ಇಂದು ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಕೆಲ ಕಿಡಿಗೇಡಿಗಳು ಗಾಂದೀಜಿಯ ಪ್ರತಿಮೆಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಿದರು.
ಮೊನ್ನೆ ಶುಕ್ರವಾರ ಮುತಾಲಿಕ್ ಮುಖಕ್ಕೆ ಮಸಿ ಬಳಿದ ಮರುದಿನ ಗದಗ ಹೊತ್ತಿ ಉರಿಯಿತು. ಸಹಕಾರಿ ಧುರಿಣ, ಮಾಜಿ ಸಚಿವ, ಹುಲಿಕೋಟೆಯ ಹುಲಿ ಎಂದೇ ಪ್ರಖ್ಯಾತರಾದ ದಿ. ಕೆ. ಎಚ್. ಪಾಟೀಲ್ ಪುತ್ಥಳಿಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಲಾಯ್ತು.
ಹಾಗೆಂದು ನಾವು ಬರೆಯುತ್ತೇವೆ. ಆದರೆ ಅವಮಾನ ಆಗಿದ್ದು ಯಾರಿಗೆ?
ವ್ಯಾಲೆಂಟೈನ್ ಡೇ ಪ್ರಯುಕ್ತ ಖಾಸಗಿ ಚಾನಲ್ಲೊಂದು ಭಾನುವಾರ ಪ್ರಸಾರ ಮಾಡಲೆಂದು ಗುರುವಾರ ’ಪ್ರೇಮ ಯುದ್ಧ’ ಎಂಬ ಕಾರ್ಯಕ್ರಮವನ್ನು ಸಂಸ ಬಯಲು ರಂಗಮಂದಿರದಲ್ಲಿ ಚಿತ್ರಿಕರಿಸಿಕೊಳ್ಳುತ್ತಿತ್ತು. ಅಹ್ವಾನಿತ ಪ್ರೇಕ್ಷಕರ ನಡುವೆ ಖಾಸಗಿಯಾಗಿ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷ ಮುತಾಲಿಕ್ ಮುಖಕ್ಕೆ ಕೆಲ ಕಿಡಿಗೇಡಿಗಳು ಮಸಿ ಬಳೆದರು. ವೇದಿಕೆ ಮೇಲಿದ್ದ ಇತರ ಗಣ್ಯ ಅಥಿತಿಗಳಾಗಿದ್ದ ಜನವಾದಿ ಸಂಘಟನೆಯ ವಿಮಲ, ಅಗ್ನಿ ಪತ್ರಿಕೆಯ ಶ್ರೀಧರ್, ಹಿಂದು ಸಂಘಟನೆಯ ಗಿರಿಧರ್ ಈ ಘಟನೆಗೆ ಸಾಕ್ಷಿಯಾದರು. ತಮ್ಮ ಗಣ್ಯ ಅಥಿತಿಯನ್ನು ರಕ್ಷಿಸಿಕೊಳ್ಳಬೇಕಾದ ಚಾನಲ್ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು.
ಇಲ್ಲಿ ಯಾರು ಯಾರಿಗೆ ಮಸಿ ಬಳೆದರು? ಯಾರಿಗೆ ಅವಮಾನವಾಯ್ತು? ಕರ್ನಾಟಕದ ಕೆಲವು ಭಾಗಕ್ಕೆ ಕಿಚ್ಚು ಹತ್ತಿಸಿದವರು ಯಾರು?
ಮರುದಿನ ಆಂಧ್ರಪ್ರದೇಶದ ಶ್ರೀರಾಮಸೇನೆಯ ಸಭೆಯಲ್ಲಿ ಬಾಗವಹಿಸಿ ಬೆಳಗಾವಿಗೆ ಬಂದ ಮುತಾಲಿಕ್ ಅಲ್ಲಿ ಒಂದು ಮಾತು ಹೇಳಿದರು. ‘ಚಾನಲ್ ಗಳ ಗ್ಯಾಂಗ್ ವಾರ್ ನಲ್ಲಿ ನಾನು ಸಿಕ್ಕಿ ಹಾಕಿಕೊಂಡೆ. ಈ ಘಟನೆಯಲ್ಲಿ ಕಾಂಗ್ರೇಸ್ ಮತ್ತು ಮೀಡಿಯಾ ಇನ್ವಾಲ್ ಆಗಿದೆ.’ ಈ ಸುದ್ದಿ ಎಲ್ಲಿಯೂ ಪ್ರಸಾರವಾಗಲಿಲ್ಲ; ಪ್ರಕಟವಾಗಲಿಲ್ಲ. ನಾನು ಇಂಟ್ರನೆಟ್ ನಲ್ಲಿಅದನ್ನು ಓದಿದೆ. ಪಾಪ ಮುತಾಲಿಕ್!
ಸ್ವತಃ ನಗರ ಪೋಲಿಸ್ ಆಯುಕ್ತರಾದ ಶಂಕರ ಬಿದರಿ ಪತ್ರಿಕಾಗೋಷ್ಠಿಯಲ್ಲಿ, "ಘಟನೆಯು ಪೂರ್ವನಿಯೋಜಿತವಾಗಿದ್ದು ಇದರ ಹಿಂದೆ ಬಲವಾದ ಶಕ್ತಿಯ ಕೈವಾಡವಿದೆ. ಮುತಾಲಿಕ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಅವರಿಗೆ ಮಸಿ ಬಳಿಯಬೇಕೆಂದು ಪೂರ್ವತಯಾರಿ ನಡೆಸಿಯೇ ಈ ಕೃತ್ಯವೆಸಗಲಾಗಿದೆ.” ಎಂದು ಹೇಳಿದ್ದಾರೆ. ಜೊತೆಗೆ ಇಂತಹ ಘಟನೆಯೇನಾದರು ನಡೆಯಬಹುದೆಂದು ಬೇರೆ ಚಾನಲ್ ನವರಿಗೆ ಗೊತ್ತಿತ್ತು. ಅವರಿಗೂ ಸಾಮಾಜಿಕ ಹೊಣೆಗಾರಿಕೆಯಿದೆ. ಪೋಲಿಸಿನವರಿಗೆ ಅದನ್ನು ತಿಳಿಸಬೇಕಾಗಿತ್ತು ಎಂದಿದ್ದಾರೆ.
