅನ್ನಿಸುತ್ತೆ. ಸಕ್ಕರೆಬೈಲ್ ಗೊತ್ತಲ್ಲಾ, ಆನೆ ತರಬೇತಿ ಕೇಂದ್ರ.</div><div><br /></div><div>ಆನೆ ಭೂಮಿಯ ಮೇಲೆ ವಾಸಿಸುತ್ತಿರುವ ಅತಿ ದೊಡ್ಡ ಪ್ರಾಣಿ. ಅದು ಕಾಡಿನಲ್ಲಿರಲಿ, ನಾಡಿನಲ್ಲಿರಲಿ ಅದರ ವಿದ್ವಂಸಕ ಗುಣಗಳಿಂದಾಗಿ ಅದರ ಬಗ್ಗೆ ಜನರಿಗೆ ಒಂದು ರೀತಿಯ ಭಯ ಇದ್ದೇ ಇದೆ. ಅದಕ್ಕೆ ನೆಲ ಕಾಣಿಸುವುದಿಲ್ಲ. ಮದವೇರಿದ ಆನೆಯಂತೂ ತನ್ನೆದುರು ಸಿಕ್ಕಿದ್ದನ್ನೆಲ್ಲಾ ಧ್ವಂಸ ಮಾಡುತ್ತೆ. ಆದರೆ ನಾಯಿ ಹಾಗಲ್ಲ. ಅದು ನೆಲದ ಸಮೀಪ ಇರುತ್ತದೆ. ಬೀದಿ ನಾಯಾಗಿದ್ದರೂ ಅದು ಆ ಬೀದಿಗೆ ನಿಷ್ಠವಾಗಿರುತ್ತದೆ. ಸಾಕು ನಾಯಾಗಿದ್ದರೆ ಮಾಲೀಕನಿಗೆ ನಿಷ್ಠವಾಗಿರುತ್ತದೆ. ಮುಖ್ಯವಾಗಿ ನಾಯಿ ವಾಸನೆಯನ್ನು ಗ್ರಹಿಸುತ್ತದೆ. ಅದಕ್ಕಾಗಿಯೇ ಪೋಲಿಸ್ ಇಲಾಖೆಯಲ್ಲಿ ಅಪರಾದ ತನಿಖೆಗಾಗಿ ಶ್ವಾನದಳವಿದೆ. ಆದರೆ ಆನೆಗೆ ವಾಸನಾಗ್ರಹಿಕೆಯಿಲ್ಲ. </div><div><br /></div><div>ಇದೆಲ್ಲಕ್ಕಿಂತಲೂ ಹೆಚ್ಚಾಗಿ ನಾಯಿಗೆ ಪ್ರೀತಿಸಲು ಬರುತ್ತದೆ. ಅದಕ್ಕೆ ಮನುಷ್ಯನ ಪ್ರೀತಿ ಬೇಕು; ಮನುಷ್ಯನಿಗೂ ಪ್ರೀತಿಸಲು ನಾಯಿ ಬೇಕು. ಆನೆಯಿಂದ ಇವೆರಡನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.</div>Nishada Kanjarihttp://www.blogger.com/profile/00365956604807120745noreply@blogger.com0tag:blogger.com,1999:blog-4261968803082103008.post-14380350709352071812011-02-11T22:04:00.000-08:002011-02-11T22:05:18.381-08:00ಪತ್ರಿಕೋದ್ಯಮದ ಬ್ರೂಟಸ್ ಗಳು<div><br /></div><div><br /></div><div>ಕಳೆದ ಸೋಮವಾರ ಕನ್ನಡಪ್ರಭದ ಸಂಪಾದಕರಾದ ಶಿವಸುಬ್ರಹ್ಮಣ್ಯ ಅವರು ಎಂದಿನಂತೆ ಬೆಳಿಗ್ಗೆ ೧೦ ಘಂಟೆಗೆ ಕೀನ್ಸ್ ರೋಡಿನಲ್ಲಿರುವ ತಮ್ಮ ಅಪೀಸಿಗೆ ಬಂದಿದ್ದಾರೆ. ಕಾರಿನಿಂದ ಇಳಿದು ರಿಸೆಪ್ಷನ್ ಹತ್ತಿರ ತಲುಪುವಾಗಲೇ ಅವರಿಗೆ ಗೊತ್ತಾಯಿತು. ಮೂರನೆಯ ಮಹಡಿಯಲ್ಲಿರುವ ತಮ್ಮ ಅಪೀಸಿನಲ್ಲಿ ಅದಾಗಲೇ ನೂತನ ಸಂಪಾದಕರಾದ ವಿಶ್ವೇಶರಭಟ್ಟರು ಎಡಿಟೋರಿಯಲ್ ಮೀಟಿಂಗ್ ನಡೆಸುತ್ತಿದ್ದಾರೆಂದು.</div><div><br /></div><div>ತನ್ನ ಬೆನ್ನ ಹಿಂದೆಯೇ ಹೀಗೊಂದು ಸಂಚು ನಡೆಯುತ್ತಿದೆಯೆಂಬುದರ ಲವ ಲೇಶವೂ ಅರಿವಿಲ್ಲದ ಅವರಿಗದು ಷಾಕಿಂಗ್ ನ್ಯೂಸ್. ಆದರೂ ಸಾವರಿಸಿಕೊಂಡು ತಮ್ಮ ಚೇಂಬರಿಗೆ ಹೋದವರೇ ರಾಜಿನಾಮೆಯನ್ನು ಬರೆದು ಆಡಳಿತ ಮಂಡಳಿಯ ಮುಂದಿಟ್ಟರು. ರಾಜಿನಾಮೆಯನ್ನು ಒಪ್ಪಿಕೊಳ್ಳದ ಮನೋಜಕುಮಾರ್ ಸಂತಾಲಿಯ ಸಂಧಾನಕ್ಕಾಗಿ ವಿಶ್ವೇಶಭಟ್ಟರನ್ನೇ ಶಿವಸುಬ್ರಹ್ಮಣ್ಯರವರ ಚೆಂಬರಿಗೆ ನುಗ್ಗಿಸಿದರು. ಹವ್ಯಕ ಭಾಷೆಯಲ್ಲೇ ಮಾತು ಪ್ರಾರಂಭಿಸಿದ ಭಟ್ಟರು ಅವರನ್ನು ಒಲಿಸಿಕೊಳ್ಳವ ಪ್ರಯತ್ನ ಮಾಡತೊಡಗಿದರು. ನಂಬಿಕೆ ದ್ರೋಹದ ಕಡು ಕಹಿಯನ್ನುಂಡ ಶಿವಸುಬ್ರಹ್ಮಣ್ಯ ಅಲ್ಲಿಂದ ಎದ್ದು ಬಂದವರೇ ಯಾರಿಗೂ ಸಿಗದೆ ಭೂಗತರಾಗಿಬಿಟ್ಟರು. ಅವರ ಚೇಂಬರಿನಲ್ಲಿ ಅವರದೇ ಆದ ಕೆಲವು ವಸ್ತುಗಳಿದ್ದವು. ಮರುದಿನ ಬೆಳಿಗ್ಗೆ ಆರು ಘಂಟೆಗೆ ಆಪೀಸಿಗೆ ಹೋದವರೇ ಅದನ್ನೆಲ್ಲಾ ತಂದು ಮನೆಯಲ್ಲಿಟ್ಟು ಹೆಗಲ ಮೇಲೆ ಕ್ಯಾಮರಾ ತಗುಲಿಸಿಕೊಂಡು ವನ್ಯದಾಮವೊಂದರತ್ತ ಹೆಜ್ಜೆ ಹಾಕಿದರು.</div><div><br /></div><div> ಕನ್ನಡಪ್ರಭದ ಸಂಪಾದಕ ಹೆಚ್.ಆರ್. ರಂಗನಾಥ್ ಮೂರು ಡಜನ್ ಪತ್ರಕರ್ತರ ಹಿಂಡನ್ನು ಹಿಂದಿಟ್ಟುಕೊಂಡು ಸುವರ್ಣ ನ್ಯೂಸ್ ಚಾನಲ್ ಗೆ ಗುಳೆ ಹೋದಾಗ ಇರುವ ಹುಡುಗರನ್ನೇ ಕಟ್ಟಿಕೊಂಡು ಪತ್ರಿಕೆಯನ್ನು ಜನಪರವಾಗಿ ಮುನ್ನಡೆಸಿದವರು ಇದೇ ಶಿವಸುಬ್ರಹ್ಮಣ್ಯ. ಹಾಗಾಗಿ ಮ್ಯಾನೇಜ್ಮೆಂಟ್ ತನ್ನ ಕೈ ಬಿಡಲಾರದೆಂದು ಅವರು ಬಲವಾಗಿ ನಂಬಿದ್ದರು. ನಂಬಿಕೆ ದ್ರೋಹ ನಡೆದುಹೋಯ್ತು. ಶತಮಾನದ ಇತಿಹಾಸವಿರುವ, ಸದಾ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಬಂದ ಪತ್ರಿಕೆಯೊಂದು ತನ್ನ ಮೌಲ್ಯಗಳನ್ನೆಲ್ಲಾ ಗಾಳಿಗೆ ತೂರಿತ್ತು.</div><div><br /></div><div>ಅದುವರೆಗೆ ಕನ್ನಡಪ್ರಭದಲ್ಲಿ ಶೇ ೨೫ ರಷ್ಟು ಷೇರುಗಳನ್ನು ಹೊಂದಿದ್ದ ಸಂಸದ ರಾಜೀವ ಚಂದ್ರಶೇಖರ್ ಅವರು ಅಂದೇ ಇನ್ನೂ ಶೇ.೫೦ ಷೇರುಗಳನ್ನು ಖರೀದಿಸಿದ್ದರು. ಕನ್ನಡಪ್ರಭದಲ್ಲಿ ಶೇ ೭೫ರಷ್ಟು ಷೇರುಗಳನ್ನು ಹೊಂದಿದ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರಿಗೆ ತಮ್ಮ ಉದ್ಯಮವನ್ನು ವಿಸ್ತರಿಸುವ ’ಸ್ಟಾರ್’ ಪತ್ರಕರ್ತನ ಅವಶ್ಯಕತೆಯಿತ್ತು. ವಿಶ್ವೇಶಭಟ್ಟರಿಗೂ ನೆಲೆಯೊಂದು ಬೇಕಾಗಿತ್ತು.</div><div><br /></div><div>ಇದು ವರ್ತಮಾನದ ವಿಚಾರ. ಭೂತಕಾಲದ ಘಟನೆಯೊಂದನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದೇ ರಾಜೀವ್ ಚಂದ್ರಶೇಖರ್ ಮಲೆಯಾಳಿ ಚಾನಲ್ ಏಷಿಯಾನೆಟ್ ಸಹಭಾಗಿತ್ವದಲ್ಲಿ ಕನ್ನಡದಲ್ಲಿ ಏಷಿಯಾನೆಟ್ ಸುವರ್ಣ ಎಂಬ ಮನೋರಂಜನಾ ಚಾನಲ್ ಆರಂಭಿಸಿದರು. ಈ ಹಿಂದೆ ಏಷಿಯಾನೆಟ್ ನಲ್ಲಿ ಕೆಲಸ ಮಾಡಿದ್ದ ಶಶಿಧರ್ ಭಟ್ ಆ ಚಾನಲ್ ಮುಖ್ಯಸ್ಥರಾದರು. ಅದು ಗುಣಮಟ್ಟದ ಕಾರ್ಯಕ್ರಮ ನೀಡತೊಡಗಿತು. ಇದರಿಂದ ಉತ್ತೇಜಿತರಾದ ಮ್ಯಾನೇಜ್ಮೆಂಟ್ ಆರೇ ತಿಂಗಳಲ್ಲಿ ಸುವರ್ಣ ಸುದ್ದಿವಾಹಿನಿ ಆರಂಭಿಸಿತು.</div><div><br /></div><div>ರಾಜೀವ್ ಚಂದ್ರಶೇಖರ್ ಏಷಿಯಾನೆಟ್ ನಿಂದ ಸುವರ್ಣ ಚಾನಲ್ ಅನ್ನು ಖರೀದಿಸಿದರು. ಅನಂತರ ಸುವರ್ಣ ಮನೋರಂಜನಾ ಚಾನಲ್ ಅನ್ನು ಸ್ಟಾರ್ ಗ್ರೂಫ್ ಗೆ ಮಾರಿದರು. </div><div><br /></div><div>ಅದು ೨೦೦೯ರ ಅಗಸ್ಟ್ ತಿಂಗಳ ಒಂದು ದಿನ ಎಂದಿನಂತೆ ಬೆಳಿಗ್ಗೆ ೯.೩೦ ಘಂಟೆಗೆ ಶಶಿಧರ್ ಭಟ್ ತಮ್ಮ ಅಪೀಸಿಗೆ ಬಂದಿದ್ದಾರೆ. ಚಾನಲ್ ಸಿ.ಇ.ಓ ಸಂಜಯ ಪ್ರಭು. ಶಶಿಧರ್ ಭಟ್ ಅವರನ್ನು ತಮ್ಮ ಚೇಂಬರಿಗೆ ಕರೆಸಿಕೊಂಡವರೇ ನಿಮ್ಮನ್ನು ಚೇರ್ಮನ್ ಅವರ ಮೀಡಿಯಾ ಅಡೈಸರ್ ಆಗಿ ನೇಮಕ ಮಾಡಲಾಗಿದೆ ಎಂದರು. ನಾನು ರಾಜಕಾರಣಿಯೊಬ್ಬರ ಅಧಿಕೃತ ಮೀಡಿಯಾ ಅಡೈಸರ್ ಆಗಿ ಕೆಲಸ ನಿರ್ವಹಿಸಲಾರೆ ಎಂದು ಆ ಹುದ್ದೆಯನ್ನು ಭಟ್ ನಿರಾಕರಿದ್ದಾರೆ. ಆಗ ಅವರನ್ನು ರಾಜೀವ್ ಚಂದ್ರಶೇಖರ್ ಅವರ ಎಲ್ಲಾ ವ್ಯವಹಾರಗಳ ಆಡಳಿತ ಕೇಂದ್ರವಾದ ಜ್ಯುಪಿಟರ್ ಗೆ ವರ್ಗಾವಣೆ ಪ್ರಸ್ತಾಪ ಮಾಡಿದ್ದಾರೆ. ಬದುಕು ನಿರ್ವಹಣೆಗೆ ಸಂಬಳವನ್ನೇ ನೆಚ್ಚಿಕೊಂಡಿದ್ದ ಭಟ್ಟರು ತಾತ್ಕಾಲಿಕವಾಗಿ ಅದನ್ನು ಒಪ್ಪಿಕೊಂಡಿದ್ದಾರೆ. ಆಗ ಅಸಲಿ ವಿಚಾರಕ್ಕೆ ಬಂದ ಸಂಜಯ ಪ್ರಭು ಸುವರ್ಣ ಸುದ್ದಿವಾಹಿನಿ ಮುಖ್ಯಸ್ಥರಾಗಿ ರಂಗನಾಥ್ ಬರುತ್ತಿದ್ದಾರೆಂಬ ಸುದ್ದಿ ಬಹಿರಂಗ ಪಡಿಸಿದ್ದಾರೆ. ಬಟ್ಟರಿಗದು ಶಾಕಿಂಗ್ ನ್ಯೂಸ್; ಎರಡೂ ಕಡೆಯಿಂದಲೂ. ಮ್ಯಾನೇಜ್ಮೆಂಟ್ ಎಂದೂ ನೌಕರರ ಪರವಾಗಿರಲಾರದು. ಆದರೆ ತಮ್ಮ ಮನೆಯಲ್ಲಿ ಒಂದಷ್ಟು ಕಾಲ ಇದ್ದ ಹುಡುಗ ತಮಗೊಂದು ಮಾತೂ ಹೇಳಲಿಲ್ಲ ಎಂಬ ನೋವು ಅವರಿಗುಂಟಾಯಿತು. ಈ ಶಾಕಿನಲ್ಲಿರುವಾಗಲೇ ಸಂಜಯ ಪ್ರಭು ಇನ್ನೊಂದು ಮಾತು ಸೇರಿಸಿದರು, ’ಇಂದು ನೀವು ಮನೆಗೆ ಹೊರಟು ಬಿಡಿ. ರಂಗನಾಥ್ ಮದ್ಯಾಹ್ನದ ಮೇಲೆ ಅಧಿಕಾರ ವಹಿಸಿಕೊಳ್ಳಲು ಬರುತ್ತಿದ್ದಾರೆ. ನಿಮ್ಮ ಮುಖವನ್ನು ನೋಡಲು ಅವರು ಇಷ್ಟಪಡಲಾರರು.’</div><div><br /></div><div>ಭವಿಷ್ಯದಲ್ಲಿ ಸಂಭವಿಸಬಹುದಾದ ಒಂದು ಘಟನೆಯ ಬಗ್ಗೆ ಹೇಳುತ್ತೇನೆ. ಉದಯವಾಣಿಯ ಸಂಪಾದಕರಾಗಿ ಇದೇ ಎಚ್.ಆರ್.ರಂಗನಾಥ್ ಅವರ ಶಿಷ್ಯ, ಕನ್ನಡಪ್ರಭದ ಮಾಜಿ ನೌಕರ, ಸುವರ್ಣದ ಹಾಲಿ ನೌಕರ ರವಿಹೆಗ್ಡೆ ನೇಮಕವಾಗಿದ್ದಾರೆಂದು ಕನ್ನಡಪ್ರಭದ ಮಾಜಿ ನೌಕರ ಸುವರ್ಣ ಸುದ್ದಿವಾಹಿನಿಯ ಹಾಲಿ ನೌಕರ ಜೋಗಿಯವರು ಪೇಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಸುದ್ದಿ ಉದಯವಾಣಿಯ ಹಾಲಿ ಸಂಪಾದಕ ತಿಮ್ಮಪ್ಪ ಭಟ್ಟರಿಗೆ ಗೊತ್ತೇ ಇಲ್ಲ. ಆಡಳಿತ ಮಂಡಳಿಯವರು ಅವರಿಗೆ ಇದುವರೆಗೆ ಏನನ್ನೂ ಹೇಳಿಲ್ಲ. ಅಂದರೆ ಒಂದು ದಿನ ಭಟ್ಟರು ಕೂಡಾ ಮೌನವಾಗಿ ಉದಯವಾಣಿಯ ಮೆಟ್ಟಲಿಳಿದು ಬರಬೇಕಾಗಿದೆ.</div><div><br /></div><div>ಪ್ರತಿಯೊಂದು ಹುದ್ದೆಗೂ ಒಂದು ಸ್ಥಾನ ಗೌರವ ಅನ್ನುವುದಿದೆ. ರಾಜ್ಯಪಾಲರಿರಲಿ, ಸ್ಪೀಕರ್ ಇರಲಿ, ಮುಖ್ಯಮಂತ್ರಿಗಳಿರಲಿ, ನ್ಯಾಯಸ್ಥಾನದಲ್ಲಿ ಕುಳಿತುಕೊಳ್ಳುವ ನ್ಯಾಯಮೂರ್ತಿಗಳಾಗಲಿ, ಒಂದು ಸುದ್ದಿ ಚಾನಲ್ ಮುಖ್ಯಸ್ಥರಿರಲಿ ಅಥವಾ ಪತ್ರಿಕೆಯ ಸಂಪಾದಕರಿರಲಿ ಆ ಸ್ಥಾನದಲ್ಲಿ ಕುಳಿತಾಗ ಅವರು ಕೇವಲ ಒಬ್ಬ ವ್ಯಕ್ತಿಯಾಗಿರುವುದಿಲ್ಲ. ಆ ಹುದ್ದೆಯಲ್ಲಿ ಕುಳಿತು ಕೈಗೊಳ್ಳುವ ತೀರ್ಮಾನಗಳು ನೇರವಾಗಿ ಸಮಾಜದ ಮೇಲೆ ಪರಿಣಾಮ ಬೀರುವಂತದ್ದಾಗಿರುತ್ತದೆ. ಹಾಗಾಗಿ ಒಬ್ಬರನ್ನು ಆ ಸ್ಥಾನಕ್ಕೆ ಎಷ್ಟು ಗೌರವದಿಂದ ಬರಮಾಡಿಕೊಳ್ಳುತ್ತೇವೆಯೋ ಅಷ್ಟೇ ಗೌರವದಿಂದ ಅವರನ್ನು ಬೀಳ್ಕೊಡಬೇಕು. ವಿಜಯ ಕರ್ನಾಟಕದ ಸಂಪಾದಕರಾಗಿದ್ದ ವಿಶ್ವೇಶಭಟ್ಟರ ಮೇಲೆ ಆರೋಪಗಳ ಸರಮಾಲೆ ಇದ್ದರೂ ಟೈಮ್ಸ್ ಗ್ರೂಪಿನವರು, ಭಟ್ಟರು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದಾರೆಂದು ಅವರನ್ನು ಗೌರವದಿಂದ ಬೀಳ್ಕೊಟ್ಟರು. ಅದು ಎಲ್ಲರಿಗೂ ಯಾಕೆ ಸಾಧ್ಯವಾಗುತ್ತಿಲ್ಲ? ಹುದ್ದೆಯ ಗೌರವ ಮತ್ತು ಜವಾಬ್ದಾರಿಯ ಅರಿವಿಲ್ಲದ ಹುಂಬರು ಮಾತ್ರ ರಾಜ್ಯಪಾಲರಿಗೆ ಕಪಾಳ ಮೋಕ್ಷ ಮಾಡುವ ಮಾತಾಡುತ್ತಾರೆ. ಅದು ಕೂಡ ಪ್ರತಾಪ ಸಿಂಹ ಎಂಬ ಯುವಪತ್ರಕರ್ತನ ಬಾಯಿಯಿಂದ ಉದುರುತ್ತದೆ. ಅವರ ಅಭಿಮಾನಿಗಳು ರಾಜ್ಯಪಾಲರನ್ನು ಅರಬ್ಬಿಸಮುದ್ರಕ್ಕೆ ಎಸೆಯಿರಿ, ತಲೆಕೆಟ್ಟಿದೆ ಕಂಕನಾಡಿಗೆ ಸೇರಿಸಿ, ಈಡಿಯೆಟ್ ಎಂದೆಲ್ಲಾ ಪ್ರತಾಪಸಿಂಹರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದನ್ನೆಲ್ಲಾ ಗಮನಿಸುತ್ತಿದ್ದರೆ ವಿಶ್ವೇಶಭಟ್ಟರು ಎಂತಹ ತಳಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ದಿಗಿಲಾಗುತ್ತದೆ.</div><div><br /></div><div>ಪತ್ರಿಕೋದ್ಯಮದ ಇತ್ತೀಚೆಗಿನ ಬೆಳವಣಿಗೆಗಳ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ರಾಮಾಯಣವಾದೀತು! ಇಲ್ಲಿ ಕೊರಳ ಗೆಳೆಯರಾಗಿದ್ದವರು ಜನ್ಮ-ಜನ್ಮಾಂತರದ ವೈರಿಗಳಂತೆ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗುತ್ತಾರೆ. ಪತ್ರಕರ್ತರು ಮನೆ, ಸೈಟ್, ಲ್ಯಾಪ್ ಟ್ಯಾಪ್, ಕಾರು, ತಿಂಗಳ ಪೇಮೆಂಟ್ ಗಳಿಗೆ ತಮ್ಮನ್ನು ಮಾರಿಕೊಳ್ಳುತ್ತಿದ್ದಾರೆ. </div><div><br /></div><div>ಇದನ್ನೆಲ್ಲಾ ಗಮನಿಸುತ್ತಿರುವಾಗ ಇವರು ಭಾವಿ ಪತ್ರಕರ್ತರಿಗೆ ಯಾವ ರೀತಿಯಲ್ಲಿ ಮಾದರಿಗಳಗುತ್ತಿದ್ದಾರೆ? ಯಾವ ಮೌಲ್ಯಗಳನ್ನು ಬಿಟ್ಟು ಹೋಗುತ್ತಿದ್ದಾರೆ ಎಂಬುದನ್ನು ಗಮನಿಸಬೇಕು.ಸಾಮಾಜಿಕ ನ್ಯಾಯಕ್ಕಾಗಿ ಸದಾ ಧ್ವನಿಯೆತ್ತುತ್ತಿದ್ದ ಪ್ರಜಾವಾಣಿಯಂತ ಪತ್ರಿಕೆಯನ್ನೇ ಆಳುವ ಸರಕಾರ ಅಪರೇಷನ್ ಕಮಲಕ್ಕೆ ಒಳಪಡಿಸಿಕೊಂಡಿದೆಯೆಂದ ಮೇಲೆ ಸಾಮಾನ್ಯ ಪತ್ರಕರ್ತ ಆಮಿಷಗಳಿಗೆ ಬಲಿಯಾಗಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.