ಅಂದರೆ ಪತ್ರಕರ್ತರು ತಮ್ಮ ಪತ್ರಿಕಾ ಧರ್ಮ ಮರೆತು ತಮ್ಮ ಸೋರ್ಸ್ ಅನ್ನು ಅವರಿಗೆ ಹೇಳಬೇಕು. ಅದೆಂದಾದರೂ ಸಾಧ್ಯವೇ? ಸಾಮಾಜಿಕ ಹೊಣೆಗಾರಿಕೆ ಎಂದಿದ್ದಾರೆ ಬಿದರಿ ಸಾಹೇಬರು. ಒಪ್ಪತಕ್ಕ ಮಾತೇ. ಆದರೆ ಅದನ್ನು ಎಲ್ಲಿಂದ ಹುಡುಕಿ ತರೋಣ? ಶಾಸನವನ್ನು ರೂಪಿಸುವ ಪ್ರಭುಗಳಿಂದಲೇ? ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಮಾಧ್ಯಮದಿಂದಲೇ?
ಕಳೆದ ವರ್ಷ ಜನವರಿ ೨೪ರಂದು ಮಂಗಳೂರಿನಲ್ಲಿ ಪಬ್ ಮೇಲೆ ಶ್ರೀರಾಮ ಸೇನೆ ದಾಳಿ ನಡೆಸಿತು. ದಾಳಿ ಸಮಯದಲ್ಲಿ ಜೊತೆಯಲ್ಲಿ ಮಾಧ್ಯಮದವರನ್ನೂ ಸೇನೆ ಕರೆದೊಯ್ದಿತ್ತು. ಹಿಂದಿನ ಲೋಕಾಯುಕ್ತರಂತೆ. ಶ್ರೀರಾಮಸೇನೆಗೆ ಬಿಟ್ಟಿ ಪ್ರಚಾರ ಸಿಕ್ಕಿತು. ಅವರು ಹುಡುಗಿಯರನ್ನು ಅಟ್ಟಾಡಿಸಿಕೊಂಡು ಹೊಡೆಯುವುದನ್ನು ದೃಶ್ಯ ಮಾಧ್ಯಮಗಳು ಪದೇ ಪದೇ ಪ್ರಸಾರ ಮಾಡಿದವು.
ಪಬ್ ದಾಳಿಯ ಸಂದರ್ಭದಲ್ಲಿ ಅರೆಸ್ಟ್ ಆಗಿದ್ದ ಶ್ರೀರಾಮ ಸೇನೆಯ ರಾಜ್ಯ ಸಹಸಂಚಾಲಕನಾದ ಪ್ರಸಾದ್ ಅತ್ತಾವರ ಹೊರಬಂದೊಡನೆ ಎರಡೂ ಕೈಜೋಡಿಸಿ ಮಾಧ್ಯಮದವರಿಗೆ ಕೃತಜ್ನತೆಗಳನ್ನು ಅರ್ಪಿಸಿದ್ದು ಹೀಗೆ; ಇಲ್ಲಿಯವರೆಗೆ ಸೇನೆ ಬರೀ ಕರ್ನಾಟಕದಲ್ಲಿತ್ತು. ಈಗ ಅದು ರಾಷ್ಟ್ರ ಮಟ್ಟಕ್ಕೆ ಬೆಳೆಯಿತು. ಪ್ರಚಾರ ಕೊಟ್ಟ ನಿಮಗೆಲ್ಲಾ ಧನ್ಯವಾದಗಳು.
ಈಗ ಮುತಾಲಿಕರೊಂದಿಗೆ ಜನವಾದಿ ಸಂಘಟನೆಯ ವಿಮಲ ಕೂಡಾ ಧನ್ಯವಾದಗಳನ್ನರ್ಪಿಸಬಹುದು.
ಇದನ್ನೆಲ್ಲಾ ಆಳುವ ಅರಸರ ನಿರ್ವೀರ್ಯತೆಯೆನ್ನಬೇಕೋ? ಅಥವಾ ಮಾಧ್ಯಮಗಳ ಬೇಜವಬ್ದಾರಿಯೆನ್ನಬೇಕಾ? ಇಲ್ಲವೆ ಮತಾಂಧ ಶಕ್ತಿಗಳ ವಿಜೃಂಭಣೆಯೆನ್ನಬೇಕಾ?
ಮುತಾಲಿಕ್ ಮುಖಕ್ಕೆ ಮಸಿ, ಅವಮಾನ ಆಗಿದ್ದು ಯಾರಿಗೆ?
Posted by
Nishada Kanjari
on Tuesday, February 16, 2010
/
Comments: (0)
ರಾಷ್ಟ್ರಪತಿಗಳನ್ನು ಕೇವಲ ಮಹಿಳೆಯಾಗಿ ಕಂಡ ವಿ.ಕ.
Posted by
Nishada Kanjari
on Thursday, November 26, 2009
/
Comments: (1)
ಇವತ್ತಿನ ’ವಿಜಯ ಕರ್ನಾಟಕ’ ದಿನಪತ್ರಿಕೆಯ ಎರಡನೆಯ ಸಂಪಾದಕೀಯ ಹೀಗಿದೆ;
ಸುಖೋಯ್ ಶೋಕಿ!
” ರಾಷ್ಟ್ರಪತಿ ಹುದ್ದೆ ರಬ್ಬರ್ ಸ್ಟಾಂಪ್ ಎಂಬುದು ನಿಜವಾದರೂ ಕ್ರಿಯಾಶೀಲತೆಯನ್ನೇ ಕಳೆದುಕೊಳ್ಳಬೇಕು ಎಂದು ಅರ್ಥವಲ್ಲ. ಆದರೆ ಆ ಹುದ್ದೆಯಲ್ಲಿರುವವರು ಅರ್ಥಹೀನ ಶೋಖಿ ಮಾಡಿಕೊಂಡಿರಬೇಕು ಹಾಗೂ ಆ ಮೂಲಕವೇ ತಮ್ಮ ಅಸ್ತಿತ್ವ ತೋರಿಸಬೇಕು ಎಂಬ ರೂಢಿ ಬೆಳೆದುಬಿಟ್ಟರೆ ಹೇಗೆ? ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರು ಸುಖೋಯಿ ಯುದ್ದ ವಿಮಾನದಲ್ಲಿ ಸುಯ್ಯನೆ ಹಾರಿ, ಯುದ್ಧ ವಿಮಾನ ಚಲಾಯಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲಿ, ಮಾಧ್ಯಮಗಳ ಕೆಮರಾ ಎದುರು ಮಿಂಚಿದ್ದು ಬಿಟ್ಟರೆ ಮತ್ತೆ ಯಾವ ಉದ್ದೇಶ ಈಡೇರಿದಂತಾಯ್ತು? ಕಲಾಂ ಅವರೂ ಈ ಹಿಂದೆ ಸುಖೋಯ್ ನಲ್ಲಿ ಪಯಣಿಸಿದ್ದರು. ಆದರೆ, ಅವರು ದೇಶದ ಉದ್ದಗಲಕ್ಕೂ ಪಯಣಿಸಿ, ವಿದ್ಯಾರ್ಥಿಗಳಲ್ಲಿ ನವಚೈತನ್ಯ ತುಂಬುತ್ತಾ ಕಾಳಜಿ ಮೆರೆದಿದ್ದರು. ಎಂಬುದೂ ಗಮನಾರ್ಹ. ಜಾರ್ಜ್ ಫರ್ನಾಂಡಿಸ್ ಅವರು ’ಹಾರಾಡುವ ಶವಪೆಟ್ಟಿಗೆ’ ಎಂದು ಕರೆಸಿಕೊಳ್ಳುತ್ತಿದ್ದ ಮಿಗ್ ವಿಮಾನದಲ್ಲಿ ಹಾರಾಡಿದ್ದಕ್ಕೆ ಒಂದು ಅರ್ಥವಿತ್ತು. ಈಗ ಪ್ರತಿಭಾ ಹಾರಾಡಿರುವುದರಿಂದ ಸುಖೋಯಿ ವಿಮಾನಗಳ ಸುರಕ್ಷತೆಗೆ ಖಾತ್ರಿ ಸಿಕ್ಕಿದೆ ಅಂತ ಪೋಸು ಕೊಡುತ್ತಿರುವುದು ಪ್ರಚಾರಪ್ರಿಯತೆ ಅಲ್ಲದೇ ಇನ್ನೇನ್ರಿ?”
ಇದನ್ನು ಬರೆದಾತನ ಯೋಗ್ಯತೆಯನ್ನು ನಿರ್ಧರಿಸಲು ಆತ ಸಂಪಾದಕೀಯವನ್ನು ಮುಕ್ತಾಯಗೊಳಿಸಿದ ’ಇನ್ನೇನ್ರೀ?’ ಎಂಬ ಒಂದು ಶಬ್ದವೇ ಸಾಕು. ಬೀದಿಯಲ್ಲಿ ನಿಂತು ಜಗಳವಾಡುವ, ಸಿಡುಕು ಪ್ರವೃತ್ತಿಯ, ಉಡಾಫೆ ವ್ಯಕ್ತಿತ್ವದವ ಮಾತ್ರ ಇಂತಹ ಶಬ್ದ ಉಪಯೋಗಿಸಬಲ್ಲ. ಬಹುಶಃ ಆತ ಟ್ರೈನಿ ಪತ್ರಕರ್ತನಾಗಿರಬಹುದು!
ಮಹಿಳೆಯರನ್ನು ಅವಮಾನ ಮಾಡುವ, ತಾತ್ಸಾರ ಮಾಡುವ ಉದ್ದೇಶದಿಂದಲೇ ಇದನ್ನಾತ ಬರೆದಿರಬೇಕು. ದಿನಪತ್ರಿಕೆಯೊಂದರ ಎರಡನೇ ಸಂಪಾದಕೀಯ ಸಾಮಾನ್ಯವಾಗಿ ವೈನೋಧಿಕ ಬರಹಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ. ಬಹು ಹಿಂದೆ ಪ್ರಜಾವಾಣಿಯಲ್ಲಿ ನಾಗೇಶ ಹೆಗ್ಡೆಯವರು ಇದನ್ನು ಬರೆಯುತ್ತಿದ್ದರು. ನಾನದನ್ನು ಇಷ್ಟಪಟ್ಟು ಓದುತ್ತಿದ್ದೆ. ಈಗ ಅಲ್ಲಿ ಎರಡನೆಯ ಸಂಪಾದಕಿಯವೂ ಗಂಭೀರವಾದುದೇ. ಆದರೆ ವಿಜಯ ಕರ್ನಾಟಕದಲ್ಲಿ ಅದು ಕೀಳು ಅಭಿರುಚಿಗೆ ಕನ್ನಡಿಹಿಡಿಯುತ್ತದೆ. ನಿನ್ನೆ ಈ ಕಾಲಂನಲ್ಲಿ ಕಾಣಿಸಿಕೊಂಡವರು ಶೋಭಾ ಕರಂದ್ಲಾಜೆ ಮತ್ತು ಭಾರತಿ ಶೆಟ್ಟಿ. ಅದರ ಹೆಡ್ಡಿಂಗ್ ”ನಾಯಕಿಯರು ಕಣ್ಣೀರು ಹಾಕಬಾರದು”. ಇಂದು ಅದಕ್ಕೆ ಬಲಿಯಾದವರು ನಮ್ಮ ಘನತೆವೆತ್ತ ರಾಷ್ಟ್ರಪತಿ, ಪ್ರಥಮ ಪ್ರಜೆ ಶ್ರೀಮತಿ ಪ್ರತಿಭಾ ಪಾಟೀಲ್ ಅವರು. ನಿನ್ನೆಯೇ ಅವರ ತೇಜೋವಧೆಗೆ ಪೂರ್ವತಯಾರಿ ನಡೆದಿರಬೇಕು. ಏಕೆಂದರೆ ಇಂದಿನ ಸುಖೋಯಿ ಹಾರಾಟದ ಬಗ್ಗೆ ನಿನ್ನೆಯ ವಿ.ಕ.ದಲ್ಲಿ ಒಂದು ಬರಹ ಪ್ರಕಟವಾಗಿತ್ತು. ಅದರ ಹೆಡ್ಡಿಂಗ್ ”ಸುಖೋಯಿ ಹಾರಾಟ ಪ್ರತಿಭಾ ಹೊಸ ಅವತಾರ.”
ವಿಜಯ ಕರ್ನಾಟಕದಲ್ಲಿ ಶಬ್ದಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ’ಅವತಾರ’ ಎನ್ನುವುದು ಹೀನಾರ್ಥವನ್ನು ನೀಡುತ್ತದೆ. ಉನ್ನತ ಸ್ಥಾನದಿಂದ ಕೆಳಜಾರುವುದೆಂದಾಗುತ್ತದೆ. ಅಡುಮಾತನ್ನು ಗಮನಿಸಿ; ”ಅವನ ಅವತಾರ ನೋಡು” ಶೋಕಿ ಕೂಡಾ ಹಾಗೆಯೇ. ಗಮನಿಸಿ; ಶೋಕಿಲಾಲ. ವಿ.ಕ. ಉಡಾಫೆ ಪತ್ರಕರ್ತರನ್ನು ಬೆಳೆಸುತ್ತಿದೆ; ಪೋಷಿಸುತ್ತಿದೆ. ಅದಕ್ಕೆ ಅದುವೇ ಸರಿಬಿಡಿ. ವಿಮರ್ಶಕಿ ವಿ.ಕೆಯ ಅವತಾರ ಕಂಡು ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಾಳೆ; ವಿ.ಕ. ಈಗ ನೋಡುವ ಪತ್ರಿಕೆ-ಓದುವ ಪತ್ರಿಕೆ ಅಲ್ಲ. ಪತ್ರಿಕೋಧ್ಯಮದ ಗಾಂಭೀರ್ಯವನ್ನೇ ಅದು ಮಸುಕುಗೊಳಿಸುತ್ತಿದೆ.