</div><div><br /></div><div>ನನ್ನ ಪರಿಚಿತರೊಬ್ಬರ ಮಗಳ ಕಥೆ ಕೇಳಿ; ಆಕೆಗೆ ರಂಗಭೂಮಿ, ಸಾಹಿತ್ಯ, ಸಂಗೀತದ ಹಿನ್ನೆಲೆಯಿತ್ತು. ಸಿಇಟಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಆಕೆಗೆ ಮೆಡಿಕಲ್, ಇಂಜಿನಿಯರ್ ಓದಲು ಅವಕಾಶ ಸಿಕ್ಕಿದರೂ ಆಸಕ್ತಿಯಿಂದ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದಳು . ತನ್ನ ಬೇರುಗಳು ಇನ್ನಷ್ಟು ಗಟ್ಟಿಯಾಗಲೆಂದು ಕಳೆದ ವರ್ಷ ಕನ್ನಡಪ್ರಭದಲ್ಲಿ ಇಂಟರ್ನ್ಶಿಪ್ ಮಾಡಿದ್ದಳು. ಅಲ್ಲಿನ ಹಿರಿಯ ಪತ್ರಕರ್ತರು ’ನೀನು ಪತ್ರಕರ್ತಳೇ ಆಗು. ಆದರೆ ಕನ್ನಡ ಪತ್ರಕೋದ್ಯಮಕ್ಕೆ ಮಾತ್ರ ಬರಬೇಡ’ ಎಂದು ಹರಸಿ ಕಳುಹಿಸಿದ್ದರು. ಆದರೆ ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ರಾಜಕಾರಣವನ್ನೂ ಮೀರಿ ನಡೆಯುತ್ತಿರುವ ಹೊಲಸುಗಾರಿಕೆಯನ್ನು ನೋಡಿ ಆಕೆ ಜುಗುಪ್ಸೆಗೊಂಡಿದ್ದಾಳೆ. ತನ್ನ ಆಸಕ್ತಿಯನ್ನು ಬದಲಿಸಿಕೊಂಡು ಸೈಕಾಲಾಜಿಯಲ್ಲಿ ಉನ್ನತ ವ್ಯಾಸಂಗ ಮಾಡುವ ನಿರ್ಧಾರ ಕೈಗೊಂಡಿದ್ದಾಳೆ. </div><div><br /></div><div>ಇದನ್ನೆಲ್ಲಾ ಬರೆಯಲು ನನಗೆ ಸ್ಫೂರ್ತಿ ಸಿಕ್ಕಿದ್ದು ಯಾರಿಂದ ಗೊತ್ತಾ? ಕನ್ನಡದ ಸಂವೇದನಾಶೀಲ ಬರಹಗಾರ ಹಾಗೂ ಸಜ್ಜನ ಚಂದ್ರಶೇಖರ ಆಲೂರರಿಂದ. ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಸ್ನಾನದ ಬಗ್ಗೆ ನೀಡಿದ ಅಭಿಪ್ರಾಯಗಳಿಂದ. ಇದರಿಂದ ಅವರು ಎರಡು ಶಕ್ತಿಗಳನ್ನು ಎದುರು ಹಾಕಿಕೊಂಡರು. ಒಂದು ಪ್ರಜಾವಾಣಿಯಂತ ಪತ್ರಿಕೆಯನ್ನು. ಇನ್ನೊಂದು ಸಾಹಿತ್ಯದ ಪ್ರಭಲ ಶಕ್ತಿ ಕೇಂದ್ರಗಳಲ್ಲಿ ಒಂದಾದ ಹೆಗ್ಗೊಡನ್ನು.</div><div><br /></div><div>ಪ್ರತಿಭಟಿಸಬೇಕಾದ ಸಂದರ್ಭದಲ್ಲಿ ಕೂಡಾ ಮೌನವಾಗಿದ್ದರೆ ಅದು ವ್ಯವಸ್ಥೆಯನ್ನು ಪೋಷಿಸಿದಂತಾಗುತ್ತದೆ. ಪ್ರತಿಭಟನೆಯಿಂದ ಯಾವ ಪ್ರಯೋಜನವೂ ಆಗದೇ ಇರಬಹುದು. ಆದರೆ ಪ್ರತಿಭಟನೆ ನಮ್ಮ ಸಂವಿಧಾನಿಕ ಹಕ್ಕು. ಅದು ಪ್ರಜಾಪ್ರಭುತ್ವದ ಜೀವಾಳ. </div><div><br /></div>Nishada Kanjarihttp://www.blogger.com/profile/00365956604807120745noreply@blogger.com1tag:blogger.com,1999:blog-4261968803082103008.post-67726192792114899042010-12-23T18:28:00.000-08:002010-12-23T18:29:36.820-08:00ವಿಶ್ವೇಶಭಟ್ಟರು ಹೋದರು ಶಶಿಧರ್ ಭಟ್ಟರು ಬಂದರು !ಕಳೆದ ವಾರ ವಿಜಯಕರ್ನಾಟಕದ ಸಂಪಾದಕರಾಗಿದ್ದ ವಿಶ್ವೇಶಭಟ್ಟರು ರಾಜೀನಾಮೆ ಕೊಟ್ಟಾಗ ನನ್ನ ಗೆಳತಿಯೊಬ್ಬಳು ಪ್ರತಿಕ್ರಿಯಿಸಿದ್ದು ಹೀಗೆ; ಇದು ಪತ್ರಿಕೋದ್ಯಮದ ನೈತಿಕತೆಗೆ ಸಿಕ್ಕಿದ ಜಯ.<br /><br />ಈ ಮಾತು ಸ್ವಲ್ಪ ಅತಿಶಯೋಕ್ತಿ ಎನಿಸಿದರೂ ಇತ್ತೀಚಿಗಿನ ವರ್ಷಗಳಲ್ಲಿ ಪತ್ರಿಕಾರಂಗವು ಒಂದು ಉದ್ಯಮವಾಗಿ ಬೆಳೆದ ಬಗೆ ಮತ್ತು ಅದರ ಲಾಭಾಂಶವನ್ನು ಪಡೆಯುತ್ತಿರುವ ದೊಡ್ಡ ಪಡೆ ಸೃಷ್ಟಿಯಾಗಿರುವುದನ್ನು ಗಮನಿಸಿದಾಗ ಇದರಲ್ಲಿ ಹುರುಳಿದೆ ಎನಿಸದಿರದು.<br /><br />ಪ್ರಜಾಪ್ರಭುತ್ವದ ಮೂರು ಸ್ತಂಭಗಳಾದ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಾಂಗಗಳ ಜೊತೆಗೆ ಪತ್ರಿಕಾರಂಗವನ್ನು ನಾಲ್ಕನೆಯ ಸ್ತಂಬವೆಂದು ಪರಿಗಣಿಸಲಾಗುತ್ತದೆ. ಪ್ರಜಾಪ್ರಭುತ್ವದ ಉಳಿವಿಗೆ ಈ ನಾಲ್ಕು ಸ್ತಂಭಗಳು ಒಟ್ಟಾಗಿ ಕೆಲಸ ಮಾಡಬೇಕು. ಆದರೆ ಹಾಗಾಗುತ್ತಿದೆಯೇ?<br /><br />ಆಳುವ ದೊರೆಗಳು ದಾರಿ ತಪ್ಪಿದಾಗ ಜನ ಮಾಧ್ಯಮದತ್ತ ನೋಡುತ್ತಾರೆ. ಆದರೆ ಸಮಾಜದ ಸಾಕ್ಷಿಪ್ರಜ್ನೆಯಂತೆ ಕೆಲಸ ಮಾಡಬೇಕಾದ ಮಾಧ್ಯಮಗಳು ಒಂದು ಪಕ್ಷದ, ಒಂದು ವ್ಯಕ್ತಿಯ ತುತ್ತೂರಿಯಾಗಿಬಿಟ್ಟರೆ....?ಪತ್ರಕರ್ತರು ವೈಯಕ್ತಿಕ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು, ಹೆಣ್ಣು -ಹೊನ್ನು-ಮಣ್ಣನ್ನು ಪುಕ್ಕಟೆಯಾಗಿ ಪಡೆದುಕೊಳ್ಳಲು ಮಾಧ್ಯಮವನ್ನು ಅಸ್ತ್ರದಂತೆ ಬಳಸತೊಡಗಿದರೆ....?ಗುಂಪುಗಾರಿಕೆ, ಸ್ವಜನಪಕ್ಷಪಾತದಲ್ಲಿ ರಾಜಕಾರಣಿಗಳನ್ನೂ ಮೀರಿಸತೊಡಗಿದರೆ.....?ಜನರು ಮಾಧ್ಯಮವನ್ನು ಸಂಶಯದಿಂದಲೇ ನೋಡುತ್ತಾರೆ. ಸಾಮಾಜೀಕ ನ್ಯಾಯ ಎಂಬ ಪರಿಕಲ್ಪನೆಯೇ ಹುಸಿಯಾಗುತ್ತದೆ.<br /><br />ರಾಡಿಯಾ ಟೇಪ್ ಹಗರಣದಿಂದ ಹಿಡಿದು ವಿಶ್ವೇಶಭಟ್ಟರ ರಾಜೀನಾಮೆ ಪ್ರಕರಣದವರೆಗೆ ಜನ ಮುಕ್ತವಾಗಿ ಮಾತಾಡುತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಎಗ್ಗಿಲ್ಲದೆ ಹರಿಯಬಿಡುತ್ತಿದ್ದಾರೆ. ಆದರೆ ಮಾಧ್ಯಮ ಇದರ ಬಗ್ಗೆ ಮುಗುಮ್ಮಾಗಿ ಮುಸುಕು ಹೊದ್ದು ಕುಳಿತಿದೆ. ತಮ್ಮ ಸ್ವಂತದ ಪೇಸ್ ಬುಕ್, ಬ್ಲಾಗ್ ಗಳಲ್ಲಿಯೂ ಬರೆಯಲೂ ಹೆದರುತ್ತಿದ್ದಾರೆ. ರಾಜಕಾರಣಿಗಳಂತೂ ಪತ್ರಕರ್ತರ ಸಹವಾಸದಿಂದಲೇ ದೂರವಿದ್ದರೆ ಒಳಿತು ಎಂಬಂತೆ ವರ್ತಿಸುತ್ತಿದ್ದಾರೆ. ಮಾಧ್ಯಮ ಟೆರರಿಸಂ ಎಂದರೆ ಇದೇ ಇರಬಹುದೇ?<br /><br />ಇಂತಹ ಸನ್ನಿವೇಶದಲ್ಲಿ ’ಸಮಯ ನ್ಯೂಸ್’ ವಾಹಿನಿಯ ಮುಖ್ಯಸ್ಥರಾಗಿ ಹಿರಿಯ ಪತ್ರಕರ್ತ ಶಶಿಧರ್ ಭಟ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಭಟ್ಟರು ’ಸುವರ್ಣ ನ್ಯೂಸ್’ ಚಾನಲ್ ಅನ್ನು ಕಟ್ಟಿ ಬೆಳೆಸಿದ್ದರು. ಅನಂತರ ಅದನ್ನು ಎಚ್.ಆರ್. ರಂಗನಾಥ್ ಆಕ್ರಮಿಸಿಕೊಂಡಿದ್ದರು.<br /><br /> ಸುವರ್ಣ ನ್ಯೂಸ್ ಚಾನಲ್ ಆರಂಭಗೊಂಡಾಗ ಭಟ್ಟರು ಸೂತ್ರದ ಗೊಂಬೆಯಂತಿದ್ದರು. ಅವರಿಗೆ ಯಾವ ಅಧಿಕಾರವೂ ಇರಲಿಲ್ಲ. ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರುವ ಉದ್ಯಮಿ ರಾಜೀವ ಚಂದ್ರಶೇಖರ ಚಾನಲ್ ಮಾಲೀಕರಾಗಿದ್ದರು. ಹಿರಿಯ ನಟಿ ಮೈನಾವತಿ ಮಗ ಶ್ಯಾಮಸುಂದರ್ ಸಿಇಓ ಆಗಿದ್ದರು. ಅವರ ನಿಧನದ ನಂತರ ಸಿಇಓ ಆಗಿ ಬಂದವರು ಸಂಜಯಪ್ರಭು. ಅವರಿಗೆ ಕನ್ನಡ ಬಾರದು. ಕನ್ನಡ ಬಾರದ ಮಾಲೀಕ ಮತ್ತು ಸಿಇಓ. ಅವರ ದೃಷ್ಟಿಯಲ್ಲಿ ಪತ್ರಕರ್ತರು ಕೂಡಾ ಕಾರ್ಮಿಕರೇ.<br /> ಚಾನಲ್ ನಲ್ಲೇ ಗುಂಪುಗಳಾದವು. ಭಟ್ಟರ ವಿರುದ್ಧ ಗುಂಪನ್ನು ಸಿಇಓ ಎತ್ತಿಕಟ್ಟಿದರು. ಈ ಸಮಯದಲ್ಲೇ ಕನ್ನಡಪ್ರಭದ ರಂಗನಾಥ್ ಚಾನಲ್ ಮುಖ್ಯಸ್ಥರಾದರು. ಪತ್ರಕರ್ತರಾಗಿದ್ದೂ ಬ್ಯುಸಿನೆಸ್ ಮ್ಯಾನ್ ಆಗಿರುವ ರಂಗನಾಥ್ ಮಾಲೀಕರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುತ್ತಾ ಪರಸ್ಪರ ಆಸರೆಯಾಗತೊಡಗಿದರು. ಶಶಿಧರ್ ಭಟ್ ರನ್ನು ಜ್ಯುಪಿಟರ್ ಗೆ ವರ್ಗಯಿಸಲಾಯ್ತು. ಕನ್ನಡಪ್ರಭದಿಂದ ಜೋಗಿ, ರವಿಹೆಗ್ಡೆ, ಉದಯ ಮರಕಿಣಿ ಸೇರಿದಂತೆ ಸುಮಾರು ೫೦ ಜನರ ದಂಡು ಸುವರ್ಣಕ್ಕೆ ಧಾಳಿಯಿಟ್ಟಿತು. ಖರ್ಚು ದುಪ್ಪಟ್ಟಾಯಿತು. ಕೆಲಸವಿಲ್ಲದೆ ಕುಳಿತ್ತಿದ್ದ ಭಟ್ಟರು ಸುವರ್ಣ ಗ್ರೂಪ್ ಬಿಟ್ಟು ಹೊರನಡೆದರು.<br /><br />ಈಗ ಶಶಿದರ್ ಭಟ್ ಸಮಯ ನ್ಯೂಸ್ ಚಾನಲ್ ಹೆಡ್ ಆಗಿ ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ಈಗ ಅವರು ಸುವರ್ಣ ನ್ಯೂಸ್ ಚಾನಲ್ ನಲ್ಲಿದ್ದಂತೆ ನಿರಾಯುಧರಲ್ಲ. ಶಸ್ತ್ರ ಸಜ್ಜಿತರಾಗಿ ಬಂದಿದ್ದಾರೆ. ಜೊತೆಗೆ ಕೈಯಲ್ಲಿ ಕತ್ತರಿ ಇದೆ.<br />ಅಲ್ಲಿ ವಿಜಯಕರ್ನಾಟಕದಲ್ಲಿ ತಾತ್ಕಾಲಿಕ ಸಂಪಾದಕರಾಗಿರುವ ಇ. ರಾಘವನ್ ಅವರು ಶುದ್ಧಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೊಸ ಸಂಪಾದಕರ ಆಗಮನವನ್ನು ಪತ್ರಿಕೆ ಕಾಯುತ್ತಿದೆ. ಕಳಂಕ ರಹಿತ, ಪ್ರಾಮಾಣಿಕ ಪತ್ರಕರ್ತರಾದ ದಿನೇಶ್ ಅಮಿನಮಟ್ಟು ಹೆಸರು ಮುಂಚೂಣಿಯಲ್ಲಿದೆ. ಅವರು ಆ ಹುದ್ದೆಯನ್ನು ಅಲಂಕರಿಸಿದರೆ ನಿಜವಾಗಿಯೂ ನಿಶಾದ ಕಂಜರಿ ಖುಷಿ ಪಡುತ್ತಾಳೆ.<br /><br />ದೃಶ್ಯ ಮಾಧ್ಯಮದಲ್ಲಿ ಶಶಿಧರ್ ಭಟ್, ಮುದ್ರಣ ಮಾಧ್ಯಮದಲ್ಲಿ ಅಮಿನಮಟ್ಟು. ಆಗ ನನ್ನ ಗೆಳತಿ ಹೇಳಿದ ಮಾತು ನಿಜವಾಗುತ್ತದೆ ’ಇದು ಪ್ರಾಮಾಣಿಕ ಪತ್ರಿಕೋಧ್ಯಮಕ್ಕೆ ಸಿಕ್ಕ ನೈತಿಕ ಜಯ’<br />ಆದರೆ ಹಾಗಾಗುತ್ತದೆಯೇ? ಕಷ್ಟ ಸಾಧ್ಯ.<br />ಯಾಕೆಂದರೆ ಕನ್ನಡ ಪತ್ರಿಕೋದ್ಯಮ ತುಂಬಾ ಚಿಕ್ಕ ಕ್ಷೇತ್ರ. ಕಳಂಕಿತರೆಲ್ಲಾ ಮತ್ತೆ ಆಯಕಟ್ಟಿನ ಜಾಗಗಳನ್ನು ಹುಡುಕಿಕೊಳ್ಳುತ್ತಿರುವ ವಿಚಾರ ನಿಷಾದ ಕಂಜರಿಗೆ ಗೊತ್ತಾಗಿದೆ. ಇರಲಿ. ಭೂಮಿ ಗುಂಡಗಿದೆ. ಎಲ್ಲಾದರೂ ಒಂದು ಕಡೆ ನಾವು ಸಂಧಿಸಲೇ ಬೇಕು!Nishada Kanjarihttp://www.blogger.com/profile/00365956604807120745noreply@blogger.com0tag:blogger.com,1999:blog-4261968803082103008.post-80223366522229908422010-06-23T03:57:00.001-07:002010-06-23T03:57:55.692-07:00ಬ್ರೇಕಿಂಗ್ ನ್ಯೂಸ್; ಸುವರ್ಣದಿಂದ ಶಶಿಧರ್ ಭಟ್ ಹೊರಕ್ಕೆ....?ಕೊನೆಗೂ ಎಚ್ ಆರ್ ರಂಗನಾಥ್ ಶಶಿಧರ್ ಭಟ್ ಅವರನ್ನು ಸುವರ್ಣ ಗ್ರೂಪಿನಿಂದ ಹೊರದೂಡುವುದರಲ್ಲಿ ಯಶಸ್ವಿಯಾಗಿದ್ದಾರೆ.<br /><br />ಇವತ್ತು ಬೆಳಿಗ್ಗೆ ಭಟ್ಟರನ್ನು ಅವರ ಅಪೀಸಿನಲ್ಲಿ ಕಂಡ ಸಿ.ಇ. ಒ ಸಂಜಯ ಪ್ರಭು, ನಿಮ್ಮ ಮೇಲೆ ಸುವರ್ಣ ನ್ಯೂಸ್ ಮುಖ್ಯಸ್ಥರಾದ ರಂಗನಾಥ್ ಹತ್ತು ಆರೋಪಗಳನ್ನು ಮಾಡಿದ್ದಾರೆ. ಅದಕ್ಕಾಗಿ ನೀವು ವಿಚಾರಣೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿದರಂತೆ. ಅದಕ್ಕೆ ಭಟ್ಟರು, ನೀವು ಅವರನ್ನು ನಂಬುತ್ತಿರಿ ಅಂದ ಮೇಲೆ ನಾನು ನನ್ನನ್ನು ಸಮರ್ಥಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಎಂದು ಸಂಸ್ಥೆಯಿಂದ ಹೊರಬಂದಿದ್ದಾರೆ.<br /><br /> ಭಟ್ಟರನ್ನು ಹೊರಹಾಕಲು ರಂಗನಾಥನಿಗೆ ಸಿಕ್ಕ ಪ್ರಮುಖ ಕಾರಣವೇನು ಗೊತ್ತಾ? ಸಮಯ ನ್ಯೂಸ್ ಚಾನಲ್ ನ ಉದ್ಘಾಟನೆಯಂದು ಅದರ ಮಾಲೀಕರಾದ ಜಾರಕಿ ಹೊಳೆಯವರು ಭಟ್ಟರನ್ನು ಕೃತಜ್ನತೆಯಿಂದ ಸ್ಮರಿಸಿಕೊಂಡದ್ದು. ಕೃತಜ್ನತೆ ಎಂದರೆನೆಂಬುದು ರಂಗನಾಥನಿಗೆ ಅರ್ಥವಾಗದ ಪದ [ಹೆಚ್ಚಿನ ವಿವರಕ್ಕೆ ಇದೇ ಬ್ಲಾಗಿನಲ್ಲಿ ’ರಂಗನಾಥನೆಂಬ ಸಂಕೇತಿಯೂ ಶಶಿಧರ ಭಟ್ಟರೂ..” ಎಂಬ ಪೋಸ್ಟ್ ಅನ್ನು ನೋಡಿ] ಸುಮಾರು ಹನ್ನೆರಡು ವರ್ಷಗಳ ಹಿಂದೆ-ಆಗ ಭಟ್ಟರು ಝೀ ಟೀವಿ ಮಾಲಕತ್ವದ ಕಾವೇರಿ ಚಾನಲ್ ನ ಮುಖ್ಯಸ್ಥರಾಗಿದ್ದರು-] ಜಾರಕಿ ಹೊಳೆಯವರ ಕೋರಿಕೆಯ ಮೇರೆಗೆ ಕನ್ನಡದಲ್ಲಿ ಚಾನಲ್ಲೊಂದನ್ನು ಪ್ರಾರಂಭಿಸುವುದರ ಕುರಿತಾಗಿ ವಿವರವಾದ ಯೋಜನಾ ವರಧಿಯೊಂದನ್ನು ಸಲ್ಲಿಸಿದ್ದರು. ಸಮಯ ಚಾನಲ್ ಆರಂಭಿಸುವುದಕ್ಕೆ ಅದೇ ತಮಗೆ ಸ್ಪೂರ್ತಿಯಾಗಿತ್ತು ಎಂದು ಅವರು ಕೃತಜ್ನತೆಯಿಂದ ನೆನೆಸಿಕೊಂಡಿದ್ದಾರೆ. ಅದು ಸಮಯ ಚಾನಲ್ ನಲ್ಲಿ ಪ್ರಸಾರವಾಗಿದೆ.<br /><br />ರಂಗನಾಥ್ ಜಾರಕಿಹೊಳೆಯವರ ಭಾಷಣವನ್ನು ಎಡಿಟ್ ಮಾಡಿಸಿ ಸುವರ್ಣದ ಮಾಲಕರಾದ ರಾಜೀವ್ ಚಂದ್ರಶೇಖರ್ ಅವರಿಗೆ ಕಳುಹಿಸಿದ್ದಾರೆ. ಅದರ ಜೊತೆಗೆ ಭಟ್ಟರ ಮೇಲೆ ಹತ್ತು ಅಪಾದನೆಗಳನ್ನು ಹೊರಿಸಿದ್ದಾರೆ. ಅದರ ಮುಖ್ಯ ತಿರುಳೆಂದರೆ ಭಟ್ಟರು ಚಾನಲ್ಲಿನಲ್ಲಿ ಇದ್ದುಕೊಂಡೇ ಅದರ ಅದಪತನಕ್ಕೆ ಹೇಗೆ ಕಾರಣರಾಗುತ್ತಿದ್ದಾರೆ ಎಂಬುದು. ಕನ್ನಡದ ಗಂಧ ಗಾಳಿಯೂ ಗೊತ್ತಿಲ್ಲದ ಸುವರ್ಣದ ಮುಖ್ಯಸ್ಥರಿಗೆ ರಂಗನಾಥ ಹೇಳಿದುದೆಲ್ಲಾ ವೇದ ವಾಕ್ಯವಾಗುತ್ತಿದೆ.<br /><br /> ಪತ್ರಿಕಾರಂಗವನ್ನು ಉದ್ಯಮವೆಂದು ಪರಿಗಣಿಸುವವರಿಗೆ ಪತ್ರಕರ್ತರು ಮತ್ತುದಲ್ಲಾಳಿಗಳ ನಡುವೆ ವ್ಯತ್ಯಾಸ ಗೊತ್ತಾಗಲಾರದು. ಅದರ ಪ್ರಯೋಜನವನ್ನು ಈಗಿನ ಬಹಳಷ್ಟು ಪತ್ರಕರ್ತರು ಪಡೆಯುತ್ತಿದ್ದಾರೆ. ಈ ಬೆಳವಣಿಗೆ ಪತ್ರಿಕಾರಂಗವನ್ನು ಸೇವಾಕ್ಷೇತ್ರವೆಂದು ಈಗಲೂ ನಂಬಿರುವ ಕೆಲವು ಮನಸ್ಸುಗಳಿಗಾಗುತ್ತಿರುವ ಆಘಾತ.Nishada Kanjarihttp://www.blogger.com/profile/00365956604807120745noreply@blogger.com0tag:blogger.com,1999:blog-4261968803082103008.post-58947271718876076342010-04-01T11:09:00.000-07:002010-04-01T22:17:08.114-07:00ಜೋಕರ್ ಗಳಾದ ಜರ್ನಲಿಸ್ಟ್ ಗಳು<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEha9b0RtheY3cpye-ec9_GvA-hKPJHvPByA0PxuiWEgDhRmCh549gJW3fMgrKB8qdZLz7q52oDgLkJ4hdwE5-YdB_Pfwf4ZXtnMoNkE2-Ii9O9ZjKqxpXAE0ilo1vdS8Oa0Lo_V_jGFcZep/s1600/April-Fool-s-Day-25.gif"><img style="display:block; margin:0px auto 10px; text-align:center;cursor:pointer; cursor:hand;width: 284px; height: 320px;" src="https://blogger.googleusercontent.com/img/b/R29vZ2xl/AVvXsEha9b0RtheY3cpye-ec9_GvA-hKPJHvPByA0PxuiWEgDhRmCh549gJW3fMgrKB8qdZLz7q52oDgLkJ4hdwE5-YdB_Pfwf4ZXtnMoNkE2-Ii9O9ZjKqxpXAE0ilo1vdS8Oa0Lo_V_jGFcZep/s320/April-Fool-s-Day-25.gif" border="0" alt="" id="BLOGGER_PHOTO_ID_5455233362609041410" /></a><br /><div><br /></div><div><br /></div><div><br /></div><div>ಇಂದು ಏಪ್ರಿಲ್ ೧. ಮೂರ್ಖರ ದಿನವಂತೆ. ಅಂತೆ ಎನ್ನಲು ಕಾರಣವಿದೆ. ಈಗ ಯಾರೂ ಮೂರ್ಖರ ದಿನ ಆಚರಿಸುವುದಿಲ್ಲ. ಅದು ಅಪ್ರಬುದ್ಧರ ಬಾಲಿಷ ಆಚರಣೆ; ಏನೂ ಮಾಡಲು ಕೆಲಸವಿಲ್ಲದವರು ಹೊತ್ತು ಕಳೆಯಲು ಆಡುವ ಮೋಜಿನಾಟ ಇದು. ಅಂತಹ ಮೋಜಿನಾಟವನ್ನು ಇಂದು ಕನ್ನಡದ ಸುದ್ದಿ ಚಾನಲ್ಲೊಂದು ಆಡಿತು.</div><div><br /></div><div>ಜಗತ್ತಿನ ಆಗುಹೋಗುಗಳ ಬಗ್ಗೆ ಆಸಕ್ತಿಯಿರುವ ಬಹುತೇಕ ಮಂದಿ ಪ್ರೈಮ್ ಟೈಮ್ ನಲ್ಲಿ ಬರುವ ಸುದ್ದಿಯನ್ನು ವೀಕ್ಷಿಸುತ್ತಾರೆ. ನಾನು ಕೂಡಾ ಇಂದು ೭ ಘಂಟೆಗೆ ಟೀವಿ ಆನ್ ಮಾಡಿದೆ. ’ ಜನಾರ್ಧನ ರೆಡ್ಡಿ ರಾಜಿನಾಮೆ, ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ; ಕೇಂದ್ರ ನಾಯಕರ ಸಭೆ’ ಎಂಬ ಬ್ರೇಕಿಂಗ್ ನ್ಯೂಸ್ ಸ್ಕ್ರೋಲಿಂಗ್ ಆಗುತ್ತಿತ್ತು. </div><div><br /></div><div>ಸಂಜೆಯ ಜಡತ್ವ, ಆಲಸಿತನ ಎಲ್ಲವೂ ತಟ್ಟನೆ ಹಾರಿ ಹೋಗಿ ಕಣ್ಣು, ಕಿವಿ ಚುರುಕಾಯಿತು. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಚಾನಲ್ ಗಳನ್ನೆಲ್ಲಾ ಜಾಲಾಡಿದೆ. ಎಲ್ಲಿಯೂ ಆ ಸುದ್ದಿಯ ಸುಳಿವೇಇಲ್ಲ. ಪುನಃ ಅದೇ ಚಾನಲಿಗೆ ಬಂದಾಗ ದೇವೆಗೌಡರು ಪೋನೊದಲ್ಲಿದ್ದರು. ಆ ಮಾತಿನ ವರಸೆ ಕೇಳಿದಾಗ, ಇದು ಗೌಡರಲ್ಲವಲ್ಲಾ ಎನಿಸುತ್ತಿತ್ತು. ಮುಂದೆ ದೇಶಪಾಂಡೆ ಪೋನಿಗೆ ಬಂದರು. ಸಂಶಯ ಹೆಚ್ಚಾಯಿತು. ಖರ್ಗೆ ಪೋನಿಗೆ ಬಂದಾಗ ಇದು ಚಾನಲ್ ನವರು ವಿಕ್ಷಕರನ್ನು ಫೂಲ್ ಮಾಡಲು ನಡೆಸಿದ ಮೂರ್ಖರಾಟ ಎಂದು ಕನ್ಫರ್ಮ್ ಆಯ್ತು. ’ಥೂ ಇವ್ರಾ’ ಎಂದು ಪತ್ರಿಕೋದ್ಯಮದ ಬೇಜವಾಬ್ದರಿತನದ ಬಗ್ಗೆ ಗೊಣಗಿಕೊಂಡೆ. ಅದನ್ನು ಆಲಿಸಿದ ಪಕ್ಕದ ಮನೆಯ ಎಂಟನೆ ಕ್ಲಾಸಿನ ಚೇತೂ ’ನಾವೇ ಏಪ್ರೀಲ್ ಫೂಲ್ ಮಾಡೊಲ್ಲ. ಅವರಿಗೆ ಬುದ್ಧಿ ಇಲ್ವಾ ಆಂಟಿ?’ ಎಂದು ಪ್ರಶ್ನಿಸಿದ. </div><div><br /></div><div>ಪತ್ರಿಕೆಯಲ್ಲಿ, ಸುದ್ದಿ ಚಾನಲ್ ಗಳಲ್ಲಿ ತಪ್ಪುಗಳಾಗುವುದು ಸಾಮಾನ್ಯ. ಇದೊಂದು ಟೀಮ್ ವರ್ಕ್. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ತಲೆ ದಂಡ ತೆರಬೇಕಾಗುತ್ತದೆ. ಆದರೆ ಚಾನಲ್ ಮುಖ್ಯಸ್ಥರೆ ಇಂತಹ ಬೇಜವಾಬ್ದಾರಿತನಕ್ಕೆ ಬೆಂಗಾವಲಾಗಿ ನಿಂತರೆ..?ಅವರೇ ಹಿಂದೆ ಕುಳಿತು ಇದನ್ನೆಲ್ಲಾ ಎಂಜಾಯ್ ಮಾಡುತ್ತಿದ್ದುದು ವೀಕ್ಷಕರಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಅವರು ನೀಡುವ ಸುದ್ದಿ ಯಾವ ಪರಿಣಾಮವನ್ನುಂಟು ಮಾಡಬಹುದೆಂಬ ಕನಿಷ್ಟ ಅರಿವಿದ್ದಿದ್ದರೆ ಹೀಗಾಗುತ್ತಿರಲಿಲ್ಲ.</div><div><br /></div><div> ಏಪ್ರಿಲ್ ೧ರಂದು ಓದುಗರನ್ನು ಮೂರ್ಖರನ್ನಾಗಿ ಮಾಡುವ ಕೆಟ್ಟ ಚಾಳಿ ಆರಂಭಿಸಿದ ಕೀರ್ತಿ ಸೇರಬೇಕಾದ್ದು ಈಶ್ವರ ದೈತೋಟರಿಗೆ ಅವರು ಸಂಪಾದಕರಾಗಿದ್ದಾಗ ಇಡೀ ಉದಯವಾಣಿಯನ್ನು ಮೂರ್ಖರವಾಣಿಯನ್ನಾಗಿ ಮಾಡಿದ್ದರು. ಈಗ ’ಕನ್ನಡಪ್ರಭ’ ಕೂಡ ಓದುಗರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದೆ. ಇವತ್ತಿನ ’ಕನ್ನಡಪ್ರಭ’ದ ಮುಖಪಟ ವರಧಿ; ”ಬಿಬಿಎಂಪಿ ಫಲಿತಾಂಶ ಈಗ ಅತಂತ್ರ, ಮರು ಚುನಾವಣೆ? ಮತಯಂತ್ರ ಹಾನಿ,ದತ್ತಾಂಶ ನಾಶ?” ಎಂದು ಹೊಡೆದು ಮಲಗಿಸಿದೆ.</div><div><br /></div><div>ಇವರೆಲ್ಲಾ ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ? ಇವರಿಗೆಲ್ಲಾ ಅದೇ ಕೆಲಸವಾಗಿರಬಹುದು. ಆದರೆ ವೀಕ್ಷಕರಿಗಲ್ಲ; ಓದುಗರಿಗಲ್ಲ. ಅವರ ಸಮಯ ಅಮೂಲ್ಯವಾದುದು. ಹಾಗಾಗಿ ಜವಾಬ್ದಾರಿ ಸ್ಥಾನದಲ್ಲಿರುವವರು ಏಪ್ರಿಲ್ ಫೂಲ್ ಮಾಡಲು ಹೊರಟರೆ ಅವರ ಬಗ್ಗೆ ಮರುಕ ಹುಟ್ಟುತ್ತದೆ</div>Nishada Kanjarihttp://www.blogger.com/profile/00365956604807120745noreply@blogger.com0tag:blogger.com,1999:blog-4261968803082103008.post-74961512466626383722010-02-16T09:35:00.000-08:002010-02-16T09:36:15.271-08:00ಮುತಾಲಿಕ್ ಮುಖಕ್ಕೆ ಮಸಿ, ಅವಮಾನ ಆಗಿದ್ದು ಯಾರಿಗೆ?ಇಂದು ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಕೆಲ ಕಿಡಿಗೇಡಿಗಳು ಗಾಂದೀಜಿಯ ಪ್ರತಿಮೆಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಿದರು. <br />ಮೊನ್ನೆ ಶುಕ್ರವಾರ ಮುತಾಲಿಕ್ ಮುಖಕ್ಕೆ ಮಸಿ ಬಳಿದ ಮರುದಿನ ಗದಗ ಹೊತ್ತಿ ಉರಿಯಿತು. ಸಹಕಾರಿ ಧುರಿಣ, ಮಾಜಿ ಸಚಿವ, ಹುಲಿಕೋಟೆಯ ಹುಲಿ ಎಂದೇ ಪ್ರಖ್ಯಾತರಾದ ದಿ. ಕೆ. ಎಚ್. ಪಾಟೀಲ್ ಪುತ್ಥಳಿಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಲಾಯ್ತು.<br /><br />ಹಾಗೆಂದು ನಾವು ಬರೆಯುತ್ತೇವೆ. ಆದರೆ ಅವಮಾನ ಆಗಿದ್ದು ಯಾರಿಗೆ?<br /><br />ವ್ಯಾಲೆಂಟೈನ್ ಡೇ ಪ್ರಯುಕ್ತ ಖಾಸಗಿ ಚಾನಲ್ಲೊಂದು ಭಾನುವಾರ ಪ್ರಸಾರ ಮಾಡಲೆಂದು ಗುರುವಾರ ’ಪ್ರೇಮ ಯುದ್ಧ’ ಎಂಬ ಕಾರ್ಯಕ್ರಮವನ್ನು ಸಂಸ ಬಯಲು ರಂಗಮಂದಿರದಲ್ಲಿ ಚಿತ್ರಿಕರಿಸಿಕೊಳ್ಳುತ್ತಿತ್ತು. ಅಹ್ವಾನಿತ ಪ್ರೇಕ್ಷಕರ ನಡುವೆ ಖಾಸಗಿಯಾಗಿ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷ ಮುತಾಲಿಕ್ ಮುಖಕ್ಕೆ ಕೆಲ ಕಿಡಿಗೇಡಿಗಳು ಮಸಿ ಬಳೆದರು. ವೇದಿಕೆ ಮೇಲಿದ್ದ ಇತರ ಗಣ್ಯ ಅಥಿತಿಗಳಾಗಿದ್ದ ಜನವಾದಿ ಸಂಘಟನೆಯ ವಿಮಲ, ಅಗ್ನಿ ಪತ್ರಿಕೆಯ ಶ್ರೀಧರ್, ಹಿಂದು ಸಂಘಟನೆಯ ಗಿರಿಧರ್ ಈ ಘಟನೆಗೆ ಸಾಕ್ಷಿಯಾದರು. ತಮ್ಮ ಗಣ್ಯ ಅಥಿತಿಯನ್ನು ರಕ್ಷಿಸಿಕೊಳ್ಳಬೇಕಾದ ಚಾನಲ್ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು.<br /><br />ಇಲ್ಲಿ ಯಾರು ಯಾರಿಗೆ ಮಸಿ ಬಳೆದರು? ಯಾರಿಗೆ ಅವಮಾನವಾಯ್ತು? ಕರ್ನಾಟಕದ ಕೆಲವು ಭಾಗಕ್ಕೆ ಕಿಚ್ಚು ಹತ್ತಿಸಿದವರು ಯಾರು?<br /><br />ಮರುದಿನ ಆಂಧ್ರಪ್ರದೇಶದ ಶ್ರೀರಾಮಸೇನೆಯ ಸಭೆಯಲ್ಲಿ ಬಾಗವಹಿಸಿ ಬೆಳಗಾವಿಗೆ ಬಂದ ಮುತಾಲಿಕ್ ಅಲ್ಲಿ ಒಂದು ಮಾತು ಹೇಳಿದರು. ‘ಚಾನಲ್ ಗಳ ಗ್ಯಾಂಗ್ ವಾರ್ ನಲ್ಲಿ ನಾನು ಸಿಕ್ಕಿ ಹಾಕಿಕೊಂಡೆ. ಈ ಘಟನೆಯಲ್ಲಿ ಕಾಂಗ್ರೇಸ್ ಮತ್ತು ಮೀಡಿಯಾ ಇನ್ವಾಲ್ ಆಗಿದೆ.’ ಈ ಸುದ್ದಿ ಎಲ್ಲಿಯೂ ಪ್ರಸಾರವಾಗಲಿಲ್ಲ; ಪ್ರಕಟವಾಗಲಿಲ್ಲ. ನಾನು ಇಂಟ್ರನೆಟ್ ನಲ್ಲಿಅದನ್ನು ಓದಿದೆ. ಪಾಪ ಮುತಾಲಿಕ್!<br /><br />ಸ್ವತಃ ನಗರ ಪೋಲಿಸ್ ಆಯುಕ್ತರಾದ ಶಂಕರ ಬಿದರಿ ಪತ್ರಿಕಾಗೋಷ್ಠಿಯಲ್ಲಿ, "ಘಟನೆಯು ಪೂರ್ವನಿಯೋಜಿತವಾಗಿದ್ದು ಇದರ ಹಿಂದೆ ಬಲವಾದ ಶಕ್ತಿಯ ಕೈವಾಡವಿದೆ. ಮುತಾಲಿಕ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಅವರಿಗೆ ಮಸಿ ಬಳಿಯಬೇಕೆಂದು ಪೂರ್ವತಯಾರಿ ನಡೆಸಿಯೇ ಈ ಕೃತ್ಯವೆಸಗಲಾಗಿದೆ.” ಎಂದು ಹೇಳಿದ್ದಾರೆ. ಜೊತೆಗೆ ಇಂತಹ ಘಟನೆಯೇನಾದರು ನಡೆಯಬಹುದೆಂದು ಬೇರೆ ಚಾನಲ್ ನವರಿಗೆ ಗೊತ್ತಿತ್ತು. ಅವರಿಗೂ ಸಾಮಾಜಿಕ ಹೊಣೆಗಾರಿಕೆಯಿದೆ. ಪೋಲಿಸಿನವರಿಗೆ ಅದನ್ನು ತಿಳಿಸಬೇಕಾಗಿತ್ತು ಎಂದಿದ್ದಾರೆ.<br /><br />ಅಂದರೆ ಪತ್ರಕರ್ತರು ತಮ್ಮ ಪತ್ರಿಕಾ ಧರ್ಮ ಮರೆತು ತಮ್ಮ ಸೋರ್ಸ್ ಅನ್ನು ಅವರಿಗೆ ಹೇಳಬೇಕು. ಅದೆಂದಾದರೂ ಸಾಧ್ಯವೇ? ಸಾಮಾಜಿಕ ಹೊಣೆಗಾರಿಕೆ ಎಂದಿದ್ದಾರೆ ಬಿದರಿ ಸಾಹೇಬರು. ಒಪ್ಪತಕ್ಕ ಮಾತೇ. ಆದರೆ ಅದನ್ನು ಎಲ್ಲಿಂದ ಹುಡುಕಿ ತರೋಣ? ಶಾಸನವನ್ನು ರೂಪಿಸುವ ಪ್ರಭುಗಳಿಂದಲೇ? ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಮಾಧ್ಯಮದಿಂದಲೇ?<br /><br />ಕಳೆದ ವರ್ಷ ಜನವರಿ ೨೪ರಂದು ಮಂಗಳೂರಿನಲ್ಲಿ ಪಬ್ ಮೇಲೆ ಶ್ರೀರಾಮ ಸೇನೆ ದಾಳಿ ನಡೆಸಿತು. ದಾಳಿ ಸಮಯದಲ್ಲಿ ಜೊತೆಯಲ್ಲಿ ಮಾಧ್ಯಮದವರನ್ನೂ ಸೇನೆ ಕರೆದೊಯ್ದಿತ್ತು. ಹಿಂದಿನ ಲೋಕಾಯುಕ್ತರಂತೆ. ಶ್ರೀರಾಮಸೇನೆಗೆ ಬಿಟ್ಟಿ ಪ್ರಚಾರ ಸಿಕ್ಕಿತು. ಅವರು ಹುಡುಗಿಯರನ್ನು ಅಟ್ಟಾಡಿಸಿಕೊಂಡು ಹೊಡೆಯುವುದನ್ನು ದೃಶ್ಯ ಮಾಧ್ಯಮಗಳು ಪದೇ ಪದೇ ಪ್ರಸಾರ ಮಾಡಿದವು.<br />ಪಬ್ ದಾಳಿಯ ಸಂದರ್ಭದಲ್ಲಿ ಅರೆಸ್ಟ್ ಆಗಿದ್ದ ಶ್ರೀರಾಮ ಸೇನೆಯ ರಾಜ್ಯ ಸಹಸಂಚಾಲಕನಾದ ಪ್ರಸಾದ್ ಅತ್ತಾವರ ಹೊರಬಂದೊಡನೆ ಎರಡೂ ಕೈಜೋಡಿಸಿ ಮಾಧ್ಯಮದವರಿಗೆ ಕೃತಜ್ನತೆಗಳನ್ನು ಅರ್ಪಿಸಿದ್ದು ಹೀಗೆ; ಇಲ್ಲಿಯವರೆಗೆ ಸೇನೆ ಬರೀ ಕರ್ನಾಟಕದಲ್ಲಿತ್ತು. ಈಗ ಅದು ರಾಷ್ಟ್ರ ಮಟ್ಟಕ್ಕೆ ಬೆಳೆಯಿತು. ಪ್ರಚಾರ ಕೊಟ್ಟ ನಿಮಗೆಲ್ಲಾ ಧನ್ಯವಾದಗಳು.<br />ಈಗ ಮುತಾಲಿಕರೊಂದಿಗೆ ಜನವಾದಿ ಸಂಘಟನೆಯ ವಿಮಲ ಕೂಡಾ ಧನ್ಯವಾದಗಳನ್ನರ್ಪಿಸಬಹುದು.