ಸಂಪಾದಕೀಯ ಬರೆದಾತನಿಗೆ ಗೊತ್ತಿಲ್ಲದಿರಬಹುದು; ಭೂ, ವಾಯು, ನೌಕಾದಳಗಳಿಗೆ ಪ್ರತ್ಯೇಕ ದಂಡನಾಯಕರಿರುತ್ತಾರೆ. ರಾಷ್ಟ್ರಪತಿಗಳು ಈ ಮೂರೂ ದಳಗಳಿಗೆ ಮಾಹಾದಂಡನಾಯಕರು. ಸುಖೋಯಿಯಲ್ಲಿ ಹಾರಾಟ ನಡೆಸುವುದು ಅವರ ಹಕ್ಕು. ದೇಶದ ಅತ್ಯುನ್ನತ ಸ್ಥಾನದಲ್ಲಿರುವ, ೭೪ ವಯಸ್ಸಿನ ಮಹಿಳೆಯೊಬ್ಬರ ಆತ್ಮಸ್ಥೈರವನ್ನು ನಾವು ಅಚ್ಚರಿಯಿಂದ, ಹೆಮ್ಮೆಯಿಂದ ನೋಡಬೇಕು. ಅಸ್ವಸ್ಥ ಮನಸ್ಸು ಮಾತ್ರ ಅದನ್ನು ತೆವಲು ಎಂಬಾರ್ಥದಲ್ಲಿ ’ಶೋಕಿ’ ಎಂದು ಕರೆಯಬಲ್ಲುದು. ಯುದ್ಧ ವಿಮಾನದಲ್ಲಿ ಹಾರಾಡುವುದಕ್ಕೆ ಗಟ್ಟಿ ಗುಂಡಿಗೆ ಬೇಕು. ಎಳಸು ಸಂಪಾದಕೀಯ ಬರೆದ ಹಾಗಲ್ಲ.
ಸಂಪಾದಕೀಯ ಎಂಬುದು ಒಂದು ಪತ್ರಿಕೆಯ ಗೊತ್ತು ಗುರಿಗಳನ್ನು ಹೇಳುತ್ತೆ; ಅದರ ಸಾಮಾಜಿಕ ನಿಲುವನ್ನು ಸ್ಪಷ್ಟಪಡಿಸುತ್ತೆ. ಸಂಪಾದಕೀಯ ಪುಟದಲ್ಲಿ ಬರುವ ಲೇಖನಗಳು ಇದಕ್ಕೆ ಪುಷ್ಟಿನೀಡುತ್ತವೆ. ಇದನ್ನೆಲ್ಲಾ ಗಮನಿಸಿಯೇ ಯಾರೋ ವಿ.ಕ.ವನ್ನು ’ಬಿಜೆಪಿಯ ಪಂಚಾಂಗ’ ಎಂದು ಕರೆದಿದ್ದಾರೆ.ಬಿಜೆಪಿಯ ಪುರುಷ ಮನಸ್ಸು ಮಹಿಳೆಯನ್ನು ಖಾಸಾಗಿ ಆಸ್ತಿ ಎಂದು ಪರಿಗಣಿಸುತ್ತದೆ. ಅದು ಸದಾ ಸ್ತ್ರೀಯರನ್ನು ಅಂಕೆಯಲ್ಲಿಟ್ಟುಕೊಳ್ಳಬಯಸುತ್ತದೆ. ಸಾಧ್ಯವಾದಲೆಲ್ಲ ಅವರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಅದಕ್ಕೆ ರಾಷ್ಟ್ರಪತಿಗಳೂ ಹೊರತಾಗಲಿಲ್ಲವಲ್ಲ ಎಂಬುದೇ ನೋವಿನ ಸಂಗತಿ.
ಸುಖೋಯ್ ಶೋಕಿ!
” ರಾಷ್ಟ್ರಪತಿ ಹುದ್ದೆ ರಬ್ಬರ್ ಸ್ಟಾಂಪ್ ಎಂಬುದು ನಿಜವಾದರೂ ಕ್ರಿಯಾಶೀಲತೆಯನ್ನೇ ಕಳೆದುಕೊಳ್ಳಬೇಕು ಎಂದು ಅರ್ಥವಲ್ಲ. ಆದರೆ ಆ ಹುದ್ದೆಯಲ್ಲಿರುವವರು ಅರ್ಥಹೀನ ಶೋಖಿ ಮಾಡಿಕೊಂಡಿರಬೇಕು ಹಾಗೂ ಆ ಮೂಲಕವೇ ತಮ್ಮ ಅಸ್ತಿತ್ವ ತೋರಿಸಬೇಕು ಎಂಬ ರೂಢಿ ಬೆಳೆದುಬಿಟ್ಟರೆ ಹೇಗೆ? ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರು ಸುಖೋಯಿ ಯುದ್ದ ವಿಮಾನದಲ್ಲಿ ಸುಯ್ಯನೆ ಹಾರಿ, ಯುದ್ಧ ವಿಮಾನ ಚಲಾಯಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲಿ, ಮಾಧ್ಯಮಗಳ ಕೆಮರಾ ಎದುರು ಮಿಂಚಿದ್ದು ಬಿಟ್ಟರೆ ಮತ್ತೆ ಯಾವ ಉದ್ದೇಶ ಈಡೇರಿದಂತಾಯ್ತು? ಕಲಾಂ ಅವರೂ ಈ ಹಿಂದೆ ಸುಖೋಯ್ ನಲ್ಲಿ ಪಯಣಿಸಿದ್ದರು. ಆದರೆ, ಅವರು ದೇಶದ ಉದ್ದಗಲಕ್ಕೂ ಪಯಣಿಸಿ, ವಿದ್ಯಾರ್ಥಿಗಳಲ್ಲಿ ನವಚೈತನ್ಯ ತುಂಬುತ್ತಾ ಕಾಳಜಿ ಮೆರೆದಿದ್ದರು. ಎಂಬುದೂ ಗಮನಾರ್ಹ. ಜಾರ್ಜ್ ಫರ್ನಾಂಡಿಸ್ ಅವರು ’ಹಾರಾಡುವ ಶವಪೆಟ್ಟಿಗೆ’ ಎಂದು ಕರೆಸಿಕೊಳ್ಳುತ್ತಿದ್ದ ಮಿಗ್ ವಿಮಾನದಲ್ಲಿ ಹಾರಾಡಿದ್ದಕ್ಕೆ ಒಂದು ಅರ್ಥವಿತ್ತು. ಈಗ ಪ್ರತಿಭಾ ಹಾರಾಡಿರುವುದರಿಂದ ಸುಖೋಯಿ ವಿಮಾನಗಳ ಸುರಕ್ಷತೆಗೆ ಖಾತ್ರಿ ಸಿಕ್ಕಿದೆ ಅಂತ ಪೋಸು ಕೊಡುತ್ತಿರುವುದು ಪ್ರಚಾರಪ್ರಿಯತೆ ಅಲ್ಲದೇ ಇನ್ನೇನ್ರಿ?”