<br /><br />ಇದನ್ನೆಲ್ಲಾ ಆಳುವ ಅರಸರ ನಿರ್ವೀರ್ಯತೆಯೆನ್ನಬೇಕೋ? ಅಥವಾ ಮಾಧ್ಯಮಗಳ ಬೇಜವಬ್ದಾರಿಯೆನ್ನಬೇಕಾ? ಇಲ್ಲವೆ ಮತಾಂಧ ಶಕ್ತಿಗಳ ವಿಜೃಂಭಣೆಯೆನ್ನಬೇಕಾ?Nishada Kanjarihttp://www.blogger.com/profile/00365956604807120745noreply@blogger.com0tag:blogger.com,1999:blog-4261968803082103008.post-78233340133094134292009-11-26T19:31:00.000-08:002009-11-26T19:35:58.530-08:00ರಾಷ್ಟ್ರಪತಿಗಳನ್ನು ಕೇವಲ ಮಹಿಳೆಯಾಗಿ ಕಂಡ ವಿ.ಕ.ಇವತ್ತಿನ ’ವಿಜಯ ಕರ್ನಾಟಕ’ ದಿನಪತ್ರಿಕೆಯ ಎರಡನೆಯ ಸಂಪಾದಕೀಯ ಹೀಗಿದೆ;<br /> ಸುಖೋಯ್ ಶೋಕಿ!<br />” ರಾಷ್ಟ್ರಪತಿ ಹುದ್ದೆ ರಬ್ಬರ್ ಸ್ಟಾಂಪ್ ಎಂಬುದು ನಿಜವಾದರೂ ಕ್ರಿಯಾಶೀಲತೆಯನ್ನೇ ಕಳೆದುಕೊಳ್ಳಬೇಕು ಎಂದು ಅರ್ಥವಲ್ಲ. ಆದರೆ ಆ ಹುದ್ದೆಯಲ್ಲಿರುವವರು ಅರ್ಥಹೀನ ಶೋಖಿ ಮಾಡಿಕೊಂಡಿರಬೇಕು ಹಾಗೂ ಆ ಮೂಲಕವೇ ತಮ್ಮ ಅಸ್ತಿತ್ವ ತೋರಿಸಬೇಕು ಎಂಬ ರೂಢಿ ಬೆಳೆದುಬಿಟ್ಟರೆ ಹೇಗೆ? ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರು ಸುಖೋಯಿ ಯುದ್ದ ವಿಮಾನದಲ್ಲಿ ಸುಯ್ಯನೆ ಹಾರಿ, ಯುದ್ಧ ವಿಮಾನ ಚಲಾಯಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲಿ, ಮಾಧ್ಯಮಗಳ ಕೆಮರಾ ಎದುರು ಮಿಂಚಿದ್ದು ಬಿಟ್ಟರೆ ಮತ್ತೆ ಯಾವ ಉದ್ದೇಶ ಈಡೇರಿದಂತಾಯ್ತು? ಕಲಾಂ ಅವರೂ ಈ ಹಿಂದೆ ಸುಖೋಯ್ ನಲ್ಲಿ ಪಯಣಿಸಿದ್ದರು. ಆದರೆ, ಅವರು ದೇಶದ ಉದ್ದಗಲಕ್ಕೂ ಪಯಣಿಸಿ, ವಿದ್ಯಾರ್ಥಿಗಳಲ್ಲಿ ನವಚೈತನ್ಯ ತುಂಬುತ್ತಾ ಕಾಳಜಿ ಮೆರೆದಿದ್ದರು. ಎಂಬುದೂ ಗಮನಾರ್ಹ. ಜಾರ್ಜ್ ಫರ್ನಾಂಡಿಸ್ ಅವರು ’ಹಾರಾಡುವ ಶವಪೆಟ್ಟಿಗೆ’ ಎಂದು ಕರೆಸಿಕೊಳ್ಳುತ್ತಿದ್ದ ಮಿಗ್ ವಿಮಾನದಲ್ಲಿ ಹಾರಾಡಿದ್ದಕ್ಕೆ ಒಂದು ಅರ್ಥವಿತ್ತು. ಈಗ ಪ್ರತಿಭಾ ಹಾರಾಡಿರುವುದರಿಂದ ಸುಖೋಯಿ ವಿಮಾನಗಳ ಸುರಕ್ಷತೆಗೆ ಖಾತ್ರಿ ಸಿಕ್ಕಿದೆ ಅಂತ ಪೋಸು ಕೊಡುತ್ತಿರುವುದು ಪ್ರಚಾರಪ್ರಿಯತೆ ಅಲ್ಲದೇ ಇನ್ನೇನ್ರಿ?”<br />ಇದನ್ನು ಬರೆದಾತನ ಯೋಗ್ಯತೆಯನ್ನು ನಿರ್ಧರಿಸಲು ಆತ ಸಂಪಾದಕೀಯವನ್ನು ಮುಕ್ತಾಯಗೊಳಿಸಿದ ’ಇನ್ನೇನ್ರೀ?’ ಎಂಬ ಒಂದು ಶಬ್ದವೇ ಸಾಕು. ಬೀದಿಯಲ್ಲಿ ನಿಂತು ಜಗಳವಾಡುವ, ಸಿಡುಕು ಪ್ರವೃತ್ತಿಯ, ಉಡಾಫೆ ವ್ಯಕ್ತಿತ್ವದವ ಮಾತ್ರ ಇಂತಹ ಶಬ್ದ ಉಪಯೋಗಿಸಬಲ್ಲ. ಬಹುಶಃ ಆತ ಟ್ರೈನಿ ಪತ್ರಕರ್ತನಾಗಿರಬಹುದು!<br />ಮಹಿಳೆಯರನ್ನು ಅವಮಾನ ಮಾಡುವ, ತಾತ್ಸಾರ ಮಾಡುವ ಉದ್ದೇಶದಿಂದಲೇ ಇದನ್ನಾತ ಬರೆದಿರಬೇಕು. ದಿನಪತ್ರಿಕೆಯೊಂದರ ಎರಡನೇ ಸಂಪಾದಕೀಯ ಸಾಮಾನ್ಯವಾಗಿ ವೈನೋಧಿಕ ಬರಹಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ. ಬಹು ಹಿಂದೆ ಪ್ರಜಾವಾಣಿಯಲ್ಲಿ ನಾಗೇಶ ಹೆಗ್ಡೆಯವರು ಇದನ್ನು ಬರೆಯುತ್ತಿದ್ದರು. ನಾನದನ್ನು ಇಷ್ಟಪಟ್ಟು ಓದುತ್ತಿದ್ದೆ. ಈಗ ಅಲ್ಲಿ ಎರಡನೆಯ ಸಂಪಾದಕಿಯವೂ ಗಂಭೀರವಾದುದೇ. ಆದರೆ ವಿಜಯ ಕರ್ನಾಟಕದಲ್ಲಿ ಅದು ಕೀಳು ಅಭಿರುಚಿಗೆ ಕನ್ನಡಿಹಿಡಿಯುತ್ತದೆ. ನಿನ್ನೆ ಈ ಕಾಲಂನಲ್ಲಿ ಕಾಣಿಸಿಕೊಂಡವರು ಶೋಭಾ ಕರಂದ್ಲಾಜೆ ಮತ್ತು ಭಾರತಿ ಶೆಟ್ಟಿ. ಅದರ ಹೆಡ್ಡಿಂಗ್ ”ನಾಯಕಿಯರು ಕಣ್ಣೀರು ಹಾಕಬಾರದು”. ಇಂದು ಅದಕ್ಕೆ ಬಲಿಯಾದವರು ನಮ್ಮ ಘನತೆವೆತ್ತ ರಾಷ್ಟ್ರಪತಿ, ಪ್ರಥಮ ಪ್ರಜೆ ಶ್ರೀಮತಿ ಪ್ರತಿಭಾ ಪಾಟೀಲ್ ಅವರು. ನಿನ್ನೆಯೇ ಅವರ ತೇಜೋವಧೆಗೆ ಪೂರ್ವತಯಾರಿ ನಡೆದಿರಬೇಕು. ಏಕೆಂದರೆ ಇಂದಿನ ಸುಖೋಯಿ ಹಾರಾಟದ ಬಗ್ಗೆ ನಿನ್ನೆಯ ವಿ.ಕ.ದಲ್ಲಿ ಒಂದು ಬರಹ ಪ್ರಕಟವಾಗಿತ್ತು. ಅದರ ಹೆಡ್ಡಿಂಗ್ ”ಸುಖೋಯಿ ಹಾರಾಟ ಪ್ರತಿಭಾ ಹೊಸ ಅವತಾರ.”<br />ವಿಜಯ ಕರ್ನಾಟಕದಲ್ಲಿ ಶಬ್ದಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ’ಅವತಾರ’ ಎನ್ನುವುದು ಹೀನಾರ್ಥವನ್ನು ನೀಡುತ್ತದೆ. ಉನ್ನತ ಸ್ಥಾನದಿಂದ ಕೆಳಜಾರುವುದೆಂದಾಗುತ್ತದೆ. ಅಡುಮಾತನ್ನು ಗಮನಿಸಿ; ”ಅವನ ಅವತಾರ ನೋಡು” ಶೋಕಿ ಕೂಡಾ ಹಾಗೆಯೇ. ಗಮನಿಸಿ; ಶೋಕಿಲಾಲ. ವಿ.ಕ. ಉಡಾಫೆ ಪತ್ರಕರ್ತರನ್ನು ಬೆಳೆಸುತ್ತಿದೆ; ಪೋಷಿಸುತ್ತಿದೆ. ಅದಕ್ಕೆ ಅದುವೇ ಸರಿಬಿಡಿ. ವಿಮರ್ಶಕಿ ವಿ.ಕೆಯ ಅವತಾರ ಕಂಡು ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಾಳೆ; ವಿ.ಕ. ಈಗ ನೋಡುವ ಪತ್ರಿಕೆ-ಓದುವ ಪತ್ರಿಕೆ ಅಲ್ಲ. ಪತ್ರಿಕೋಧ್ಯಮದ ಗಾಂಭೀರ್ಯವನ್ನೇ ಅದು ಮಸುಕುಗೊಳಿಸುತ್ತಿದೆ.<br />ಸಂಪಾದಕೀಯ ಬರೆದಾತನಿಗೆ ಗೊತ್ತಿಲ್ಲದಿರಬಹುದು; ಭೂ, ವಾಯು, ನೌಕಾದಳಗಳಿಗೆ ಪ್ರತ್ಯೇಕ ದಂಡನಾಯಕರಿರುತ್ತಾರೆ. ರಾಷ್ಟ್ರಪತಿಗಳು ಈ ಮೂರೂ ದಳಗಳಿಗೆ ಮಾಹಾದಂಡನಾಯಕರು. ಸುಖೋಯಿಯಲ್ಲಿ ಹಾರಾಟ ನಡೆಸುವುದು ಅವರ ಹಕ್ಕು. ದೇಶದ ಅತ್ಯುನ್ನತ ಸ್ಥಾನದಲ್ಲಿರುವ, ೭೪ ವಯಸ್ಸಿನ ಮಹಿಳೆಯೊಬ್ಬರ ಆತ್ಮಸ್ಥೈರವನ್ನು ನಾವು ಅಚ್ಚರಿಯಿಂದ, ಹೆಮ್ಮೆಯಿಂದ ನೋಡಬೇಕು. ಅಸ್ವಸ್ಥ ಮನಸ್ಸು ಮಾತ್ರ ಅದನ್ನು ತೆವಲು ಎಂಬಾರ್ಥದಲ್ಲಿ ’ಶೋಕಿ’ ಎಂದು ಕರೆಯಬಲ್ಲುದು. ಯುದ್ಧ ವಿಮಾನದಲ್ಲಿ ಹಾರಾಡುವುದಕ್ಕೆ ಗಟ್ಟಿ ಗುಂಡಿಗೆ ಬೇಕು. ಎಳಸು ಸಂಪಾದಕೀಯ ಬರೆದ ಹಾಗಲ್ಲ.<br />ಸಂಪಾದಕೀಯ ಎಂಬುದು ಒಂದು ಪತ್ರಿಕೆಯ ಗೊತ್ತು ಗುರಿಗಳನ್ನು ಹೇಳುತ್ತೆ; ಅದರ ಸಾಮಾಜಿಕ ನಿಲುವನ್ನು ಸ್ಪಷ್ಟಪಡಿಸುತ್ತೆ. ಸಂಪಾದಕೀಯ ಪುಟದಲ್ಲಿ ಬರುವ ಲೇಖನಗಳು ಇದಕ್ಕೆ ಪುಷ್ಟಿನೀಡುತ್ತವೆ. ಇದನ್ನೆಲ್ಲಾ ಗಮನಿಸಿಯೇ ಯಾರೋ ವಿ.ಕ.ವನ್ನು ’ಬಿಜೆಪಿಯ ಪಂಚಾಂಗ’ ಎಂದು ಕರೆದಿದ್ದಾರೆ.ಬಿಜೆಪಿಯ ಪುರುಷ ಮನಸ್ಸು ಮಹಿಳೆಯನ್ನು ಖಾಸಾಗಿ ಆಸ್ತಿ ಎಂದು ಪರಿಗಣಿಸುತ್ತದೆ. ಅದು ಸದಾ ಸ್ತ್ರೀಯರನ್ನು ಅಂಕೆಯಲ್ಲಿಟ್ಟುಕೊಳ್ಳಬಯಸುತ್ತದೆ. ಸಾಧ್ಯವಾದಲೆಲ್ಲ ಅವರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಅದಕ್ಕೆ ರಾಷ್ಟ್ರಪತಿಗಳೂ ಹೊರತಾಗಲಿಲ್ಲವಲ್ಲ ಎಂಬುದೇ ನೋವಿನ ಸಂಗತಿ.Nishada Kanjarihttp://www.blogger.com/profile/00365956604807120745noreply@blogger.com1tag:blogger.com,1999:blog-4261968803082103008.post-5778658770121408142009-10-15T12:01:00.001-07:002009-10-15T12:06:06.893-07:00ಕುಲಾಂತರಿ ಬೀಜ; ವಾಚಾಳಿಗಳಚರ್ಚೆಬ್ಲಾಗ್ ಬರೆಯುವುದರಲ್ಲಿನ ಆಸಕ್ತಿ ಹೊರಟು ಹೋಗಿದೆ. ಅರೋಗ್ಯಕರ ಅಂತರದಲ್ಲಿ ನಿಂತು ನೋಡಿದರೂ ಅದರಲ್ಲಿ ಹುಳುಕನ್ನು ಹುಡುಕಿ ತೆಗೆಯುವವರೇ ಹೆಚ್ಚಾಗಿದ್ದಾರೆ. ಆದರೆ ಇವತ್ತು ಬರೆಯದೆ ಇರಲಾಗಲಿಲ್ಲ.<br /><br />ಕುಲಾಂತರಿ ಬದನೆ ತಳಿಯನ್ನು ಭಾರತದಲ್ಲಿ ಬೆಳೆಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಜೈವಿಕ ತಂತ್ರಜ್ನಾನ ನಿಯಂತ್ರಣ ಸಂಸ್ಥೆಯ ’ಜೆನೆಟಿಕ್ ಎಂಜಿನಿಯರಿಂಗ್ ಅಪ್ರೂವಲ್ ಕಮಿಟಿ’ ನಿನ್ನೆ ಒಪ್ಪಿಗೆ ನೀಡಿದೆ. ರೈತ ಸಂಘಟನೆಗಳು ಬಿಟಿ ಹತ್ತಿ, ಬಿಟಿ ಬದನೆ ಮುಂತಾದ ಕುಲಾಂತರಿ ತಳಿಗಳ ವಿರುದ್ದ ದಶಕಗಳಿಂದಲೂ ಹೋರಾಟ ಮಾಡುತ್ತಾ ಬಂದಿವೆ. ಪ್ರೋ. ನಂಜುಂಡಸ್ವಾಮಿಯವರಂತೂ ಮಾನ್ಸಂಟೋ ಕಂಪೆನಿಯ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದರು.<br /><br />ಇಂದು ಕನ್ನಡದ ಎರಡು ಸುದ್ದಿಚಾನಲ್ ಗಳು ಬಿಟಿ ಬದನೆಯ ಕುರಿತು ಅರ್ಧ ಘಂಟೆಯ ಕಾರ್ಯಕ್ರಮ ನಡೆಸಿಕೊಟ್ಟವು. ಸಮಯೋಚಿತವದುದೇ. ಆದರೆ ನಿರೂಪಕರಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿತ್ತು. ಎರಡೂ ಚಾನಲ್ ನಲ್ಲಿ ವಿಷಯದ ಪರ ಮತ್ತು ವಿರೋಧ ಕುರಿತು ಮಾತಾಡುವ ಇಬ್ಬರು ತಜ್ನರಿದ್ದರು. ಅವರಲ್ಲಿನ ಮಾಹಿತಿಯನ್ನು ಹೊರಗೆಳೆದು ವಿಚಾರ ಮಂಥನ ನಡೆಸುವಲ್ಲಿ ನಿರೂಪಕರು ವಿಪಲರಾಗಿ ಅವರ ದಡ್ಡತನವೇ ಎದ್ದು ಕಾಣುತ್ತಿತ್ತು.<br /><br />ನಿರೂಪಕರಿಗೆ ವಿಷಯದ ಆಳ ಅರಿವು ಇರಬೇಕೆಂದಿಲ್ಲ. ಅಥಿತಿಗಳನ್ನು ಪರಸ್ಪರ ಚರ್ಚೆಗೆ ದೂಡಿಬಿಟ್ಟು, ಅದು ಅತಿರೇಕಕ್ಕೆ ಹೋಗದಂತೆ ನೋಡಿಕೊಂಡು ತಾವು ಸಮನ್ವಯಕಾರರಾಗಿ ಹಳಿ ತಪ್ಪದಂತೆ ನೋಡಿಕೊಂಡರಾಯಿತು. ಅದಕ್ಕೆ ವಿಷಯದ ಪ್ರಾಥಮಿಕ ಜ್ನಾನವಿದ್ದರೂ ಸಾಕಾಗುತ್ತದೆ.<br /><br />ಕುಲಾಂತರಿ ಬೀಜ ನಮ್ಮ ದೇಶಕ್ಕೆ ಬಂದರೆ ಏನಾಗುತ್ತೆ? ನಮ್ಮ ರೈತರಿಗೆ ಬೀಜದ ಮೇಲಿನ ಹಕ್ಕು ಹೊರಟು ಹೋಗುತ್ತೆ. ಪಿಳಿಗೆಯಿಂದ ಪಿಳಿಗೆಗೆ ಹರಿದು ಬಂದಿರುವ ಈ ಹಕ್ಕು ಕಳೆದುಹೋಗಿ ಬಹುರಾಷ್ಟ್ರೀಯ ಬೀಜ ಕಂಪಿನಿಗಳ ಮುಂದೆ ನಮ್ಮ ರೈತ ಬೀಜಕ್ಕಾಗಿ ಬೊಗಸೆಯೊಡ್ಡಿ ನಿಲ್ಲಬೇಕಾಗುತ್ತೆ. ನಮ್ಮ ಆಹಾರ ಸ್ವಾವಲಂಬನೆ ಹೊರಟು ಹೋಗುತ್ತೆ. ಅವರ ಬೀಜಕ್ಕೆ ಅವರು ಶಿಪಾರಸ್ಸು ಮಾಡಿದ ಗೊಬ್ಬರವನ್ನು ಹಾಕಬೇಕಾಗುತ್ತೆ.ನಮ್ಮ ತಟ್ಟೆಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳ ಸ್ವಾಮ್ಯತೆ.<br /><br />ಎರಡನೆಯದಾಗಿ ಕುಲಾಂತರಿ ಬೀಜವೆಂಬುದು ನಿಸರ್ಗವಿರೋಧಿ. ಅದು ಜೀವ ಸಂಕುಲದ ಸಹಜ ಅರಳುವಿಕೆಯಲ್ಲ. ಒಂದು ಜೀವಿಯ ವಂಶವಾಹಿನಿಯನ್ನು ಇನ್ನೊಂದು ಜೀವಿಯ ವಂಶವಾಹಿನಿಯೊಳಗೆ ಬಲವಂತವಾಗಿ ತುರುಕುವುದು. ಪ್ರಾಣಿಗಳ ವಂಶವಾಹಿನಿಯನ್ನು ತರಕಾರಿಯ ವಂಶವಾಹಿನಿಯಯೊಳಗೆ ಸೇರಿಸಿ ಇನ್ನೊಂದನ್ನು ಸೃಷ್ಟಿಸುವುದು; ಇದು ಒರಿಜಿನಲ್ ಅಲ್ಲ. ಇದನ್ನು ಮನುಷ್ಯ ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಸಾಧ್ಯವೇ? ಈ ಪ್ರಾಥಮಿಕ ಜ್ನಾನವಿದ್ದರೂ ಸಾಕು ಕಾರ್ಯಕ್ರಮವನ್ನು ನಿಭಾಯಿಸಬಹುದು.<br /><br />ಪ್ರಾಥಮಿಕ ಜ್ನಾನವೇ ಇಲ್ಲದೆ ನಿರೂಪಕರ ಸೀಟಲ್ಲಿ ಕುಳಿತರೆ ಹೇಗೆ? ರೈತಾಪಿ, ಹಳ್ಳಿಯಿಂದ ಮುಂತಾದ ಬ್ಲಾಗ್ ಲೋಕವನ್ನಾದರೂ ಒಮ್ಮೆ ಹೊಕ್ಕು ಬರಬಾರದೇ?!Nishada Kanjarihttp://www.blogger.com/profile/00365956604807120745noreply@blogger.com0tag:blogger.com,1999:blog-4261968803082103008.post-46907469006469498272009-09-24T10:14:00.000-07:002009-09-24T19:56:58.192-07:00ಬಿ.ಬಿ.ಸಿಗೊಂದು ಎಡಿಟೋರಿಯಲ್ ಗೈಡ್ ಲೈನ್ಸ್<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEiSWAYEhRp7N2Mfp4387P_0JfkjeiDRd07V4sfdCQS6abZc2arUSQ6uY8vE2zH68pOw21XvNy7WXD9yAQgqAFvmbV1UdkrGL3_kG8_xmcpmGTHFpneM08jj23Br3WbY3zF5Mc1c1p-HaK-f/s1600-h/beslan.jpg"><img style="margin: 0px auto 10px; display: block; text-align: center; cursor: pointer; width: 320px; height: 213px;" src="https://blogger.googleusercontent.com/img/b/R29vZ2xl/AVvXsEiSWAYEhRp7N2Mfp4387P_0JfkjeiDRd07V4sfdCQS6abZc2arUSQ6uY8vE2zH68pOw21XvNy7WXD9yAQgqAFvmbV1UdkrGL3_kG8_xmcpmGTHFpneM08jj23Br3WbY3zF5Mc1c1p-HaK-f/s320/beslan.jpg" alt="" id="BLOGGER_PHOTO_ID_5385084097560542066" border="0" /></a><br /><br /><br /><br /><br />ಟೀವಿ ಚಾನಲ್ ಗಳನ್ನು ಕೈ ಯಾಂತ್ರಿಕವಾಗಿ ಬದಲಾಯಿಸ್ತ ಇತ್ತು. ಸುದ್ದಿ ಚಾನಲ್ಲೊಂದರಲ್ಲಿ ’ಪಂಚರಂಗಿ ಪಾಂಚಾಲಿ’ ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ’ಸಚ್ ಕ ಸಾಮ್ನ’ ಎಂಬ ರಿಯಾಲಿಟಿ ಶೋದಲ್ಲಿ ತನ್ನ ಅಂತರಂಗದ ಗುಟ್ಟುಗಳನ್ನು ಬಹಿರಂಗಪಡಿಸಿದ ದ್ರೌಪದಿ ಪಾತ್ರಧಾರಿಣಿಯಾಗಿದ್ದ ರೂಪಗಂಗೂಲಿ ಬಿಚ್ಚಿಟ್ಟ ಸತ್ಯಗಳನ್ನಾದರಿಸಿದ ಕಾರ್ಯಕ್ರಮವಿದು.