ಇದನ್ನು ಬರೆದಾತನ ಯೋಗ್ಯತೆಯನ್ನು ನಿರ್ಧರಿಸಲು ಆತ ಸಂಪಾದಕೀಯವನ್ನು ಮುಕ್ತಾಯಗೊಳಿಸಿದ ’ಇನ್ನೇನ್ರೀ?’ ಎಂಬ ಒಂದು ಶಬ್ದವೇ ಸಾಕು. ಬೀದಿಯಲ್ಲಿ ನಿಂತು ಜಗಳವಾಡುವ, ಸಿಡುಕು ಪ್ರವೃತ್ತಿಯ, ಉಡಾಫೆ ವ್ಯಕ್ತಿತ್ವದವ ಮಾತ್ರ ಇಂತಹ ಶಬ್ದ ಉಪಯೋಗಿಸಬಲ್ಲ. ಬಹುಶಃ ಆತ ಟ್ರೈನಿ ಪತ್ರಕರ್ತನಾಗಿರಬಹುದು!
ಮಹಿಳೆಯರನ್ನು ಅವಮಾನ ಮಾಡುವ, ತಾತ್ಸಾರ ಮಾಡುವ ಉದ್ದೇಶದಿಂದಲೇ ಇದನ್ನಾತ ಬರೆದಿರಬೇಕು. ದಿನಪತ್ರಿಕೆಯೊಂದರ ಎರಡನೇ ಸಂಪಾದಕೀಯ ಸಾಮಾನ್ಯವಾಗಿ ವೈನೋಧಿಕ ಬರಹಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ. ಬಹು ಹಿಂದೆ ಪ್ರಜಾವಾಣಿಯಲ್ಲಿ ನಾಗೇಶ ಹೆಗ್ಡೆಯವರು ಇದನ್ನು ಬರೆಯುತ್ತಿದ್ದರು. ನಾನದನ್ನು ಇಷ್ಟಪಟ್ಟು ಓದುತ್ತಿದ್ದೆ. ಈಗ ಅಲ್ಲಿ ಎರಡನೆಯ ಸಂಪಾದಕಿಯವೂ ಗಂಭೀರವಾದುದೇ. ಆದರೆ ವಿಜಯ ಕರ್ನಾಟಕದಲ್ಲಿ ಅದು ಕೀಳು ಅಭಿರುಚಿಗೆ ಕನ್ನಡಿಹಿಡಿಯುತ್ತದೆ. ನಿನ್ನೆ ಈ ಕಾಲಂನಲ್ಲಿ ಕಾಣಿಸಿಕೊಂಡವರು ಶೋಭಾ ಕರಂದ್ಲಾಜೆ ಮತ್ತು ಭಾರತಿ ಶೆಟ್ಟಿ. ಅದರ ಹೆಡ್ಡಿಂಗ್ ”ನಾಯಕಿಯರು ಕಣ್ಣೀರು ಹಾಕಬಾರದು”. ಇಂದು ಅದಕ್ಕೆ ಬಲಿಯಾದವರು ನಮ್ಮ ಘನತೆವೆತ್ತ ರಾಷ್ಟ್ರಪತಿ, ಪ್ರಥಮ ಪ್ರಜೆ ಶ್ರೀಮತಿ ಪ್ರತಿಭಾ ಪಾಟೀಲ್ ಅವರು. ನಿನ್ನೆಯೇ ಅವರ ತೇಜೋವಧೆಗೆ ಪೂರ್ವತಯಾರಿ ನಡೆದಿರಬೇಕು. ಏಕೆಂದರೆ ಇಂದಿನ ಸುಖೋಯಿ ಹಾರಾಟದ ಬಗ್ಗೆ ನಿನ್ನೆಯ ವಿ.ಕ.ದಲ್ಲಿ ಒಂದು ಬರಹ ಪ್ರಕಟವಾಗಿತ್ತು. ಅದರ ಹೆಡ್ಡಿಂಗ್ ”ಸುಖೋಯಿ ಹಾರಾಟ ಪ್ರತಿಭಾ ಹೊಸ ಅವತಾರ.”
ವಿಜಯ ಕರ್ನಾಟಕದಲ್ಲಿ ಶಬ್ದಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ’ಅವತಾರ’ ಎನ್ನುವುದು ಹೀನಾರ್ಥವನ್ನು ನೀಡುತ್ತದೆ. ಉನ್ನತ ಸ್ಥಾನದಿಂದ ಕೆಳಜಾರುವುದೆಂದಾಗುತ್ತದೆ. ಅಡುಮಾತನ್ನು ಗಮನಿಸಿ; ”ಅವನ ಅವತಾರ ನೋಡು” ಶೋಕಿ ಕೂಡಾ ಹಾಗೆಯೇ. ಗಮನಿಸಿ; ಶೋಕಿಲಾಲ. ವಿ.ಕ. ಉಡಾಫೆ ಪತ್ರಕರ್ತರನ್ನು ಬೆಳೆಸುತ್ತಿದೆ; ಪೋಷಿಸುತ್ತಿದೆ. ಅದಕ್ಕೆ ಅದುವೇ ಸರಿಬಿಡಿ. ವಿಮರ್ಶಕಿ ವಿ.ಕೆಯ ಅವತಾರ ಕಂಡು ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಾಳೆ; ವಿ.ಕ. ಈಗ ನೋಡುವ ಪತ್ರಿಕೆ-ಓದುವ ಪತ್ರಿಕೆ ಅಲ್ಲ. ಪತ್ರಿಕೋಧ್ಯಮದ ಗಾಂಭೀರ್ಯವನ್ನೇ ಅದು ಮಸುಕುಗೊಳಿಸುತ್ತಿದೆ.
ಸಂಪಾದಕೀಯ ಬರೆದಾತನಿಗೆ ಗೊತ್ತಿಲ್ಲದಿರಬಹುದು; ಭೂ, ವಾಯು, ನೌಕಾದಳಗಳಿಗೆ ಪ್ರತ್ಯೇಕ ದಂಡನಾಯಕರಿರುತ್ತಾರೆ. ರಾಷ್ಟ್ರಪತಿಗಳು ಈ ಮೂರೂ ದಳಗಳಿಗೆ ಮಾಹಾದಂಡನಾಯಕರು. ಸುಖೋಯಿಯಲ್ಲಿ ಹಾರಾಟ ನಡೆಸುವುದು ಅವರ ಹಕ್ಕು. ದೇಶದ ಅತ್ಯುನ್ನತ ಸ್ಥಾನದಲ್ಲಿರುವ, ೭೪ ವಯಸ್ಸಿನ ಮಹಿಳೆಯೊಬ್ಬರ ಆತ್ಮಸ್ಥೈರವನ್ನು ನಾವು ಅಚ್ಚರಿಯಿಂದ, ಹೆಮ್ಮೆಯಿಂದ ನೋಡಬೇಕು. ಅಸ್ವಸ್ಥ ಮನಸ್ಸು ಮಾತ್ರ ಅದನ್ನು ತೆವಲು ಎಂಬಾರ್ಥದಲ್ಲಿ ’ಶೋಕಿ’ ಎಂದು ಕರೆಯಬಲ್ಲುದು. ಯುದ್ಧ ವಿಮಾನದಲ್ಲಿ ಹಾರಾಡುವುದಕ್ಕೆ ಗಟ್ಟಿ ಗುಂಡಿಗೆ ಬೇಕು. ಎಳಸು ಸಂಪಾದಕೀಯ ಬರೆದ ಹಾಗಲ್ಲ.
ಸಂಪಾದಕೀಯ ಎಂಬುದು ಒಂದು ಪತ್ರಿಕೆಯ ಗೊತ್ತು ಗುರಿಗಳನ್ನು ಹೇಳುತ್ತೆ; ಅದರ ಸಾಮಾಜಿಕ ನಿಲುವನ್ನು ಸ್ಪಷ್ಟಪಡಿಸುತ್ತೆ. ಸಂಪಾದಕೀಯ ಪುಟದಲ್ಲಿ ಬರುವ ಲೇಖನಗಳು ಇದಕ್ಕೆ ಪುಷ್ಟಿನೀಡುತ್ತವೆ. ಇದನ್ನೆಲ್ಲಾ ಗಮನಿಸಿಯೇ ಯಾರೋ ವಿ.ಕ.ವನ್ನು ’ಬಿಜೆಪಿಯ ಪಂಚಾಂಗ’ ಎಂದು ಕರೆದಿದ್ದಾರೆ.ಬಿಜೆಪಿಯ ಪುರುಷ ಮನಸ್ಸು ಮಹಿಳೆಯನ್ನು ಖಾಸಾಗಿ ಆಸ್ತಿ ಎಂದು ಪರಿಗಣಿಸುತ್ತದೆ. ಅದು ಸದಾ ಸ್ತ್ರೀಯರನ್ನು ಅಂಕೆಯಲ್ಲಿಟ್ಟುಕೊಳ್ಳಬಯಸುತ್ತದೆ. ಸಾಧ್ಯವಾದಲೆಲ್ಲ ಅವರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಅದಕ್ಕೆ ರಾಷ್ಟ್ರಪತಿಗಳೂ ಹೊರತಾಗಲಿಲ್ಲವಲ್ಲ ಎಂಬುದೇ ನೋವಿನ ಸಂಗತಿ.
ಕುಲಾಂತರಿ ಬೀಜ; ವಾಚಾಳಿಗಳಚರ್ಚೆ
Posted by
Nishada Kanjari
on Thursday, October 15, 2009
/
Comments: (0)
ಬ್ಲಾಗ್ ಬರೆಯುವುದರಲ್ಲಿನ ಆಸಕ್ತಿ ಹೊರಟು ಹೋಗಿದೆ. ಅರೋಗ್ಯಕರ ಅಂತರದಲ್ಲಿ ನಿಂತು ನೋಡಿದರೂ ಅದರಲ್ಲಿ ಹುಳುಕನ್ನು ಹುಡುಕಿ ತೆಗೆಯುವವರೇ ಹೆಚ್ಚಾಗಿದ್ದಾರೆ. ಆದರೆ ಇವತ್ತು ಬರೆಯದೆ ಇರಲಾಗಲಿಲ್ಲ.
ಕುಲಾಂತರಿ ಬದನೆ ತಳಿಯನ್ನು ಭಾರತದಲ್ಲಿ ಬೆಳೆಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಜೈವಿಕ ತಂತ್ರಜ್ನಾನ ನಿಯಂತ್ರಣ ಸಂಸ್ಥೆಯ ’ಜೆನೆಟಿಕ್ ಎಂಜಿನಿಯರಿಂಗ್ ಅಪ್ರೂವಲ್ ಕಮಿಟಿ’ ನಿನ್ನೆ ಒಪ್ಪಿಗೆ ನೀಡಿದೆ. ರೈತ ಸಂಘಟನೆಗಳು ಬಿಟಿ ಹತ್ತಿ, ಬಿಟಿ ಬದನೆ ಮುಂತಾದ ಕುಲಾಂತರಿ ತಳಿಗಳ ವಿರುದ್ದ ದಶಕಗಳಿಂದಲೂ ಹೋರಾಟ ಮಾಡುತ್ತಾ ಬಂದಿವೆ. ಪ್ರೋ. ನಂಜುಂಡಸ್ವಾಮಿಯವರಂತೂ ಮಾನ್ಸಂಟೋ ಕಂಪೆನಿಯ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದರು.
ಇಂದು ಕನ್ನಡದ ಎರಡು ಸುದ್ದಿಚಾನಲ್ ಗಳು ಬಿಟಿ ಬದನೆಯ ಕುರಿತು ಅರ್ಧ ಘಂಟೆಯ ಕಾರ್ಯಕ್ರಮ ನಡೆಸಿಕೊಟ್ಟವು. ಸಮಯೋಚಿತವದುದೇ. ಆದರೆ ನಿರೂಪಕರಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿತ್ತು. ಎರಡೂ ಚಾನಲ್ ನಲ್ಲಿ ವಿಷಯದ ಪರ ಮತ್ತು ವಿರೋಧ ಕುರಿತು ಮಾತಾಡುವ ಇಬ್ಬರು ತಜ್ನರಿದ್ದರು. ಅವರಲ್ಲಿನ ಮಾಹಿತಿಯನ್ನು ಹೊರಗೆಳೆದು ವಿಚಾರ ಮಂಥನ ನಡೆಸುವಲ್ಲಿ ನಿರೂಪಕರು ವಿಪಲರಾಗಿ ಅವರ ದಡ್ಡತನವೇ ಎದ್ದು ಕಾಣುತ್ತಿತ್ತು.