<br /><br />ಮಂಗಳವಾರ ಪ್ರಸಾರ ಕಂಡ ಈ ಕಾರ್ಯಕ್ರಮವನ್ನು ಉಪೇಕ್ಷಿಸಿ ಚಾನಲ್ ಬದಲಾಯಿಸಿದ್ದೆ. ಯಾಕೆಂದರೆ ಕಾರ್ಯಕ್ರಮ ಪುರುಷ ಪಕ್ಷಪಾತಿಯಾಗಿ ಮುಂದುವರಿಯುತ್ತಿತ್ತು. ಇಂದು ಅದು ನೆನಪಿಗೆ ಬಂತು; ಯಾಕೆಂದರೆ ಇಂದು ವಿಶ್ವ ಹೆಣ್ಣುಮಕ್ಕಳ ದಿನಾಚರಣೆಯಂತೆ. ಅದು ಕೂಡ ಗೊತ್ತಾದದ್ದು ಈಟೀವಿ ನ್ಯೂಸ್ ನಿಂದ.<br /><br />ಟೀವಿ ರಿಮೋಟ್ ವೀಕ್ಷಕರ ಕೈಯಲ್ಲಿರುತ್ತೆ. ಹಾಗಾಗಿ ಬೇಕಾದ ಚಾನಲ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಸುದ್ದಿ ಚಾನಲ್ ಗಳ ಲೈವ್ ಕವರೇಜ್ ಕೆಲವೊಮ್ಮೆ ಮನಸ್ಸನ್ನು ಘಾಸಿಗೊಳಿಸುತ್ತೆ. ಅದರಲ್ಲೂ ದುರ್ಮರಣಕ್ಕಿಡಾದವರ ಆಪ್ತರ ಮುಂದೆ ಸೌಂಡ್ ಬೈಟ್ ಗಾಗಿ ಮೈಕ್ ಹಿಡಿಯುವುದಿದೆಯಲ್ಲಾ ಅದು ತುಂಬಾ ಅಮಾನವೀಯ ಅನ್ನಿಸುತ್ತೆ. ಹಿಂಸೆಯಾಗುತ್ತೆ. ಸಾವನ್ನು, ಅತ್ಯಾಚಾರವನ್ನು ಮಾರ್ಕೇಟ್ ಮಾಡಿಕೊಳ್ಳುವುದು ಅನಾಗರೀಕತೆ ಎನಿಸಿಕೊಳ್ಳುವುದಿಲ್ಲವೇ?<br /><br />ಸುದ್ದಿ ಚಾನಲ್ ಗಳ ಹಿರಿಯಣ್ಣನಂತಿರುವ ಬಿ.ಬಿ.ಸಿ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ. ಅದಕ್ಕಾಗಿ ಅದು ತನ್ನ ಎಡಿಟೋರಿಯಲ್ ಗೈಡ್ ಲೈನ್ಸ್ ಅನ್ನು ಕಳೆದ ಜುಲೈ ಇಂದ ಜಾರಿಗೆ ತಂದಿದೆ.<br />ಹೀಗೊಂದು ಅಲೋಚನೆ ಅದಕ್ಕೆ ಬರಲು ಕಾರಣವಾದ ಘಟನೆಯೇ ರಷ್ಯನ್ ಫೆಡರೇಷನ್ ನ ಬೆಸ್ಲಾನ್ ಶಾಲಾ ಮಕ್ಕಳ ದುರಂತ<br />೨೦೦೪ರ ಸೆ.೧ರಂದು ಚೆಚನ್ಯಾ ಬಂಡುಕೋರರು ಬೆಸ್ಲಾನ್ ಶಾಲೆಯ ೧೧೦೦ ಮಕ್ಕಳನ್ನು ಮತ್ತು ಅವರ ಪೋಷಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಸತತ ೫ ದಿನ ಅವರನ್ನು ಸ್ಕೂಲಿನ ಜಿಮ್ ನಲ್ಲಿ ಕೂಡಿ ಹಾಕಲಾಗಿತ್ತು. ಅನ್ನ ನೀರು, ಔಷಧಿ ಸರಬರಾಜಿಗೂ ಉಗ್ರಗಾಮಿಗಳು ಅವಕಾಶ ಕೊಡಲಿಲ್ಲ. ಇಬ್ಬರು ಮಹಿಳೆಯರೂ ಸೇರಿದಂತೆ ಒಟ್ಟು ೩೪ ಉಗ್ರಗಾಮಿಗಳಿದ್ದರು. ಜಿಮ್ ನಲ್ಲಿ ಸೊಪೋಕೇಶನ್ ಉಂಟಾಗಿ ಆ ಪುಟ್ಟ ಮಕ್ಕಳು ಪ್ರಜ್ನಾಶೂನ್ಯರಾದರು. ಕ್ರಮೇಣ ಸಾಯತೊಡಗಿದರು. ರಷ್ಯನ್ ಸೈನ್ಯ ಬಂಡುಕೋರರಿಂದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಹೊತ್ತಿಗೆ ೩೩೪ ಜನ ಸತ್ತಿದ್ದರು. ಅವರಲ್ಲಿ ೧೮೬ ಮಕ್ಕಳಾಗಿದ್ದರು.<br /><br />ಮೇಲಿನ ಘಟನೆಯನ್ನು ಬಿ.ಬಿ.ಸಿ ಸೇರಿದಂತೆ ಎಲ್ಲಾ ಸುದ್ದಿ ಚಾನಲ್ ಗಳು ಲೈವ್ ಕವರೇಜ್ ನೀಡಿದ್ದವು. ಸತ್ತ ಮಕ್ಕಳನ್ನು ಉಗ್ರಗಾಮಿಗಳು ಶಾಲೆಯಿಂದ ಹೊರಕ್ಕೆ ಎಸೆಯುತ್ತಿದ್ದರು. ಅದನ್ನೆಲ್ಲಾ ನಾವು ಲೈವ್ ಕವರೇಜ್ ನಲ್ಲಿ ನೋಡಿದ್ದೇವೆ. ಸೆ.೧ ಬಾಸ್ಲೇನ್ ಶಾಲೆಯಲ್ಲಿ ’ಡೇ ಅಫ್ ನಾಲೆಡ್ಜ್’ ದಿನ. ಅಂದರೆ ನಮ್ಮ ಶಿಕ್ಷಕರ ದಿನಾಚರಣೆಗೆ ಹತ್ತಿರದ ದಿನದಂತೆ. ಮಕ್ಕಳೆಲ್ಲಾ ತಮ್ಮ ಫೋಷಕರ ಕೈ ಹಿಡಿದುಕೊಂಡು ಪ್ರೀತಿಯ ಟೀಚರ್ ಗೆ ಹೂವು, ಗಿಪ್ಟ್, ಬೆಲೂನ್ ಗಳನ್ನು ಕೊಡಲು ಶಾಲೆಯೊಳಗೆ ಹೋದವರು ಹೆಣವಾಗಿ ಹೊರಬೀಳುತ್ತಿದ್ದರು.<br /><br />ಬಿ.ಬಿ.ಸಿ ಇದನ್ನು ಲೈವ್ ಕವರೇಜ್ ಮಾಡಿದ ನಂತರದಲ್ಲಿ ಬಹುಶಃ ಬಹಳಷ್ಟು ವಿಚಾರ ವಿಮರ್ಶೆ ನಡೆಸಿರಬೇಕು. ಹಾಗಾಗಿ ಅದು ಸೆನ್ಸಿಟಿವ್ ಲೈವ್ ನ್ಯೂಸ್ ಕವರೇಜ್ ಗೆ ಎಡಿಟೋರಿಯಲ್ ಗೈಡ್ ಲೈನ್ಸ್ ಅನ್ನು ರೂಪಿಸಿತು. ಸುದ್ದಿಯಲ್ಲಿ ’ವೇಗಕ್ಕಿಂತಲೂ ನಿಖರತೆ ಮುಖ್ಯ’ ಎಂಬುದು ಬ್ರೇಕಿಂಗ್ ನ್ಯೂಸ್ ನ ಬದ್ದತೆ; ಸೆನ್ಸಿಟಿವ್ ನ್ಯೂಸ್ ಅನ್ನು ಪ್ರಸಾರ ಮಾಡುವಾಗ ವಿಳಂಬನೀತಿಯನ್ನು ಅನುಸರಿಸಬೇಕು. ಎಷ್ಟು ವಿಳಂಬಿಸಬೇಕು ಎಂಬುದನ್ನು ಸುದ್ದಿ ಮುಖ್ಯಸ್ಥರು ತೀರ್ಮಾನಿಸುತ್ತಾರೆ. ಇದು ವೀಕ್ಷಕರ ಜೊತೆಗೆ ನಮ್ಮ ಒಪ್ಪಂದ. ಅವರು ನಮ್ಮ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಇವು ನಮ್ಮ ಸಂಪಾದಕೀಯದ ನೀತಿ ಮತ್ತು ಮೌಲ್ಯಗಳು’ ಎಂದು ಬಿ.ಬಿ.ಸಿಯ ಸಂಪಾದಕೀಯ ಪಾಲೀಸಿಯ ನಿಯಂತ್ರಕರಾದ ಸ್ಟೀಪನ್ ವೈಟಲ್ ಹೇಳುತ್ತಾರೆ.<br /><br />ಸಂಸ್ಥೆಯ ಉದೋಗಿಯೊಬ್ಬರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಅನ್ನಿಸಿದರೆ ಸಂಪಾದಕೀಯ ಪಾಲಿಸಿಯ ನಿಯಂತ್ರಕರೇ ಅದನ್ನು ಪರಿಸೀಲನೆಗೆ ಒಳಪಡಿಸುತ್ತಾರೆ. ಗೈಡ್ ಲೈನ್ಸ್ ೧೮ ವರ್ಷ ಕೆಳಗಿನ ವೀಕ್ಷಕರ ರಕ್ಶಣೆ, ಕ್ರೈಮ್, ಹಿಂಸೆ ಮತ್ತು ಅಪರಾಧ, ರಿಲೀಜಿಯನ್, ಪ್ರೈವಸಿ ಮತ್ತು ನಿಷ್ಪಕ್ಷಪಾತದ ಮೇಲೆ ಲಕ್ಷ್ಯವನ್ನು ಇಟ್ಟಿದೆ.<br /><br />ಕ್ರೈಮ್ ಮತ್ತು ಸಮಾಜಘಾತುಕ ನಡವಳಿಕೆಗಳಿಗೆ ಸಂಬಂಧಿಸಿದ ವರಧಿಗಳು ಪ್ರಸಾರವಾಗಬೇಕಾದರೆ ಗೈಡ್ ಲೈನ್ಸ್ ಮುಖ್ಯಸ್ಥರ ಪರಿಶೀಲನೆಗೆ ಒಳಪಡಲೇ ಬೇಕು.<br /><br />ನಮ್ಮಲ್ಲಿಯೂ ಇಂತಹದೊಂದು ಗೈಡ್ ಲೈನ್ಸ್ ಬೇಕು ಅನ್ನಿಸುತ್ತದೆಯಲ್ಲವೇ?Nishada Kanjarihttp://www.blogger.com/profile/00365956604807120745noreply@blogger.com0tag:blogger.com,1999:blog-4261968803082103008.post-84792320738766062009-09-08T03:42:00.000-07:002009-09-08T03:43:06.221-07:00ಒಂದು ಸುದ್ದಿ ಹಲವು ಮುಖಆಂದ್ರ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ದುರ್ಮರಣವನ್ನಪ್ಪಿದ ದಿನ ನಾನು ಬೆಂಗಳೂರಿನಲ್ಲಿರಲಿಲ್ಲ. ಹಾಗಾಗಿ ನಾನಿದ್ದ ಊರಿನಲ್ಲಿ ಟೀವಿ೯ ಎಂಬ ಸುದ್ದಿ ವಾಹಿನಿಯ ಲೈವ್ ಟೆಲಿಕಾಸ್ಟ್ ನ್ನು ಮಾತ್ರವೇ ನೆಚ್ಚಿಕೊಳ್ಳುವುದು ಅನಿರ್ವಾಯವಾಗಿತ್ತು. ಕೆಲಸದ ಮಧ್ಯೆ ಆಗಾಗ ಟೀವಿಯನ್ನು ಇಣುಕಿ ನೋಡುತ್ತಿದ್ದೆ. ಯಾವಾಗ ವೈಎಸ್ ಅರ್ ಮರಣ ಖಚಿತವಾಯ್ತೋ ಆಗ ಅವರ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಮತ್ತಷ್ಟು ವಿವರಗಳು ಬೇಕೆನಿಸಿತು.<br /><br />ಟೀವಿ೯ನಲ್ಲಿ ಹಮೀದ್ ಪಾಳ್ಯ ಪ್ರೇಮ್ ಚಂದ್ರ ಸಾಗರ್ ರವರನ್ನು ಕೂರಿಸಿಕೊಂಡು ಅವರ ಸಹಪಾಠಿಯಾಗಿದ್ದ ವೈ ಎಸ್ ಆರ್ ಸ್ವಭಾವದ ಬಗ್ಗೆ ಅವರ ಮೆಡಿಕಲ್ ಕಾಲೇಜಿನಲ್ಲಿನ ವಿದ್ಯಾರ್ಥಿ ಬದುಕಿನ ಅನುಭವಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ಉದಯ ವಾರ್ತೆಗಳತ್ತ ಹೊರಳಿದರೆ ಅದು ಎಂದಿನಂತೆ ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಯಾವುದೋ ಸಂದರ್ಶನವನ್ನು ಮರುಪ್ರಸಾರ ಮಾಡುತ್ತಿತ್ತು. ಮಲೆಯಾಳದ ಏಷ್ಯಾನೆಟ್ ನ್ಯೂಸ್ ಚಾನಲ್ ಮಾತ್ರ ಒಂದೆರಡು ಪ್ಯಾಕೇಜ್ ಗಳನ್ನು ಮಾಡಿ ವೈಎಸ್ ಆರ್ ಬಗ್ಗೆ ಒಂದಷ್ಟು ವಿವರಗಳನ್ನು ನೀಡಿತು.<br /><br />ನಿಜ. ಒಬ್ಬ ಜನಾನುರಾಗಿ ವ್ಯಕ್ತಿ ಸತ್ತಾಗ ಆತನ ಒಳ್ಳೆಯತನವನ್ನಷ್ಟೇ ಹಾಡಿ ಹೊಗಳಲಾಗುತ್ತದೆ. ಆತನ ದೌರ್ಬಲ್ಯಗಳನ್ನು ಉದಾರತೆಯಿಂದ ಕ್ಷಮಿಸಿಬಿಡಲಾಗುತ್ತದೆ. ಅದು ಜನತೆಯ ದೊಡ್ಡ ಗುಣ. ಆ ದೊಡ್ಡ ಗುಣ ಮಾಧ್ಯಮಗಳಿಗೆ ಇರಬಾರದು. ಅದು ನಿಷ್ಪಕ್ಷಪಾತವಾಗಿರಬೇಕು; ಸತ್ಯನಿಷ್ಠವಾಗಿರಬೇಕು; ನಿಷ್ಠೂರವಾಗಿರಬೇಕು. ಅದು ಜನಸಾಮಾನ್ಯರಂತೆ ಭಾವುಕ ನೆಲೆಯಲ್ಲಿ ಪ್ರತಿಕ್ರಿಯಿಸಬಾರದು. ಹಾಗಾಗಿ ವೈಎಸ್ ಅರ್ ಬಗ್ಗೆ ಒಂದು ಗಂಭೀರವಾದ ಚರ್ಚೆಯನ್ನು ನಾನು ದೃಶ್ಯಮಾಧ್ಯಮದಿಂದ ನಿರೀಕ್ಷಿಸಿದ್ದೆ. ಆದರೆ ನನ್ನ ಗಮನಕ್ಕೆ ಬಂದಂತೆ ಅಂತಹ ಚರ್ಚೆ ನಡೆದಿಲ್ಲ. ಯಾವ ದಿನಪತ್ರಿಕೆಗಳೂ ಗಂಭೀರವಾದ ಲೇಖನ ಪ್ರಕಟಿಸಿದಂತಿಲ್ಲ. ದಿ ವೀಕ್ ವಾರಪತ್ರಿಕೆಯಲ್ಲಿ ಕನ್ನಡದವರೇ ಆದ ಸಚ್ಚಿದಾನಂದ ಮೂರ್ತಿ ಕವರ್ ಸ್ಟೋರಿ ಬರೆದರೂ ಅದು ಪೂರ್ಣ ಮಾಹಿತಿಯನ್ನು ನೀಡಿದಂತಿರಲಿಲ್ಲ. ವೈಎಸ್ ಆರ್ ಊಳಿಗಮಾನ್ಯ ಪದ್ದತಿ ಇನ್ನೂ ಜೀವಂತವಾಗಿರುವ ರಾಯಲ ಸೀಮೆಯ ಶ್ರೀಮಂತ ಮನೆತನದಲ್ಲಿ ಹುಟ್ಟಿದವರಾದರೂ ನಕ್ಷಲ್ ನಾಯಕ ಪೆರಿಟಾಲ ರವಿಯ ಜೋತೆ ಆತ್ಮೀಯ ಸಂಬಂಧ ಹೊಂದಿದ್ದರು. ಈ ವಿರೋಧಾಬಾಸ ನನ್ನಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.<br /><br />ಜೀವನ ಚರಿತ್ರೆಗಳನ್ನು ನಾನು ಬಹು ಇಷ್ಟಪಟ್ಟು ಓದುತ್ತೇನೆ. ಮನುಷ್ಯಸ್ವಭಾವಗಳ ಬಗ್ಗೆ ನನಗೆ ತೀವ್ರ ಕುತೂಹಲ.ನಿನ್ನೆಯ ಪ್ರಜಾವಾಣಿಯಲ್ಲಿ ದಿನೇಶ್ ಅಮಿನಮಟ್ಟು ತಮ್ಮ ಕಾಲಂ ’ಅನಾವರಣ’ದಲ್ಲಿ ”ವೈಎಸ್ ಆರ್ ಜನಪ್ರಿಯತೆಯ ದೀಪದ ಕೆಳಗಿನ ಕತ್ತಲು”ಎಂಬ ಲೇಖನ ಬರೆದಿದ್ದಾರೆ. ವಿಶ್ಲೇಷಣಾತ್ಮಕವಾದ ಈ ಲೇಖನ ನನ್ನ ಹಲವಾರು ಪ್ರಶ್ನೆ, ಸಂದೇಹ, ಕುತೂಹಲಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದೆ. ನಮ್ಮ ಎಷ್ಟು ಜನ ಪತ್ರಕರ್ತರಿಗೆ ಈ ಸಾಮರ್ಥ್ಯ ಇದೆ?<br /><br />ಇವತ್ತಿನ ವಿಜಯಕರ್ನಾಟಕದ ೬ನೇ ’ವಿಶಾಲ’ ಪುಟದಲ್ಲಿ ಒಂದು ಸುದ್ದಿ ಪ್ರಕಟವಾಗಿದೆ. ೨೦೦೭ನೇ ವರ್ಷದ ಶ್ರೇಷ್ಠ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಕನ್ನಡದ ನಟಿ ಉಮಾಶ್ರೀ ಪಡೆದುಕೊಂಡಿದ್ದ ಸಂದರ್ಭದ ಲೇಖನವಿದು. ಅದನ್ನು ಬರೆದವರು ದೇವಶೆಟ್ಟಿ ಮಹೇಶ್ ಎಂಬ ಸಿನಿಮಾ ವರದಿಗಾರ. ಅದರ ಹೆಡ್ಡಿಂಗ್ ಹೇಗಿತ್ತು ಗೊತ್ತೆ? ’ಗಂಡ ಬಿಟ್ಟಿದ್ದಕ್ಕೇ ಅವಾರ್ಡ್ ಬಂತಾ?’ ಇದು ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾದವರನ್ನು ಗೌರವಿಸುವ ಪರಿಯೇ? ಸಮಯಪ್ರಜ್ನೆಯೆಂಬುದು ಇಲ್ಲದಿದ್ದರೆ ಇಂತಹ ಲೇಖನ ಪ್ರಕಟಗೊಳ್ಳುತ್ತದೆ. ಸಮಯಪ್ರಜ್ನೆ ಇದ್ದರೆ ’...ದೀಪದ ಕೆಳಗಿನ ಕತ್ತಲು’ ನಂತಹ ಸಮಯಸ್ಪೂರ್ತಿ ಬರಹ ಹುಟ್ಟಿಕೊಳ್ಳುತ್ತದೆ. ವಿಜಯಕರ್ನಾಟಕದ ಪುಟಗಳನ್ನು ವಿಹಾರ, ವಿರಾಜ, ವಿಶಾಲ, ವಿಚಾರ, ವಿಕಾಸ, ವಿರಾಟ, ವಿಜಯ ಎಂದು ವಿಂಗಡಿಸಿರುವುದಕ್ಕೂ ದೇವಶೆಟ್ಟಿಯ ಲೇಖನಕ್ಕೂ ಏನಾದರೂ ಸಂಬಂಧವಿರಬಹುದೇ?<br /><br />ಪ್ರಜವಾಣಿಯ ಸಹ ಪ್ರಕಟಣೆಯಾದ ’ಸುಧಾ’ದ ಕವರ್ ಸ್ಟೋರಿ ಕೂಡ ವೈಎಸ್ ಆರ್ ಕುರಿತದ್ದೇ ’ದುರಂತ ನಾಯಕ’. ಹನೀಫ್ ಸುಧಾದ ಇನ್ ಚಾರ್ಜ್ ಆದ ಮೇಲೆ ಅದು ಸುದ್ದಿಗೆ ತಕ್ಷಣ ಪ್ರತಿಕ್ರಿಯಿಸುತ್ತಿದೆ. ಹಿಂದೆಲ್ಲಾದರೆ ವೈಎಸ್ ಆರ್ ಲೇಖನ ಮುಂದಿನ ವಾರದಲ್ಲಿ ಬರುತ್ತಿತ್ತು. ಅಥವಾ ಪ್ಯಾಮಿಲಿ ಮ್ಯಾಗಝಿನ್ ಗೆ ಅದು ಸುದ್ದಿಯೇ ಆಗುತ್ತಿರಲಿಲ್ಲವೆನೋ!