ನಿರೂಪಕರಿಗೆ ವಿಷಯದ ಆಳ ಅರಿವು ಇರಬೇಕೆಂದಿಲ್ಲ. ಅಥಿತಿಗಳನ್ನು ಪರಸ್ಪರ ಚರ್ಚೆಗೆ ದೂಡಿಬಿಟ್ಟು, ಅದು ಅತಿರೇಕಕ್ಕೆ ಹೋಗದಂತೆ ನೋಡಿಕೊಂಡು ತಾವು ಸಮನ್ವಯಕಾರರಾಗಿ ಹಳಿ ತಪ್ಪದಂತೆ ನೋಡಿಕೊಂಡರಾಯಿತು. ಅದಕ್ಕೆ ವಿಷಯದ ಪ್ರಾಥಮಿಕ ಜ್ನಾನವಿದ್ದರೂ ಸಾಕಾಗುತ್ತದೆ.
ಕುಲಾಂತರಿ ಬೀಜ ನಮ್ಮ ದೇಶಕ್ಕೆ ಬಂದರೆ ಏನಾಗುತ್ತೆ? ನಮ್ಮ ರೈತರಿಗೆ ಬೀಜದ ಮೇಲಿನ ಹಕ್ಕು ಹೊರಟು ಹೋಗುತ್ತೆ. ಪಿಳಿಗೆಯಿಂದ ಪಿಳಿಗೆಗೆ ಹರಿದು ಬಂದಿರುವ ಈ ಹಕ್ಕು ಕಳೆದುಹೋಗಿ ಬಹುರಾಷ್ಟ್ರೀಯ ಬೀಜ ಕಂಪಿನಿಗಳ ಮುಂದೆ ನಮ್ಮ ರೈತ ಬೀಜಕ್ಕಾಗಿ ಬೊಗಸೆಯೊಡ್ಡಿ ನಿಲ್ಲಬೇಕಾಗುತ್ತೆ. ನಮ್ಮ ಆಹಾರ ಸ್ವಾವಲಂಬನೆ ಹೊರಟು ಹೋಗುತ್ತೆ. ಅವರ ಬೀಜಕ್ಕೆ ಅವರು ಶಿಪಾರಸ್ಸು ಮಾಡಿದ ಗೊಬ್ಬರವನ್ನು ಹಾಕಬೇಕಾಗುತ್ತೆ.ನಮ್ಮ ತಟ್ಟೆಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳ ಸ್ವಾಮ್ಯತೆ.
ಎರಡನೆಯದಾಗಿ ಕುಲಾಂತರಿ ಬೀಜವೆಂಬುದು ನಿಸರ್ಗವಿರೋಧಿ. ಅದು ಜೀವ ಸಂಕುಲದ ಸಹಜ ಅರಳುವಿಕೆಯಲ್ಲ. ಒಂದು ಜೀವಿಯ ವಂಶವಾಹಿನಿಯನ್ನು ಇನ್ನೊಂದು ಜೀವಿಯ ವಂಶವಾಹಿನಿಯೊಳಗೆ ಬಲವಂತವಾಗಿ ತುರುಕುವುದು. ಪ್ರಾಣಿಗಳ ವಂಶವಾಹಿನಿಯನ್ನು ತರಕಾರಿಯ ವಂಶವಾಹಿನಿಯಯೊಳಗೆ ಸೇರಿಸಿ ಇನ್ನೊಂದನ್ನು ಸೃಷ್ಟಿಸುವುದು; ಇದು ಒರಿಜಿನಲ್ ಅಲ್ಲ. ಇದನ್ನು ಮನುಷ್ಯ ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಸಾಧ್ಯವೇ? ಈ ಪ್ರಾಥಮಿಕ ಜ್ನಾನವಿದ್ದರೂ ಸಾಕು ಕಾರ್ಯಕ್ರಮವನ್ನು ನಿಭಾಯಿಸಬಹುದು.
ಪ್ರಾಥಮಿಕ ಜ್ನಾನವೇ ಇಲ್ಲದೆ ನಿರೂಪಕರ ಸೀಟಲ್ಲಿ ಕುಳಿತರೆ ಹೇಗೆ? ರೈತಾಪಿ, ಹಳ್ಳಿಯಿಂದ ಮುಂತಾದ ಬ್ಲಾಗ್ ಲೋಕವನ್ನಾದರೂ ಒಮ್ಮೆ ಹೊಕ್ಕು ಬರಬಾರದೇ?!
ಕುಲಾಂತರಿ ಬದನೆ ತಳಿಯನ್ನು ಭಾರತದಲ್ಲಿ ಬೆಳೆಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಜೈವಿಕ ತಂತ್ರಜ್ನಾನ ನಿಯಂತ್ರಣ ಸಂಸ್ಥೆಯ ’ಜೆನೆಟಿಕ್ ಎಂಜಿನಿಯರಿಂಗ್ ಅಪ್ರೂವಲ್ ಕಮಿಟಿ’ ನಿನ್ನೆ ಒಪ್ಪಿಗೆ ನೀಡಿದೆ. ರೈತ ಸಂಘಟನೆಗಳು ಬಿಟಿ ಹತ್ತಿ, ಬಿಟಿ ಬದನೆ ಮುಂತಾದ ಕುಲಾಂತರಿ ತಳಿಗಳ ವಿರುದ್ದ ದಶಕಗಳಿಂದಲೂ ಹೋರಾಟ ಮಾಡುತ್ತಾ ಬಂದಿವೆ. ಪ್ರೋ. ನಂಜುಂಡಸ್ವಾಮಿಯವರಂತೂ ಮಾನ್ಸಂಟೋ ಕಂಪೆನಿಯ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದರು.
ಇಂದು ಕನ್ನಡದ ಎರಡು ಸುದ್ದಿಚಾನಲ್ ಗಳು ಬಿಟಿ ಬದನೆಯ ಕುರಿತು ಅರ್ಧ ಘಂಟೆಯ ಕಾರ್ಯಕ್ರಮ ನಡೆಸಿಕೊಟ್ಟವು. ಸಮಯೋಚಿತವದುದೇ. ಆದರೆ ನಿರೂಪಕರಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿತ್ತು. ಎರಡೂ ಚಾನಲ್ ನಲ್ಲಿ ವಿಷಯದ ಪರ ಮತ್ತು ವಿರೋಧ ಕುರಿತು ಮಾತಾಡುವ ಇಬ್ಬರು ತಜ್ನರಿದ್ದರು. ಅವರಲ್ಲಿನ ಮಾಹಿತಿಯನ್ನು ಹೊರಗೆಳೆದು ವಿಚಾರ ಮಂಥನ ನಡೆಸುವಲ್ಲಿ ನಿರೂಪಕರು ವಿಪಲರಾಗಿ ಅವರ ದಡ್ಡತನವೇ ಎದ್ದು ಕಾಣುತ್ತಿತ್ತು.