<br /><br />ಪ್ರತಿ ಮಂಗಳವಾರ ಬೆಳಿಗ್ಗೆ ೯ಘಂಟೆಗೆ ಆಕಾಶವಾಣಿ ಕಾಮನಬಿಲ್ಲಿನಲ್ಲಿ ’ಪತ್ರ-ಪತ್ರಕರ್ತ’ ಎಂಬ ಸಂದರ್ಶನ ಪ್ರಸಾರವಾಗುತ್ತದೆ. ಬೆಳ್ಳನೆಯ ಬೆಳಗಿಗೆ ಮುದ ನೀಡುವ ಕಾರ್ಯಕ್ರಮ. ಇಂದಿನ ಅತಿಥಿ ಖ್ಯಾತ ಬರಹಗಾರರಾದ ಜೋಗಿ. ಎಸ್. ಎಸ್. ಉಮೇಶ್ ನಡೆಸಿಕೊಟ್ಟ ಈ ಕಾರ್ಯಕ್ರಮ ಖುಷಿ ಕೊಟ್ಟಿತು. ಜೋಗಿ ಮನಸ್ಸು ಬಿಚ್ಚಿ ಮಾತಾಡಿದರು. ಧಾರಾವಾಹಿ ಸಂಭಾಷಣೆಗಳಿಗೆ ತಾನೊಂದು ಪ್ಯಾಕ್ಟರಿಯಾದೆ ಎಂದು ತಮ್ಮನ್ನು ತಾವೇ ಗೇಲಿ ಮಾಡಿಕೊಂಡು ನಕ್ಕರು. ತಮ್ಮ ಕನಸು ಕನವರಿಕೆಗಳನ್ನು, ನದಿ, ಕಾಡುಗಳ ಬಗೆಗಿನ ಮೋಹವನ್ನು ಹಂಚಿಕೊಂಡರು. ಟೀವಿ ಧಾರವಾಹಿಗಳು ನಮ್ಮನ್ನು ಒಣಗಿಸಿಬಿಡುತ್ತವೆ; ಅದರಿಂದ ಹೊರಬರುತ್ತೇನೆ; ಸಿನಿಮಾದ ಬಗ್ಗೆ ತನಗೆ ಆಕರ್ಷಣೆಯಿದೆ. ಎಂದು ಮತ್ತೊಮ್ಮೆ ನಕ್ಕರು. ಸಂವೇಧನಾಶೀಲ ಬರಹಗಾರರಾದ, ಅಂತರ್ಮುಖ ವ್ಯಕ್ತಿತ್ವದ ಜೋಗಿಯ ನಗು ಕಾಡಬೆಳದಿಂಗಳಾಗದಿರಲಿ ಎಂಬುದು ನಿಷಾದದ ಹಾರೈಕೆ.<br /><br />ಅರೋಗ್ಯಕರ ಅಂತರದಲ್ಲಿ ನಿಂತು ಪತ್ರಿಕೋಧ್ಯಮವನ್ನು ಗಮನಿಸುವುದಕ್ಕೆ ನನಗೆ ನಿಜಕ್ಕೂ ಖುಷಿಯಿದೆ.Nishada Kanjarihttp://www.blogger.com/profile/00365956604807120745noreply@blogger.com1tag:blogger.com,1999:blog-4261968803082103008.post-801349739160360692009-08-25T00:44:00.001-07:002009-08-25T00:44:59.843-07:00ಬಿಯಾಂಡ್ ದಿ ನ್ಯೂಸ್ -ಇಂದಿನ ಅಗತ್ಯಮೊನ್ನೆ ಯಾರೋ ಹೇಳುತ್ತಿದ್ದರು; ಈಗ ಜರ್ನಲಿಸ್ಟ್ ಗಳು ಪರಸ್ಪರ ಎದುರಾದಾಗ ಕೇಳಿಕೊಳ್ಳುವ ಮೊದಲ ಪ್ರಶ್ನೆ ಎಂದರೆ ’ನನ್ನ ಬ್ಲಾಗ್ ನೋಡಿದ್ಯಾ?’ ಅಂದರೆ ಇಂದಿನ ಪತ್ರಕರ್ತರ ಆದ್ಯತೆಗಳಲ್ಲಿ ಬ್ಲಾಗ್ ನಡೆಸುವುದೂ ಒಂದು.<br />ಹಿಂದೆಲ್ಲಾ ನನ್ನ ವರದಿ ನೋಡಿದ್ರಾ? ಲೇಖನ ಓದಿದ್ರಾ? ನಿಮಗೇನನ್ನಿಸಿತು ಎನ್ನುತ್ತಿದ್ದ ಪತ್ರಕರ್ತರೀಗ ಬ್ಲಾಗ್ ಓದುವಂತೆ ಒತ್ತಾಯಿಸುತ್ತಿದ್ದಾರೆ.<br /><br />ಆ ಬ್ಲಾಗ್ ಗಳನ್ನು ನೀವು ಒಪನ್ ಮಾಡಿ ಓದಿದ್ರೆ ನಿಮ್ಮ ತಲೆ ಕೆಟ್ಟು ಕೆರ ಹಿಡಿದು ಹೋದೀತು. ಅತೃಪ್ತ ಆತ್ಮದ ಹಳವಂಡಗಳ ಸರಮಾಲೆ. ಮನುಷ್ಯ ಮೂಲತಃ ಕ್ರೂರಿ ಎಂಬ ಮನೋವಿಶ್ಲೇಷಕರ ಮಾತನ್ನು ಇವು ಸಾಬೀತು ಪಡಿಸುತ್ತವೆ. ಆತ ಯಾರ ಏಳಿಗೆಯನ್ನೂ ಸಹಿಸಲಾರ. ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸಲು ಅವಕಾಶವಿರುವ ಪತ್ರಕರ್ತರು ಕೂಡ ಕ್ಷುಲಕ ವಿಚಾರಗಳಿಗೆ ಪರಸ್ಪರ ಕೆಸರೆರಚಿಕೊಂಡು ತಮ್ಮ ಕರ್ತವ್ಯವನ್ನು ಮರೆತರೆ?<br /><br />ಪತ್ರಕರ್ತರಲ್ಲಿ ವೃತ್ತಿಪರತೆ ಮಾಯವಾಗುತ್ತಿದೆ ಎಂದು ಎಲ್ಲರೂ ಹೇಳುತ್ತಾರೆ. ಅದಕ್ಕೆ ಉದಾಹರಣೆಗಳೂ ಸಿಗುತ್ತಿವೆ. ಈಗ ಮುದ್ರಣ ಮಾಧ್ಯಮದ ಬಹುತೇಕ ವರದಿಗಾರರು ಪತ್ರಿಕಾ ಗೋಷ್ಠಿಗಳಿಗೆ ಹಾಜರಾಗುವುದಿಲ್ಲ. ಆದರೆ ಸುದ್ದಿ ಬರೆದು ಕೊಡುತ್ತಾರೆ. ಹೇಗೆ ಗೊತ್ತೆ? ಹೇಗೂ ನ್ಯೂಸ್ ಚಾನಲ್ ನವರು ಕವರ್ ಮಾಡುತ್ತಾರಲ್ಲ...ಅದನ್ನೇ ನೋಡಿಕೊಂಡು ನಾಲ್ಕು ಸಾಲು ಗೀಚಿದರಾಯ್ತು ಎಂಬ ಉಢಾಪೆ. ಏನಾದರೂ ಸ್ಪಷ್ಟಿಕರಣ ಬೇಕೆಂದಾದರೆ ಸಂಚಾರಿ ದೂರವಾಣಿ ಇದೆಯಲ್ಲಾ. ಆದರೆ ಬಹಳಷ್ಟು ಪತ್ರಕರ್ತರಿಗೆ ಸಂಶಯಗಳೇ ಹುಟ್ಟುವುದಿಲ್ಲ. ಕುಳಿತಲ್ಲಿಯೇ ವರದಿ ಸಿದ್ದಗೊಳ್ಳುತ್ತದೆ; ತನಿಖಾ ವರದಿ ಹುಟ್ಟಿಕೊಳ್ಳುತ್ತದೆ. ರಾಜಕೀಯ ವಿಶ್ಲೇಷಣೆ ರೂಪು ಪಡೆಯುತ್ತದೆ.<br /><br />ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಂತೆ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾರಂಗವೂ ಸ್ವಸ್ಥ ಸಮಾಜ ರಚನೆಗಾಗಿ ದುಡಿಯುತ್ತಿರಬೇಕು. ಸದಾ ಎಚ್ಚರದಿಂದಿರಬೇಕು. ಆದರೆ ಪತ್ರಕರ್ತರು ತೂಕಡಿಸುತ್ತಿದ್ದಾರೆ. ಇಲ್ಲವೇ ರಾಜಕಾರಣ ಮಾಡುತ್ತಿದ್ದಾರೆ. ಅವರು ಸುದ್ದಿಯ ಬೆನ್ನು ಹತ್ತುವುದಿಲ್ಲ.<br /><br />ಕಳೆದ ವಾರ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು ತಮ್ಮ ಆತ್ಮೀಯರಲ್ಲಿ ಹೇಳಿಕೊಂಡ ಮಾತೊಂದನ್ನು ನಿಷಾದ ಕೇಳಿಸಿಕೊಂಡಿದೆ. ಅವರೊಮ್ಮೆ ವಿಶ್ವವಿದ್ಯಾಲಯದ ಪರೀಕ್ಷೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ಕೊಟ್ಟರಂತೆ. ಹಾಲ್ ಹೊರಗಡೆ ಸೂಟ್ ಕೇಸ್ ಗಳು, ಟ್ರಾವಲ್ ಬ್ಯಾಗ್ ಗಳು ಸಾಲಾಗಿ ಇಟ್ಟುಕೊಂಡಿತ್ತಂತೆ. ವಿಚಾರಿಸಿದಾಗ ಅವೆಲ್ಲಾ ಪರೀಕ್ಷೆ ಬರೆಯಲು ಬಂದ ನಾರ್ತ್ ಇಂಡಿಯನ್ಸ್ ಸ್ಟೂಡೆಂಟ್ಸ್ ಗಳದು ಅಂತೆ. ಈ ವಿದ್ಯಾರ್ಥಿಗಳು ಕ್ಲಾಸಿಗೆ ಅಟೆಂಡ್ ಆಗುವುದಿಲ್ಲ. ಆದರೆ ಅವರಿಗೆ ಹಾಜರಿ ನೀಡಲಾಗುತ್ತದೆ. ಅವರು ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಫೈಲ್ ಆಗುತ್ತಾರೆ. ಅದಕ್ಕಾಗಿ ರಿವ್ಯಾಲ್ಯುವೇಷನ್ ಗೆ ಹಾಕುತ್ತಾರೆ. ಅಲ್ಲಿ ಅವರನ್ನು ಪಾಸು ಮಾಡಿಸಲಾಗುತ್ತದೆ. ಅಂತಹ ಒಂದು ಜಾಲವೇ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಪ್ರಮುಖ ರಾಜಕಾರಣಿಯೊಬ್ಬರು ಈ ಜಾಲದ ಹಿಂದಿದ್ದಾರೆ ಎನ್ನಲಾಗುತ್ತಿದ್ದಾರೆ.<br /><br />ಮೇಲಿನ ವಿಷಯ ಬಿಡಿ; ಕಳೆದ ಅಲ್ಲ ಅದಕ್ಕೂ ಹಿಂದಿನ ವಾರ ಕರ್ನಾಟಕ ಮತ್ತು ಅಂಧ್ರ ಗಡಿ ವಿವಾದದ ಬಗ್ಗೆ ಓಬಳಾಪುರ ಗಣಿಗಾರಿಕೆ ಕುರಿತಂತೆ ಕೇಂದ್ರ ಸರ್ವೆ ತಂಡ ಆಗಮಿಸಿದ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ ನಿಜ ವಿಷಯ ಏನೆಂದರೆ; ಸರ್ವೆ ತಂಡ ಬಂದದ್ದು ನಿಜ,ಆದರೆ ಅದು ಬಂದಿದ್ದು ಅಂದ್ರದ ಎರಡು ಗಣಿಗಳ ನಡುವಿನ ಬಿಕ್ಕಟ್ಟು ಪರಿಶೀಲನೆಗೆ. ಪತ್ರಕರ್ತರು ಕೌಂಟರ್ ಚೆಕ್ ಮಾಡಬೇಡವೇ?<br /><br />ಮೊನ್ನೆ ಗೋವಿಂದರಾಜನಗರ ಉಪಚುನಾವಣೆ ನಡೆಯಿತ್ತಲ್ಲಾ... ಬಹಿರಂಗ ಪ್ರಚಾರ ನಡೆದ ಸಂಜೆ ೬ ಘಂಟೆಗೆ ಸುವರ್ಣ ಚಾನಲ್ ನಲ್ಲಿ ಕಾಂಗ್ರೇಸ್ ಅಬ್ಯರ್ಥಿ ಪ್ರಿಯಾಕೃಷ್ಣನ ಸಂದರ್ಶನ ಪ್ರಸಾರ ಆರಂಭವಾಗಿತ್ತು. ಸುಂದರವಾದ ಸಂದರ್ಶಕಿ ಪ್ರಶ್ನೆ ಹಾಕುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಟೀವಿ ಪರದೆಯ ಮೇಲೆ ಪ್ರಾಯೋಜಿತ ಕಾರ್ಯಕ್ರಮ ಎಂಬ ಮಾಹಿತಿ ಮೂಡಿಬಂತು. ಅದಾದ ಸ್ವಲ್ಪ ಹೊತ್ತಿನಲ್ಲಿ ಕಾರ್ಯಕ್ರಮವೇ ನಿಂತು ಹೋಗಿ ಬೇರೆ ಕಾರ್ಯಕ್ರಮ ಬಂತು. ಅಲ್ಲಿ-ಇಲ್ಲಿ ವಿಚಾರಿಸಿದಾಗ ಪೇಪರುಗಳನ್ನು ಸೆಂಟಿಮೀಟರ್ ಗಳಲ್ಲಿ ಖರೀದಿ ಮಾಡಿ ಸುದ್ದಿಗಳನ್ನು ಪ್ರಚಾರ ಮಾಡಿದ ಹಾಗೆ ಸುವರ್ಣ ನ್ಯೂಸ್ ಚಾನಲ್ ನ ಅರ್ಧ ಘಂಟೆಯ ಸ್ಲಾಟ್ ಪರ್ಚೇಸ್ ಮಾಡಿದ್ದರು. ಆದರೆ ’ಪ್ರಾಯೋಜಿತ’ ಎಂಬ ಸ್ಟಿಕ್ಕರ್ ಬಂದಾಗ ಅವರು ಹಿಂತೆಗೆದರು. ಯಾಕೆಂದರೆ ಚುನಾವಣಾ ಆಯೋಗ ಅದಕ್ಕೂ ಲೆಖ್ಖ ಕೇಳುತ್ತೆ.<br /><br />ಮುಂದೆ ನಡೆದ ಬೆಳವಣಿಗೆಗಳು ಟಾಬ್ಲಾಯ್ಡ್ ಪತ್ರಿಕೆಗಳಿಗೆ ಲೇಖನವಾಗಬಲ್ಲುದು. ಕಾಂಗ್ರೇಸ್ ಸಂಪರ್ಕಿಸಿದ್ದು ಟೀವಿ೯ ಚಾನಲ್ ಇರಬಹುದೇ? ಯಾಕೆಂದರೆ ಮರುದಿನದಿಂದಲೇ ಬಿಜೇಪಿ ಅಭ್ಯರ್ಥಿ ಸೋಮಣ್ಣನ ವಿರೋಧಿ ನ್ಯೂಸ್ ಗಳು ಮತ್ತೆ ಮತ್ತೆ ಟೀವಿ ೯ನಲ್ಲಿ ಪ್ರಸಾರಗೊಂಡವು.<br /><br />ಇದನ್ನೆಲ್ಲಾ ಪತ್ರಕರ್ತನಾದವನು ಗಮನಿಸುತ್ತಿರಬೇಕು. ಟೀವಿ ಚಾನಲ್ ಗಳಲ್ಲಿ ಬರೆಯಲು ಬರುವವರು ಕಡಿಮೆ. ವಾರ್ತಾವಾಚಕಿಯರು ಗೊಂಬೆಗಳು. ಬರೆದ್ದದ್ದನ್ನಷ್ಟೇ ಓದುತ್ತಾರೆ. ಕ್ಯಾಮರವೇ ಬಹಳಷ್ಟನ್ನು ಹೇಳುತ್ತದೆ. ದಿನಪತ್ರಿಕೆಗಳು ಸುದ್ದಿಯನ್ನಷ್ಟೇ ನೀಡುತ್ತವೆ. ನಿನ್ನೆ ಟೀವಿಯಲ್ಲಿ ನೋಡಿದ್ದಷ್ಟೇ ವಿವರಗಳು ಇಂದು ಪತ್ರಿಕೆಯಲ್ಲಿ ಬರುವುದಾದರೆ ಪತ್ರಿಕೆಗಳು ಯಾಕೆ ಬೇಕು? ಸುದ್ದಿಯಾಚೆಗಿನ ಸುದ್ದಿ ನಮಗೆ ಬೇಕು- ’ಬಿಯಾಂಡ್ ದಿ ನ್ಯೂಸ್’ ಅದು ಇಂದಿನ ಅಗತ್ಯ.Nishada Kanjarihttp://www.blogger.com/profile/00365956604807120745noreply@blogger.com1tag:blogger.com,1999:blog-4261968803082103008.post-18209401275948568402009-08-13T21:32:00.000-07:002009-08-13T21:34:36.617-07:00ಶಶಿಧರ್ ಭಟ್ v/s ರಂಗನಾಥ ಸಂಕೇತಿ<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEg3rYe4xt0nW3zS3DkIq3cYflla6gTNojhV0rX8T-2u9QfWc7n4j5DgXCSXpJ3eY2oj2khXJwKhHthcdvyHqkUpziaswPQy3SApaWnaFQ0huBy4G77xVy_htWrU-OWySaTg2haedknJ0kme/s1600-h/asianet_suvarna_news.jpg"><img style="margin: 0px auto 10px; display: block; text-align: center; cursor: pointer; width: 132px; height: 99px;" src="https://blogger.googleusercontent.com/img/b/R29vZ2xl/AVvXsEg3rYe4xt0nW3zS3DkIq3cYflla6gTNojhV0rX8T-2u9QfWc7n4j5DgXCSXpJ3eY2oj2khXJwKhHthcdvyHqkUpziaswPQy3SApaWnaFQ0huBy4G77xVy_htWrU-OWySaTg2haedknJ0kme/s320/asianet_suvarna_news.jpg" alt="" id="BLOGGER_PHOTO_ID_5369673197726704434" border="0" /></a><br /><br /><br />ಸುವರ್ಣ ನ್ಯೂಸ್ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕನ್ನಡ ಪ್ರಭದ ಎಚ್. ಆರ್ ರಂಗನಾಥ್ ನೇಮಕಗೊಂಡಿದ್ದಾರೆ. ಇದುವರೆಗೆ ಸುವರ್ಣ ನ್ಯೂಸ್ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾಗಿದ್ದ ಶಶಿಧರ್ ಭಟ್ ಗೆ ಪ್ರಮೋಶನ್ ನೀಡಿ ಜ್ಯುಪಿಟರಿಗೆ ಕರೆಸಿಕೊಳ್ಳಲಾಗಿದೆ. ಜ್ಯುಪಿಟರ್, ಸುವರ್ಣ ನ್ಯೂಸ್ ಚಾನಲ್ ನ ಮಾಲಕರಾದ ಸಂಸದ ರಾಜೀವ್ ಚಂದ್ರಶೇಖರವರ ಬ್ಯುಸಿನೆಸ್ ಜಾಲದ ಕೇಂದ್ರ ಆಡಳಿತ ಸಂಸ್ಥೆ. ಭವಿಷ್ಯದಲ್ಲಿ ಈ ಸಂಸ್ಥೆಯಿಂದ ಆರಂಭವಾಗಲಿರುವ ಕನ್ನಡ ದಿನ ಪತ್ರಿಕೆಯ ಜವಾಬ್ದಾರಿ ಭಟ್ಟರದೇ. <br /><br />ಸುವರ್ಣ ಚಾನಲ್ ಆರಂಭವಾಗಿ ಎರಡೂವರೆ ವರ್ಷಗಳಷ್ಟೇ ಉರುಳಿವೆ. ಬಹುಶಃ ನ್ಯೂಸ್ ಚಾನಲ್ ಗೆ ಒಂದು ವರ್ಷ. ಯಾವಾಗಲೂ ಒಂದು ಸಂಸ್ಥೆಯನ್ನು ಕಟ್ಟುವುದು ಕಷ್ಟದ ಕೆಲಸ. ಅದು ಬಟ್ಟ ಬಯಲಲ್ಲಿ ದಿಕ್ಕು ಕಾಣದೆ ನಿಂತಂತೆ. ಒಳ್ಳೆಯ ಪೌಂಡೇಶನ್ ಹಾಕಿ ಕಟ್ಟಡ ನಿರ್ಮಿಸಿದಂತೆ. ಕಟ್ಟಿದ ಮೇಲೆ ಅದಕ್ಕೆ ಸುಣ್ಣ ಬಣ್ಣ ಬಳಿಯುವ ಕೆಲಸ ಯಾರು ಬೇಕಾದರು ಮಾಡಬಹುದು. ಮಹಡಿ ಕೂಡ ಕಟ್ಟಬಹುದು. ಈಗ ಸುಣ್ಣ ಬಣ್ಣ ಬಳಿಯುವ, ಮಹಡಿ ಕಟ್ಟುವ ಕೆಲಸಕ್ಕೆ ರಂಗನಾಥ್ ಬರುತ್ತಿದ್ದಾರೆ. ಇದರ ಬಗ್ಗೆ ಹಲವಾರು ಬ್ಲಾಗ್ ಗಳಲ್ಲಿ ಈಗಾಗಲೇ ಚರ್ಚೆ ನಡೆದಿದೆ. ವಿಮರ್ಶಕಿ ಮೊದಲು ಬರೆದಳು. ನಂತರ ಸುದ್ದಿಮಾತು ಬರೆಯಿತು. ಸ್ವತಃ ಭಟ್ಟರೇ ತಮ್ಮ ಬ್ಲಾಗ್ ’ಕುಮ್ರಿ’ಯಲ್ಲಿ ಬರೆದುಕೊಂಡರು. ನಾನು ನನ್ನ ಪರಿಚಯದಲ್ಲೇ ಹೇಳಿಕೊಂಡಂತೆ ಅಲೆಮಾರಿ. ಎಲ್ಲೋ ತಿರುಗಾಡಲು ಹೋಗಿದ್ದೆ. ಬಂದೊಡನೆ ಇದನ್ನು ಬರೆಯಲಾರಂಭಿಸಿದೆ.ಉಳಿದ ಬ್ಲಾಗ್ ಗಳಲ್ಲಿ ಪ್ರಸ್ತಾಪವಾದ ಸಂಗತಿಗಳನ್ನು ನಾನು ಮತ್ತೆ ಪ್ರಸ್ತಾಪಿಸುವುದಿಲ್ಲ.<br /><br />ನನಗೆ ತಿಳಿದು ಬಂದಂತೆ ರಂಗನಾಥ ಮತ್ತು ಶಶಿಧರ ಭಟ್ಟರ ಪರಿಚಯಕ್ಕೆ ಕಾಲು ಶತಮಾನದ ಇತಿಹಾಸವಿದೆ.ಅದು ಗೆಳೆತನವೂ ಆಗಿರಬಹುದು ಅಥವಾ ವೃತ್ತಿ ಬಂಧವೂ ಆಗಿರಬಹುದು. ಕೌಟುಂಬಿಕ ಸೇಹವೂ ಆಗಿರಬಹುದು. ಹೀಗೆ ಸಂಶಯ ಪಡಲು ಕಾರಣವಿದೆ. ಬ್ಯಾಚುಲರ್ ಬದುಕಿನಲ್ಲಿ ಶಶಿಧರ್ ಮತ್ತು ರಂಗನಾಥ್ ಒಂದೇ ಮನೆಯಲ್ಲಿದ್ದರು. ಭಟ್ಟರು ಮದುವೆಯಾದ ಮೇಲೂ ರಂಗನಾಥ ಅದೇ ಮನೆಯಲ್ಲಿ ಸ್ವಲ್ಪ ಕಾಲ ಇದ್ದರು.<br /><br />ಶಶಿಧರ್ ಭಟ್ ಕೆಲಸ ಮಾಡುತ್ತಿದ್ದ ಕನ್ನಡ ಪ್ರಭಕ್ಕೆ ರಂಗನಾಥ್ ಕ್ರೈಮ್ ರಿಪೋರ್ಟರ್ ಆಗಿ ಸೇರಿಕೊಂಡವರು. ಕ್ರಮೇಣ ಮ್ಯಾನೇಜ್ ಮೆಂಟಿಗೆ ಹತ್ತಿರವಾಗತೊಡಗಿದರು. ಶಶಿಧರ್ ಭಟ್ಟರ ಮುಖ್ಯವರದಿಗಾರನ ಹುದ್ದೆ ಮೇಲೆ ರಂಗನಾಥ್ ಕಣ್ಣು ಬಿತ್ತು. ಭಟ್ಟರು ಏನು ಮಾಡುವುದೆಂದು ತೋಚದೆ ಒದ್ದಾಡುತ್ತಿರುವಾಗ ಅವರಿಗೆ ಎಷ್ಯಾನೆಟ್ ಚಾನಲ್ ನಿಂದ ಕರೆ ಬಂತು. ’ಕಾವೇರಿ’ ಚಾನಲ್ ಭಟ್ಟರು ಕಟ್ಟಿದರು. ಅದು ಬಾಗಿಲು ಮುಚ್ಚಿದ ಮೇಲೆ ಸ್ವಂತ ಪ್ರೋಡಕ್ಷನ್ ಹೌಸ್ ಆರಂಭಿಸಿದರು. ಕಾವೇರಿಯನ್ನು ಕಟ್ಟಿಕೊಂಡು ಭಟ್ಟರು ಒಬ್ಬರೇ ಹೆಣಗಾಡಿದ್ದನ್ನು ಮರೆಯದ ಏಷ್ಯಾನೆಟ್ ಆಡಳಿತ ಮಂಡಳಿ ಮತ್ತೆ ಅವರನ್ನು ಸುವರ್ಣಕ್ಕೆ ಕರೆಸಿಕೊಂಡಿತು. ಸುವರ್ಣ ಉಳಿದ ಚಾನಲ್ ಗಳ ಜೋತೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆಯತೊಡಗಿತು. ಉತ್ತೇಜಿತರಾದ ಮ್ಯಾನೇಜ್ ಮೆಂಟ್ ಸುವರ್ಣ ನ್ಯೂಸ್ ಚಾನಲ್ ಆರಂಬಿಸಿತು. ಅದು ಕೂಡ ಉಳಿದೆರಡು ಚಾನಲ್ ಗಳ ಮಧ್ಯೆ ತನ್ನ ಕ್ರೆಡಿಬಿಲಿಟಿಯನ್ನು ಕಾಯ್ದುಕೊಂಡಿತು. ಆದರೆ ಟಿ.ಆರ್.ಪಿ ಏರಲಿಲ್ಲ. ಭಟ್ಟರ ಕುರ್ಚಿಯ ಮೇಲೆ ರಂಗನಾಥನ ಕಣ್ಣು ಬಿತ್ತು.<br /><br />ಶಶಿಧರ್ ಮತ್ತು ರಂಗನಾಥನ ಗುಣ ಸ್ವಭಾವವನ್ನು ಸ್ವಲ್ಪ ವಿಶ್ಲೇಷಿಸಿದರೂ ಸಾಕು ಯಾಕೆ ಹೀಗಾಗುತ್ತದೆ ಎಂಬುದು ಗೊತ್ತಾಗಿಬಿಡುತ್ತದೆ. ಶಶಿಧರ್ ಗುಂಪುಗಾರಿಕೆ ಮಾಡುವವರಲ್ಲ. ತನಗನ್ನಿಸಿದ್ದನ್ನು ಒಬ್ಬಂಟಿಯಾಗಿಯೇ ಮಾಡುತ್ತಾರೆ; ಎದುರಿಸುತ್ತಾರೆ. ಅದು ತನ್ನ ಮೇಲಿರುವ ಅತಿಯಾದ ನಂಬಿಕೆಯೂ ಇರಬಹುದೇನೋ. ಹತ್ತಾರು ಪತ್ರಿಕೆಗಳನ್ನು ಹತ್ತಿಳಿದು ಇಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬಂದವರು. ಹಾಗೆ ಪಥ ಬದಲಿಸಿದಾಗಲೆಲ್ಲ ವಾರಗಟ್ಟಲೆ ನಿದ್ದೆ ಮಾಡುತ್ತಾ, ಪಾನ್ ಜಗಿದುಕೊಂಡು, ಫಿಲಾಸಪಿ ಬುಕ್ ಓದುತ್ತಾ ಕಾಲ ಕಳೆಯುವ ಅಸಾಮಿ ಅವರು. ಕರಪ್ಟ್ ಆಲ್ಲ. ಅವರ ಮೇಲೆ ಆಪಾದನೆಗಳಿಲ್ಲ. ಆದರೆ ಸ್ನೇಹವನ್ನಾಗಲಿ, ಬಂಧುತ್ವವನ್ನಾಗಲಿ ಅಧಿಕಾರವನ್ನಾಗಲಿ ಸಂಭಾಳಿಸುವ ಕಲೆ ಗೊತ್ತಿಲ್ಲದವರು. ಹಾಗಾಗಿ ಅವರ ಹಿಂದೆ ’ಹೌದಪ್ಪ’ಗಳಿಲ್ಲ. ಅಪೀಸಿನಲ್ಲಿ ಯಾರಾದರೂ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ ಅವರನ್ನು ಸೌಮ್ಯವಾಗಿಯೇ ಗದರುತ್ತಾರೆ. ಅವರು ತಿದ್ದಿಕೊಳ್ಳದಿದ್ದರೆ ತಾವೇ ಅದನ್ನು ಮಾಡುತ್ತಾರೆ. ಕತ್ತೆ ದುಡಿದ ಹಾಗೆ ದುಡಿಯುತ್ತಾರೆ.ಅದು ಅವರ ದೌರ್ಬಲ್ಯವೂ ಹೌದು; ಶಕ್ತಿಯೂ ಹೌದು.<br /><br />ರಂಗನಾಥ್ ಮಹತ್ವಾಕಾಂಕ್ಷಿ. ಮೈಸೂರಿನ ’ಮಹಾನಂದಿ’ ದಿನ ಪತ್ರಿಕೆಯಿಂದ ಪತ್ರಿಕಾರಂಗಕ್ಕೆ ಬಂದವರು. ವಿ. ಎನ್. ಸುಬ್ಬಾರಾವ್ ನೇತೃತ್ವದ’ ನಾವು-ನೀವು’ ವಾರಪತ್ರಿಕೆಯ ಮೂಲಕ ಬೆಂಗಳೂರಿಗೆ ಬಂದರು. ಅಲ್ಲಿಯೂ ಶಶಿಧರ್ ಭಟ್ಟರೇ ಮುಖ್ಯ ವರದಿಗಾರರಾಗಿದ್ದರು. ಅಲ್ಲಿಯೂ ರಂಗನಾಥ್ ಚಿಕ್ಕ ಪುಟ್ಟ ತರಲೆ ಮಾಡುತ್ತಿದ್ದರು. ತುಂಬಾ ಸುಂದರವಾಗಿ ಹೊರಬರುತ್ತಿದ್ದ ಆ ಪತ್ರಿಕೆ ಬಹು ಕಾಲ ಬಾಳಲಿಲ್ಲ. ಅನಂತರ ಶಶಿಧರ್ ಕನ್ನಡಪ್ರಭ ಸೇರಿದರು. ರಂಗನಾಥ್ ಇಂಗ್ಲಿಷ್ ಪತ್ರಿಕೆಗಳಿಗೆ ಬರೆಯುತ್ತಾ ಅಲ್ಲಿ- ಇಲ್ಲಿ ಓಡಾಡಿಕೊಂಡಿದ್ದರು. ಮುರ್ನಾಲ್ಕು ವರ್ಷಗಳ ನಂತರ ರಂಗನಾಥ್ ಕೂಡಾ ಕನ್ನಡ ಪ್ರಭ ಸೇರಿಕೊಂಡರು.<br /><br />ಈಗ ಇತಿಹಾಸ ಮರುಕಳಿಸುತ್ತಿದೆ. ಭಟ್ಟರು ಕನ್ನಡಪ್ರಭ ಬಿಟ್ಟು ಹತ್ತು ವರ್ಷ ಕಳೆದಿದೆ. ಆದರೆ ಇನ್ನೂ ಅವರು ತಾಂತ್ರಿಕವಾಗಿ ಅಲ್ಲಿಯ ಉದ್ಯೋಗಿಯೇ. ಯಾಕೆಂದರೆ ಅವರ ಅಕೌಂಟ್ ಇನ್ನೂ ಸೆಟ್ಲಾಗಿಲ್ಲ.<br /><br />ಭಟ್ಟರ ಹಾಗೆ ರಂಗನಾಥ್ ಸೌಮ್ಯ ಅಲ್ಲ. ಅವರೊಬ್ಬ ಡಿಕ್ಟೇಟರ್. ತನ್ನ ಸಬಾರ್ಡಿನೇಟರನ್ನು ಸದಾ ಮುಷ್ಟಿಯಲ್ಲಿಟ್ಟುಕೊಳ್ಳಲು ಬಯಸುತ್ತಾರೆ. ಒಂದು ಉದಾಹರಣೆಯನ್ನು ಕೊಡುತ್ತೇನೆ. ಕಳೆದ ಚುನಾವಣೆಯಲ್ಲಿ ಕನ್ನಡಪ್ರಭದ ಹಿರಿಯ ವರದಿಗಾರರೊಬ್ಬರನ್ನು ಟೀವಿ ಚಾನಲ್ಲೊಂದು ಡಿಸ್ಕಷನ್ ಗೆ ಕರೆದಿತ್ತು. ಆದರೆ ಅವರು ಬರಲಿಲ್ಲ. ಯಾಕೆಂದರೆ ಟೀವಿ ಡಿಸ್ಕಷನ್ ಗೆ ಹೋಗಬಾರದೆಂದು ಸಂಪಾದಕರ ಅಪ್ಪಣೆಯಾಗಿತ್ತಂತೆ.<br /><br />ಒಂದು ಪತ್ರಿಕೆಯ ಸಂಪಾದಕರಾಗಿದ್ದರೂ ಸಂಪಾದಕಿಯ ಬರೆಯದ ಸಂಪಾದಕರು ಅವರು. ಆದರೆ ತಮ್ಮ ಸುತ್ತ ಹೊಗಳು ಭಟ್ಟರ ಪಡೆಯೊಂದನ್ನು ಕಟ್ಟಿಕೊಂಡಿರುತ್ತಾರೆ. ತಮ್ಮ ಮೇಲೆಯೇ ನಂಬಿಕೆಯಿಲ್ಲದ, ಕೀಳರಿಮೆಯಿಂದ ಬಳಲುತ್ತಿರುವ ವ್ಯಕ್ತಿಗಳು ಹೀಗಿರುತ್ತಾರೆ. ಅವರು ಯಾರನ್ನೂ ನಂಬುವುದಿಲ್ಲ. ನಂಬಿದಂತೆ ನಟಿಸುತ್ತಾರೆ. ಸುಳ್ಳು ಆಶ್ವಾಸನೆಗಳನ್ನು ಕೊಡುತ್ತಾರೆ. ಅದಕ್ಕೆ ಇರಬಹುದು ರಂಗನಾಥರಿಗೆ ಪತ್ರಿಕೋಧ್ಯಮದಲ್ಲಿ ’ರೀಲ್ ರಂಗ’ ಎಂಬ ಹೆಸರಿದೆ. ಬಹುಶಃ ಈ ಗುಣಗಳೇ ರಾಜೀವ್ ಚಂದ್ರಶೇಖರ್ ನ್ನು ಮರಳು ಮಾಡಿರಬಹುದು. ’ಸೆಲ್ಫ್ ಮಾರ್ಕೇಟಿಂಗ್’ ಎಂಬುದು ರಂಗನಾಥರ ಗುಣ ವಿಶೇಷ. ಆದರೆ ಅದು ಟೀವಿ ಮುಂದೆ ನಡೆಯದು. ಕ್ಯಾಮರ ಎಲ್ಲವನ್ನೂ ಬಿಚ್ಚಿಡುತ್ತದೆ. ಡಿಷ್ಕಷನ್ ನಲ್ಲಿ ನೀವು ಗಮನಿಸಿರಬಹುದು.ಅವರು ಕ್ಯಾಮರ ನೋಡಿ ಮಾತಾಡುವುದಿಲ್ಲ; ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ. ಆದರೆ ಟೀವಿಗೆ ಅದೇ ಮುಖ್ಯ.<br /><br />ಈಗ ರಂಗನಾಥ್ ಸುವರ್ಣ ನ್ಯೂಸ್ ಚಾನಲ್ ಅನ್ನು ನಂ.ಒಂದು ಚಾನಲ್ ಮಾಡಲು ಹೊರಟಿದ್ದಾರೆ. ರವಿ ಹೆಗಡೆ ಎಂಬ ಪೇಜ್ ಲೇಔಟ್ ಅರ್ಟಿಸ್ಟ್, ಜೋಗಿ-ಉದಯಮರಕಿಣಿ ಎಂಬ ಸಿನಿಮಾ ಬರಹಗಾರರು ಅವರ ಹಿಂದೆ ಹೊರಟು ನಿಂತಿದ್ದಾರೆ. ವಿಜಯ ಕರ್ನಾಟಕದ ಆರ್ಟಿಸ್ಟ್ ಒಬ್ಬರು ರಂಗನಾಥ್ ಬಳಗ ಸೇರಲು ರಾಜಿನಾಮೆ ಕೊಟ್ಟರಂತೆ ಎಂಬ ಸುದ್ದಿ ದಟ್ಟವಾಗಿ ಹರಡಿದ್ದು ಹಾಗೆಯೇ ಕರಗಿ ಹೋಗಿದೆ. ಟೀವಿ೯ಗೂ ರಂಗನಾಥ್ ಬಲೆ ಬೀಸಿದ್ದಾರಂತೆ. ’ಮೊದಲು ನೀವು ಹೋಗಿ ಸ್ಟಾಂಡ್ ಆಗಿ ಆಮೇಲೆ ನೋಡೋಣ’ ಎಂದಿದ್ದಾರಂತೆ ರಂಗನಾಥ್ ಭಾರದ್ವಾಜ್. ಪ್ರಿಂಟ್ ಮೀಡಿಯಾದಿಂದ ಇಷ್ಟು ದೊಡ್ಡ ದಂಡು ಸುವರ್ಣಕ್ಕೆ ಹೋದರೆ ಅಲ್ಲೊಂದಷ್ಟು ಜನ ಕೆಲಸ ಕಳೆದುಕೊಳ್ಳಬಹುದು. ಸೀಮಿತ ಅವಕಾಶಗಳುಳ್ಳ ಕನ್ನಡ ಪತ್ರಿಕಾರಂಗ ಈ ಎಲ್ಲಾ ಬೆಳವಣಿಗೆಗಳನ್ನು ಕುತೂಹಲದಿಂದ ಗಮನಿಸುತ್ತಿದೆ.Nishada Kanjarihttp://www.blogger.com/profile/00365956604807120745noreply@blogger.com0tag:blogger.com,1999:blog-4261968803082103008.post-69439359534862498612009-07-27T06:48:00.000-07:002009-07-27T06:50:31.852-07:00ದೃಶ್ಯ ಮಾಧ್ಯಮವೆಂಬ ’ಅಗ್ನಿಗೋಳ’<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEi5KuewwLbHNJRQYSxRtotN6qaxclzmWsJBRv-TKIzhfyL5-lhUU6q6Kse0_on9lFEVgQ8CR6H5lZ7hWpo465_rfgEJd5Y6CDCDOfELf0f3ZImNPi8nsmfa_IxPsImaFyb8fl0By3CquAG-/s1600-h/1498419472_8f356f4e03.jpg"><img style="margin: 0px auto 10px; display: block; text-align: center; cursor: pointer; width: 240px; height: 320px;" src="https://blogger.googleusercontent.com/img/b/R29vZ2xl/AVvXsEi5KuewwLbHNJRQYSxRtotN6qaxclzmWsJBRv-TKIzhfyL5-lhUU6q6Kse0_on9lFEVgQ8CR6H5lZ7hWpo465_rfgEJd5Y6CDCDOfELf0f3ZImNPi8nsmfa_IxPsImaFyb8fl0By3CquAG-/s320/1498419472_8f356f4e03.jpg" alt="" id="BLOGGER_PHOTO_ID_5363136920944433762" border="0" /></a><br /><br /><br /><br />ಪತ್ರಿಕೋದ್ಯಮ ಎಂಬುದು ಅದರ ಹೆಸರಲ್ಲೇ ಅಡಗಿರುವಂತೆ ಅದೊಂದು ಉಧ್ಯಮ. ಉಧ್ಯಮ ಅಂದ ಮೇಲೆ ಲಾಭ ನಷ್ಟದ ಲೆಕ್ಕಾಚಾರ ಇದ್ದದ್ದೇ. ಹಿಂದೆಲ್ಲಾ ಅದು ಎದ್ದು ಕಾಣುತ್ತಿರಲಿಲ್ಲ. ಅದನ್ನು ಸೇವಾಕ್ಶೇತ್ರವೇಂದೇ ಪರಿಗಣಿಸಲಾಗುತ್ತಿತ್ತು. ಅದು ನಿಜವೂ ಆಗಿತ್ತು. ಸಮಾಜದ ಬಗ್ಗೆ, ಸಾಮಾಜಿಕ ಬದಲಾವಣೆಯ ಬಗ್ಗೆ ಕನಸಿದ್ದವರು, ತುಡಿತವಿದ್ದವರು ಪತ್ರಕರ್ತರಾಗುತ್ತಿದ್ದರು. ಹಾಗಾಗಿ ಸಂಬಳ ನಗಣ್ಯವಾಗುತ್ತಿತ್ತು. ಬದುಕು ಹೇಗೋ ಸಾಗುತ್ತಿತ್ತು.<br /><br />ಆದರೆ ಈಗ ಕಾಲ ಬದಲಾಗಿದೆ. ಮೌಲ್ಯಗಳೂ ಬದಲಾಗಿವೆ. ಪತ್ರಿಕೋಧ್ಯಮಕ್ಕೆ ಗ್ಲಾಮರ್ ಬಂದಿದೆ. ಈಗದು ಥಳುಕು ಬಳುಕಿನ ಲೋಕ. ಅಸ್ಖಲಿತವಾದ ಮಾತು, ವಯ್ಯಾರದ ನಡೆನುಡಿ, ಆಕರ್ಷಕ ವ್ಯಕ್ತಿತ್ವ, ಹದಿನೆಂಟರಿಂದ ೨೪ರೊಳಗಿನ ವಯೋಮಿತಿಯಿದ್ದರೆ ಯಾರು ಬೇಕಾದರೂ ದೃಶ್ಯ ಮಾಧ್ಯಮದಲ್ಲಿ ಪತ್ರಕರ್ತರಾಗಲು ಪ್ರಯತ್ನಿಸಬಹುದು; ತಲೆಯಲ್ಲಿ ಮಿದುಳಿಲ್ಲದಿದ್ದರೂ...! ಮುದ್ರಣ ಮಾಧ್ಯಮಕ್ಕೆ ಇಷ್ಟು ಸುಲಭದಲ್ಲಿ ಪ್ರವೇಶ ಸಾಧ್ಯವಿಲ್ಲ. ಅಲ್ಲಿ ಸಾಹಿತ್ಯ, ಕಲೆ, ಸಾಮಾನ್ಯ ಜ್ನಾನದ ಅರಿವಿನ ಜೊತೆ ಭಾಷೆಯ ಬಗ್ಗೆ ಹಿಡಿತವಿರಬೇಕು.<br /><br />ಈಗಂತೂ ಪತ್ರಿಕೋಧ್ಯಮ ಸೇವಾಕ್ಶೇತ್ರವಲ್ಲ. ಹಾಗಾಗಿ ಸಾಪ್ಟ್ ವೇರ್ ಕ್ಶೇತ್ರದಲ್ಲಿ ಸಿಗುವಷ್ಟೇ, ಕೆಲವೊಮ್ಮೆ ಅದಕ್ಕಿಂತಲೂ ಜಾಸ್ತಿ ಸಂಬಳ ಸಿಗುತ್ತದೆ. ಸಿಗದವರು ಉಳಿದ ಕ್ಷೇತ್ರಗಳಂತೆ ಇಲ್ಲಿಯೂ ಗಿಂಬಳಕ್ಕಾಗಿ ಕೈಚಾಚುತ್ತಾರೆ. ರಾಜಕಾರಣಿಗಳ ಗುಟ್ಟು ಕಾಪಾಡುತ್ತಾರೆ; ಉಧ್ಯಮಿಗಳ ಹಿತ ಕಾಯುತ್ತಾರೆ. ಅಂತಹ ಪತ್ರಕರ್ತನೊಬ್ಬನ ಬಗ್ಗೆ ’ಅಗ್ನಿ’ ವಾರಪತ್ರಿಕೆ ಈ ವಾರ ಕವರ್ ಸ್ಟೋರಿ ಮಾಡಿದೆ.<br /><br />’ಟಿವಿ೯ನಲ್ಲಿ ಕ್ರಿಮಿ ರೋಲ್ ಕಾಲ್ ರಾಘವೇಂದ್ರ’ ಎಂಬುದು ಅದರ ಹೆಡ್ಡಿಂಗ್. ಮಂಜುನಾಥ ಅದ್ದೆ ಬರೆದಿರುವ ಈ ಲೇಖನ ಸಮತೂಕವುಳ್ಳವಾದ ವರದಿಯಾಗಿದ್ದರೂ ’ಅಗ್ನಿ’ ಸಮತೂಕವುಳ್ಳ ಪತ್ರಿಕೆಯೇನಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಅಥವಾ ಅವಕಾಶ ಕಲ್ಪಿಸಿಕೊಂಡು ಬ್ರಾಹ್ಮಣರನ್ನು ಬಯ್ಯುವುದನ್ನು, ಶೂದ್ರರನ್ನು ಹೊಗಳುವುದನ್ನು ಅವರು ತಪ್ಪಿಸಿಕೊಳ್ಳುವುದಿಲ್ಲ.<br /><br />’ಅಗ್ನಿ’ಯ ಝಳಕ್ಕೆ ಸಿಕ್ಕ ರಾಘವೇಂದ್ರನ ಶಿಷ್ಯರಲ್ಲಿ ಕೆಲವರು ಸುವರ್ಣನ್ಯೂಸ್ ಚಾನಲ್ ನತ್ತ ಇಣುಕಿ ನೋಡುತ್ತಿದ್ದಾರೆಂದು ನಿಷಾದಕ್ಕೆ ವರದಿಯಾಗಿದೆ. ಸುವರ್ಣದಲ್ಲಿ ಒಂದಷ್ಟು ಜನಕ್ಕೆ ಗೇಟ್ ಪಾಸ್ ನೀಡಲಾಗಿದೆ. ಇತ್ತೀಚೆಗೆ ಅಲ್ಲಿಂದ ಹೊರಬಂದವರಲ್ಲಿ ಚಾಮರಾಜ ಸವಡಿ ಒಬ್ಬರು. ಸಂವೇದನಾಶೀಲ ಬರಹಗಾರರಲ್ಲಿ ಒಬ್ಬರಾದ ಸವಡಿ ಪ್ರಿಂಟ್ ಮೀಡಿಯಾದಲ್ಲಿ ಪಳಗಿದವರು. ಜನಪರ ಕಾಳಜಿಯುಳ್ಳ ಯುವ ಬರಹಗಾರ. ಸಮಾಜವಾದಿ ಚಿಂತನೆಯ ಝಳಕ್ ಅವರ ಬರಹಗಳಲ್ಲಿದೆ. ಒಂಚೂರು ಸಹನೆ, ವಿವೇಚನೆ ಇರುತ್ತಿದ್ದರೆ ಅವರು ಪ್ರಜಾವಾಣಿಯನ್ನು ಬಿಡುವ ಪ್ರಮೇಯವೇ ಬರುತ್ತಿರಲಿಲ್ಲ.<br /><br />ಪ್ರಿಂಟ್ ಮೀಡಿಯಾದಿಂದ ದೃಶ್ಯ ಮಾಧ್ಯಮಕ್ಕೆ ವಲಸೆ ಹೋಗುವವರ ಬಗ್ಗೆ ನನಗೆ ಅನುಕಂಪವಿದೆ. ಅದು ದೂರದ ಬೆಟ್ಟ. ಘಂಟೆಗಳ ಪರಿವೆಯಿಲ್ಲದೆ ಅಲ್ಲಿ ಕೆಲಸ ಮಾಡಬೇಕಾಗುತ್ತದೆ. ಸದಾ ಸ್ಪರ್ಧೆ. ಟಿಅರ್ ಪಿ ಮೇಲೆಯೇ ಕಣ್ಣು. ಮೊದಲು ಸುದ್ದಿ ಕೊಡುವ ಆತುರ. ಒತ್ತಡದ ಬದುಕು. ಕೆಲಸಕ್ಕೆ ಸೇರುವಾಗ ಕಳೆಕಳೆಯಾಗಿರುತ್ತಿದ್ದ ಹುಡುಗ-ಹುಡುಗಿಯರು ಬರಬರುತ್ತಾ ಪೇಲವರಾಗುತ್ತಾರೆ. ಕಸ್ತೂರಿ ಚಾನಲ್ಲಿನಲ್ಲಿ ಒಬ್ಬ ಹುಡುಗನಿದ್ದಾನೆ. ಹೆಸರು ನೆನಪಾಗುತ್ತಿಲ್ಲ. ನ್ಯೂಸ್ ರೀಡರ್. ಆತ ಹೊಸದಾಗಿ ಬಂದಾಗ ಅರಳುಗಣ್ಣುಗಳ ಮುಗ್ಧ ಸುಂದರಾಂಗ. ಈಗ ಮಂಗೋಲಿಯನ್ ಕಣ್ಣುಗಳ ಹ್ಯಾಪ್ ಮೋರೆಯ ಮಂಕಣ್ಣ.<br /><br />ಮೊನ್ನೆ ಯಾರತ್ರನೋ ಮಾತಾಡ್ತಿದ್ದೆ. ಅವರೊಂದು ಸಂಗತಿ ಹೇಳಿದರು. ಸುದ್ದಿ ಚಾನಲ್ಲಿನಲ್ಲಿ ಹುಡುಗಿಯರು ಮನಸ್ಸಿಗೆ ಬಂದ ಟೈಮ್ ನಲ್ಲಿ ಗರ್ಭಿಣಿಯರಾಗಬಾರದಂತೆ. ಪರಸ್ಪರ ಮಾತಾಡಿಕೊಂಡು ಸರದಿ ಪ್ರಕಾರ ಬಸುರಿಯಾಗಬೇಕಂತೆ. ಹಾಗಂತ ಆಡಳಿತ ಮಂಡಳಿಯವರು ಕಿವಿ ಮಾತು ಹೇಳಿದ್ದಾರಂತೆ. ವೈಯಕ್ತಿಕ ಬದುಕು ಎಲ್ಲಿಗೆ ಬಂದು ನಿಂತಿದೆ ನೋಡಿ!<br /><br />ಪ್ರಜಾವಾಣಿಯಂತ ಪತ್ರಿಕೆಯಿಂದ ವಲಸೆ ಹೋಗುವಾಗ ಎಚ್ಚರದಿಂದಿರಬೇಕು. ಕನ್ನಡ ಪತ್ರಿಕೋಧ್ಯಮಕ್ಕೆ ಅದು ಕೊನೆಯ ನಿಲ್ದಾಣ. ಅದೊಂಥರ ಸರಕಾರಿ ಆಪೀಸ್ ಇದ್ದ ಹಾಗೆ.ಅಲ್ಲಿ ಸೇರಿಕೊಳ್ಳುವುದು ಸ್ವಲ್ಪ ಕಷ್ಟ. ಒಮ್ಮೆ ಸೇರಿಕೊಂಡ ಮೇಲೆ ನಿವೃತ್ತಿಯವರೆಗೆ ಅಲ್ಲಿ ಕೆಲಸ ಮಾಡಬಹುದು. ಬರೆಯಲು ಬಾರದಿದ್ದರೂ ಕೆಲಸದಿಂದ ತೆಗೆದು ಹಾಕುವುದಿಲ್ಲ. ಹೆಚ್ಚೆಂದರೆ ಪ್ರಮೋಷನ್ ಕೊಡದಿರಬಹುದು. ಕೈ ತುಂಬಾ ಸಂಬಳ, ನಿಗದಿತ ಅವಧಿಯ ಕೆಲಸ, ಬೇಕೆನಿಸಿದಾಗ ರಜಾ ಸೌಲಬ್ಯ, ಕ್ಯಾಂಟಿನ್ ನಲ್ಲಿ ಪುಷ್ಕಳವಾದ ಧರ್ಮದ ಊಟ. ಆದರೂ ಜನ ದೃಶ್ಯ ಮಾಧ್ಯಮವೆಂಬ ಅಗ್ನಿಗೋಳಕ್ಕೆ ಮುತ್ತಿಕ್ಕಲು ಜನ ಬಯಸುತ್ತಾರೆ.<br /><br />”ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” -ಅಡಿಗNishada Kanjarihttp://www.blogger.com/profile/00365956604807120745noreply@blogger.com0tag:blogger.com,1999:blog-4261968803082103008.post-72668947327175856682009-07-19T00:25:00.001-07:002009-07-19T00:36:15.788-07:00ಮೀಡಿಯಾ ಮಿರ್ಚಿ-ಬ್ಯಾಡ್ಗಿಯೋ ಗುಂಟೂರೋ....<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgfMEmI9Vb91mli2OekYQ4DMgQ73WI3K22Z4VHD8fS5Y_zeGqZHQ1NzZugR2cHbdK_KQdZ3ZK4gHWccH8k4Lh4JiaAMCshXGExzvf7YDMCMkGJrT7KBcN90IYDVWM4HgYngdcRyf-nl8S1L/s1600-h/HExp19.jpg"><img style="margin: 0px auto 10px; display: block; text-align: center; cursor: pointer; width: 320px; height: 214px;" src="https://blogger.googleusercontent.com/img/b/R29vZ2xl/AVvXsEgfMEmI9Vb91mli2OekYQ4DMgQ73WI3K22Z4VHD8fS5Y_zeGqZHQ1NzZugR2cHbdK_KQdZ3ZK4gHWccH8k4Lh4JiaAMCshXGExzvf7YDMCMkGJrT7KBcN90IYDVWM4HgYngdcRyf-nl8S1L/s320/HExp19.jpg" alt="" id="BLOGGER_PHOTO_ID_5360071744240431538" border="0" /></a><br /><br /><br /><br />ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಕೆಲಸ ಮಾಡಿರುವ ಜಿ ಎನ್ ಮೋಹನ ವಿಜಯಕರ್ನಾಟಕದಲ್ಲಿ ಇನ್ನು ಮುಂದೆ ಪ್ರತಿ ಶನಿವಾರ ’ಮೀಡಿಯಾ ಮಿರ್ಚಿ’ ಅಂಕಣ ಬರೆಯುತ್ತಾರೆ. ಒಳ್ಳೆಯ ಅಲೋಚನೆ.<br /><br />ಎಲ್ಲಾ ಆರಂಭಗಳೂ, ಮೊದಲ ಹೆಜ್ಜೆಗಳೂ ಒಳ್ಳೆಯ ಉದ್ದೇಶಗಳನ್ನೇ ಹೊಂದಿರುತ್ತವೆ. ಆದರೆ ಅವು ಕಾರ್ಯರೂಪಕ್ಕೆ ಬಂದಾಗ, ಬರಬರುತ್ತಾ ರಾಯರ ಕುದುರೆ ಕತ್ತೆಯಾಗುವ ಸಾಧ್ಯತೆಗಳೂ ಇರುತ್ತವೆ.<br /><br />ವಿಜಯಕರ್ನಾಟಕದಂತಹ ಪತ್ರಿಕೆಯಲ್ಲಿ ಏನು ಬಂದರೂ ಅದನ್ನು ಸಂಶಯದಿಂದಲೇ ನೋಡಬೇಕಾಗುತ್ತದೆ. ಆ ಹಿನ್ನೆಲೆ ಅದಕ್ಕಿದೆ. ಹಾಗೆ ನೋಡಿದರೆ ’ಸಂಶಯ’ವೇ ಒಬ್ಬ ಪತ್ರಕರ್ತನ ಸಹಜ ಗುಣಧರ್ಮವಾಗಬೇಕು. ಸಂಶಯಪಡುತ್ತಲೇ ಒಂದು ನಿರ್ಧಿಷ್ಟ ಅಭಿಪ್ರಾಯದೆಡೆಗೆ ಓದುಗ ಸಾಗುತ್ತಿರಬೇಕು. ಆದರೆ ಒಂದೇ ಫೆಪರನ್ನು ತರಿಸುವ ಕೆಳ ಮಧ್ಯಮವರ್ಗದವರು ಅದರಲ್ಲಿ ಬಂದದ್ದೆಲ್ಲವನ್ನು ನಿಜವೆಂದು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಆ ಒಂದೇ ಪೇಪರು ತರಿಸಿಕೊಳ್ಳುವ ಬಹುಸಂಖ್ಯಾತರು ವಿಜಯಕರ್ನಾಟಕದ ಓದುಗರು ಎಂಬುದು ಕೂಡ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಹತ್ತಾರು ಪತ್ರಿಕೆಗಳನ್ನು ಓದುವ-ತಿರುವಿ ಹಾಕುವ ಸಾಮರ್ಥ್ಯವುಳ್ಳ ರಾಜಕಾರಣಿಗಳು ಅಲ್ಪಸಂಖ್ಯಾತರು. ಅವರನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಹಾಗಾಗಿ ಈಗ ಹೊಸದಾಗಿ ಆರಂಭವಾಗಿರುವ ಮೀಡಿಯಾಮಿರ್ಚಿ ಬಹುಸಂಖ್ಯಾತರ ಮೇಲೆ ಪ್ರಭಾವ ಬೀರಬಲ್ಲ ಅಂಕಣ. ಅದಕ್ಕೆ ಜಿ.ಎನ್.ಮೋಹನ್ ಬಗ್ಗೆ ಅಷ್ಟೊಂದು ಟೀಕೆ-ಟಿಪ್ಪಣಿಗಳು ನಡೆಯುತ್ತಿವೆ.<br /><br />ಮೋಹನ್ ಎಡಪಂಥಿಯ ವಿಚಾರಧಾರೆಯ ಬಗ್ಗೆ ಒಲವುಳ್ಳವರು. ಇತ್ತೀಚೆಗೆ ವೈಯಕ್ತಿಕವಾಗಿ ಅನುಕೂಲಸಿಂಧು ವರ್ತಮಾನಕ್ಕೆ ಒಗ್ಗಿಕೊಂಡಂತೆ ಭಾಸವಾಗುತ್ತಿರುವವರು. ಹಾಗಾಗಿ ವಿಜಯಕರ್ನಾಟ್ಕದ ಜೊತೆ ಬ್ಲೆಂಡ್ ಆಗಬಹುದು. ಮಿರ್ಚಿಮಸಾಲೆಗೆ ಹಾಕಿದ ಮೆಣಸು ಗುಂಟೂರಿನದೋ ಬ್ಯಾಡ್ಗಿಯದೋ ಘಾಟಿನ ಮೇಲೆ ನಿರ್ಧಾರವಾಗುತ್ತದೆ.<br />ಮೋಹನ್ ನಿಷ್ಪಕ್ಷಪಾತಿಯಾಗಿದ್ದರೆ ಮೊದಲು ಚಾಟಿ ಬೀಸಬೇಕಾದ್ದೇ ವಿಜಯಕರ್ನಾಟಕದ ಮೇಲೆ. ಅದು ಸಾಧ್ಯವಾಗಬಹುದೇ?<br /><br />ಮೀಡಿಯಾದಲ್ಲಿ ಕೆಲಸ ಮಾಡುವವರೆಲ್ಲಾ ಕೂಲಿಯಾಳುಗಳು. ಅವರಿಗೊಬ್ಬ ಮೇಸ್ತ್ರಿ ಇರುತ್ತಾನೆನ್ನಿ. ಅವನಿಗೆ ಒಂದಷ್ಟು ಅಧಿಕಾರವೂ ಇರುತ್ತದೆ. ಆದರೆ ಪರಮಾಧಿಕಾರ ಯಜಮಾನನ ಕೈಯಲ್ಲಿರುತ್ತದೆ. ಆತನಿಗೆ ಕೂಲಿಯಾಳುಗಳ ಸಮಸ್ಯೆಯ ಅರಿವಿರುವುದಿಲ್ಲ. ಅವನೊಬ್ಬ ಬ್ಯುಸಿನೆಸ್ ಮೆನ್ ಅಷ್ಟೇ. ಅವನು ಮಿದುಳಿನಿಂದ ಯೋಚಿಸುತ್ತಾನೆ; ಹೃದಯದಿಂದಲ್ಲ.<br /><br />ನಿಮ್ಮ ಜೊತೆ ಸೇರಿ ನಾನೂ ಕಲಿಯುವ ಪ್ರಯತ್ನ ಮಾಡುತ್ತೇನೆ ಎಂದು ಮೋಹನ್ ಹೇಳಿದ್ದಾರೆ. ನೋಡೋಣ; ಅವರು ಕಲಿತ ಪಾಠಗಳಿಗೆ ವಿಜಯಕರ್ನಾಟಕ ಇನ್ನೊಂದು ಅಧ್ಯಾಯ ಸೇರಿಸುತ್ತಾ.....?Nishada Kanjarihttp://www.blogger.com/profile/00365956604807120745noreply@blogger.com0tag:blogger.com,1999:blog-4261968803082103008.post-38818326222636406132009-07-16T01:18:00.000-07:002009-07-16T05:52:54.852-07:00ಪತ್ರಿಕೋಧ್ಯಮದ ಚಿತ್ತ ಎತ್ತ?<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhiJdBbIcSnz3qdJ9ZC09w3weV-ZZU5bAdsH_EtzjC1K7ggz_sjBJ8ZmMgSITa4hSBypxJMVkurGhl2rPVYI0ExC73L2ZkKscSnHClNThmXwsWP_Mb4Ah8CIggxWhe3ppgIHt42mywNV6L6/s1600-h/kasthuri_tv.jpg"><img style="margin: 0pt 10px 10px 0pt; float: left; cursor: pointer; width: 132px; height: 99px;" src="https://blogger.googleusercontent.com/img/b/R29vZ2xl/AVvXsEhiJdBbIcSnz3qdJ9ZC09w3weV-ZZU5bAdsH_EtzjC1K7ggz_sjBJ8ZmMgSITa4hSBypxJMVkurGhl2rPVYI0ExC73L2ZkKscSnHClNThmXwsWP_Mb4Ah8CIggxWhe3ppgIHt42mywNV6L6/s320/kasthuri_tv.jpg" alt="" id="BLOGGER_PHOTO_ID_5359040138517580706" border="0" /></a><br />ಮೊನ್ನೆ ಕಸ್ತೂರಿ ಚಾನಲ್ ನಲ್ಲಿ ನ್ಯೂಸ್ ನೋಡ್ತಾ ಕೂತಿದ್ದೆ. ಮೊದಲ ಹೆಡ್ ಲೈನ್ ಸುದ್ದಿ ’ಹೈಕೋರ್ಟ್ ಗೆ ಮೋಹಿನಿ ಕಾಟ’. ಈಸುದ್ದಿಯನ್ನು ಯಾವುದೋ ಪೇಪರಿನಲ್ಲಿ ನೋಡಿದ ನೆನಪು. ಒಂದು ಸೆಟೈರ್ ಬರಹಕ್ಕೆ ವಸ್ತುವಾಗಬೇಕಿದ್ದ ಈ ವದಂತಿ ದೃಶ್ಯಮಾಧ್ಯಮದಲ್ಲಿ ಪ್ರೈಮ್ ಟೈಮ್ ನಲ್ಲಿ ಸುದ್ದಿಯಾಗಬೇಕಿದ್ದರೆ...ಅದರ ಹಿಂದೆ ಕೆಲಸ ಮಾಡಿದ್ದ ವರದಿಗಾರ/ರ್ತಿ, ಇನ್ಪುಟ್ ಎಡಿಟರ್,ಔಟ್ಪುಟ್ ಎಡಿಟರ್ ಗಳ ತಲೆಯಲ್ಲಿ ಮೋಹಿನಿ ನಾಟ್ಯವಾಡುತ್ತಿದ್ದಳೆ? ಸಂಶಯ ಪಡಬೇಕಾದ ವಿಷಯ.<br /><br />ಆ ಸುದ್ದಿ ನೋಡುತ್ತಿರುವಾಗ ನನ್ನ ಪಕ್ಕದಲ್ಲಿ ಹಿರಿಯ ಪತ್ರಕರ್ತರೊಬ್ಬರಿದ್ದರು.’ಏನ್ ಸರ್, ಪತ್ರಿಕೋಧ್ಯಮ ಹೀಗಾಗಿ ಹೋಯ್ತು’ ಅಂದೆ.<br />’ಎಲ್ಲಾ ಟಿಅರ್ ಪಿ ಮಹಿಮೆ’ ಅಂದರು. ’ಹಾಗಾದರೆ ಅದೆಲ್ಲೋ ನ್ಯೂಸ್ ಓದ್ತಾ ಓದ್ತಾ ಬಟ್ಟೆ ಕಳ್ಚ್ತಾ ಬೆತ್ತಲೆ ಆಗ್ತಾರಂತೆ. ಅದು ಇಲ್ಲಿಯೂ ಬರ್ಬಹುದಾ? ಅಂದೆ. ’ಖಂಡಿತಾ’ ಎಂದರವರು.<br /><br />ಕುತೂಹಲಕ್ಕೆ ಮೋಹಿನಿಕಾಟದ ಪೇಪರು ಹುಡುಕಿದೆ. ಅದು ಬಿಜೆಪಿಯ ಪಂಚಾಂಗ ’ವಿಜಯ ಕರ್ನಾಟಕ’!. ’ಕೆಂಪು ಕಟ್ಟಡದಲ್ಲಿ ನಡೆದಿದೆ ಮೋಹಿನಿ ಆಟ್ಟಂ. ಅಮಾವಾಸ್ಯೆಯ ರಾತ್ರಿ ತಂಗಾಳಿಯಲ್ಲಿ ತೇಲುವ ಚೆಲುವೆ, ದೆವ್ವದ ಕಾಟಕ್ಕೀಡಾದ ಹೈಕೋರ್ಟ್?’ ಇಷ್ಟುದ್ದದ ಹೆಡ್ಡಿಂಗಿನ ಅರ್ದ ಪುಟಕ್ಕೆ ಹತ್ತಿರದ ಈ ಇನ್ವೆಸ್ಟಿಗೇಟಿವ್ ಸ್ಟೋರಿ ಬರೆದ ವರದಿಗಾರ ಯಾರಪ್ಪಾಂತ ನೋಡಿದರೆ,ಅದು ಧ್ಯಾನ್ ಪೂಣಚ್ಚ.<br /><br />ಹೀಗೂ ಊಂಟೆ? ಸ್ಟೈಲಿನಲ್ಲಿ ಕತೆ ಹಣೆದದ್ದೇ ಹಣೆದದ್ದು. ಈತ ಹಿಂದೆ ಮುತ್ತಪ್ಪ ರೈ ನೇತೃತ್ವದ’ಗರ್ವ’ ಟಾಬ್ಲೈಡ್ ನಲ್ಲಿ ಕೆಲಸ ಮಾಡುತ್ತಿದ್ದ. ಆ ಪತ್ರಿಕೆ ಮುಚ್ಚಲು ಆತನೇ ನೆಪವಾಗಿದ್ದ. ಅದು ಹೇಗಂದರೆ; ಸುವರ್ಣ ಚಾನಲ್ ನ ಬಗ್ಗೆ ಆತ ಕವರ್ ಸ್ಟೋರಿ ಮಾಡಿದ್ದ. ಇದು ಅಲ್ಲಿನ ಸಿಬ್ಬಂದಿಯಲ್ಲಿ ಹಲವರ ಮನಸ್ಸನ್ನು ಘಾಸಿಗುಳಿಸಿತ್ತು. ಉನ್ನತ ಹುದ್ದೆಯಲ್ಲಿದ್ದ ಒಂದು ಹುಡುಗಿಯಂತು ಅವಮಾನ ಸಹಿಸಲಾರದೆ ಕೆಲಸ ಬಿಟ್ಟು ಹೋದಳು. ಇನ್ನೊಬ್ಬರು ಮುತ್ತಪ್ಪರೈಯವರ ಆಪ್ತರ ಮುಂದೆ ನೋವು ತೋಡಿಕೊಂಡರು. ಅದರ ಸರ್ಕ್ಯೂಲೇಶನ್ ಅಷ್ಟರಲ್ಲೇ ಇದೆ, ಎಂದುಕೊಂಡರೈ ಪತ್ರಿಕೆ ಮುಚ್ಚಲು ಆದೇಶ ನೀಡಿದರು.<br /><br />ಅಂತಪ್ಪಾ ಧ್ಯಾನ್ ಪೂಣಚ್ಚನಿಂದ ಆರಂಭಗೊಂಡ ಮೋಹಿನಿ ಕಾಟ ವಿಜಯ ಕರ್ನಾಟಕವನ್ನು ಕಾಡಿ, ಕಸ್ತೂರಿಗೆ ಬಡಿದು, ಮುಂದೆ ನಿಗೂಢ ಜಗತ್ತನ್ನು ವ್ಯಾಪಿಸಿ,ಕರ್ನಾಟಕದ ಜನತೆ ’ಹೀಗೂ ಉಂಟೇ’ ಎಂದು ಮೂಗಿನ ಮೇಲೆ ಬೆರಳಿಡಬಹುದು.Nishada Kanjarihttp://www.blogger.com/profile/00365956604807120745noreply@blogger.com0