ನಿರೂಪಕರಿಗೆ ವಿಷಯದ ಆಳ ಅರಿವು ಇರಬೇಕೆಂದಿಲ್ಲ. ಅಥಿತಿಗಳನ್ನು ಪರಸ್ಪರ ಚರ್ಚೆಗೆ ದೂಡಿಬಿಟ್ಟು, ಅದು ಅತಿರೇಕಕ್ಕೆ ಹೋಗದಂತೆ ನೋಡಿಕೊಂಡು ತಾವು ಸಮನ್ವಯಕಾರರಾಗಿ ಹಳಿ ತಪ್ಪದಂತೆ ನೋಡಿಕೊಂಡರಾಯಿತು. ಅದಕ್ಕೆ ವಿಷಯದ ಪ್ರಾಥಮಿಕ ಜ್ನಾನವಿದ್ದರೂ ಸಾಕಾಗುತ್ತದೆ.
ಕುಲಾಂತರಿ ಬೀಜ ನಮ್ಮ ದೇಶಕ್ಕೆ ಬಂದರೆ ಏನಾಗುತ್ತೆ? ನಮ್ಮ ರೈತರಿಗೆ ಬೀಜದ ಮೇಲಿನ ಹಕ್ಕು ಹೊರಟು ಹೋಗುತ್ತೆ. ಪಿಳಿಗೆಯಿಂದ ಪಿಳಿಗೆಗೆ ಹರಿದು ಬಂದಿರುವ ಈ ಹಕ್ಕು ಕಳೆದುಹೋಗಿ ಬಹುರಾಷ್ಟ್ರೀಯ ಬೀಜ ಕಂಪಿನಿಗಳ ಮುಂದೆ ನಮ್ಮ ರೈತ ಬೀಜಕ್ಕಾಗಿ ಬೊಗಸೆಯೊಡ್ಡಿ ನಿಲ್ಲಬೇಕಾಗುತ್ತೆ. ನಮ್ಮ ಆಹಾರ ಸ್ವಾವಲಂಬನೆ ಹೊರಟು ಹೋಗುತ್ತೆ. ಅವರ ಬೀಜಕ್ಕೆ ಅವರು ಶಿಪಾರಸ್ಸು ಮಾಡಿದ ಗೊಬ್ಬರವನ್ನು ಹಾಕಬೇಕಾಗುತ್ತೆ.ನಮ್ಮ ತಟ್ಟೆಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳ ಸ್ವಾಮ್ಯತೆ.
ಎರಡನೆಯದಾಗಿ ಕುಲಾಂತರಿ ಬೀಜವೆಂಬುದು ನಿಸರ್ಗವಿರೋಧಿ. ಅದು ಜೀವ ಸಂಕುಲದ ಸಹಜ ಅರಳುವಿಕೆಯಲ್ಲ. ಒಂದು ಜೀವಿಯ ವಂಶವಾಹಿನಿಯನ್ನು ಇನ್ನೊಂದು ಜೀವಿಯ ವಂಶವಾಹಿನಿಯೊಳಗೆ ಬಲವಂತವಾಗಿ ತುರುಕುವುದು. ಪ್ರಾಣಿಗಳ ವಂಶವಾಹಿನಿಯನ್ನು ತರಕಾರಿಯ ವಂಶವಾಹಿನಿಯಯೊಳಗೆ ಸೇರಿಸಿ ಇನ್ನೊಂದನ್ನು ಸೃಷ್ಟಿಸುವುದು; ಇದು ಒರಿಜಿನಲ್ ಅಲ್ಲ. ಇದನ್ನು ಮನುಷ್ಯ ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಸಾಧ್ಯವೇ? ಈ ಪ್ರಾಥಮಿಕ ಜ್ನಾನವಿದ್ದರೂ ಸಾಕು ಕಾರ್ಯಕ್ರಮವನ್ನು ನಿಭಾಯಿಸಬಹುದು.
ಪ್ರಾಥಮಿಕ ಜ್ನಾನವೇ ಇಲ್ಲದೆ ನಿರೂಪಕರ ಸೀಟಲ್ಲಿ ಕುಳಿತರೆ ಹೇಗೆ? ರೈತಾಪಿ, ಹಳ್ಳಿಯಿಂದ ಮುಂತಾದ ಬ್ಲಾಗ್ ಲೋಕವನ್ನಾದರೂ ಒಮ್ಮೆ ಹೊಕ್ಕು ಬರಬಾರದೇ?!
ಬಿ.ಬಿ.ಸಿಗೊಂದು ಎಡಿಟೋರಿಯಲ್ ಗೈಡ್ ಲೈನ್ಸ್
Posted by
Nishada Kanjari
on Thursday, September 24, 2009
/
Comments: (0)

ಟೀವಿ ಚಾನಲ್ ಗಳನ್ನು ಕೈ ಯಾಂತ್ರಿಕವಾಗಿ ಬದಲಾಯಿಸ್ತ ಇತ್ತು. ಸುದ್ದಿ ಚಾನಲ್ಲೊಂದರಲ್ಲಿ ’ಪಂಚರಂಗಿ ಪಾಂಚಾಲಿ’ ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ’ಸಚ್ ಕ ಸಾಮ್ನ’ ಎಂಬ ರಿಯಾಲಿಟಿ ಶೋದಲ್ಲಿ ತನ್ನ ಅಂತರಂಗದ ಗುಟ್ಟುಗಳನ್ನು ಬಹಿರಂಗಪಡಿಸಿದ ದ್ರೌಪದಿ ಪಾತ್ರಧಾರಿಣಿಯಾಗಿದ್ದ ರೂಪಗಂಗೂಲಿ ಬಿಚ್ಚಿಟ್ಟ ಸತ್ಯಗಳನ್ನಾದರಿಸಿದ ಕಾರ್ಯಕ್ರಮವಿದು.
ಮಂಗಳವಾರ ಪ್ರಸಾರ ಕಂಡ ಈ ಕಾರ್ಯಕ್ರಮವನ್ನು ಉಪೇಕ್ಷಿಸಿ ಚಾನಲ್ ಬದಲಾಯಿಸಿದ್ದೆ. ಯಾಕೆಂದರೆ ಕಾರ್ಯಕ್ರಮ ಪುರುಷ ಪಕ್ಷಪಾತಿಯಾಗಿ ಮುಂದುವರಿಯುತ್ತಿತ್ತು. ಇಂದು ಅದು ನೆನಪಿಗೆ ಬಂತು; ಯಾಕೆಂದರೆ ಇಂದು ವಿಶ್ವ ಹೆಣ್ಣುಮಕ್ಕಳ ದಿನಾಚರಣೆಯಂತೆ. ಅದು ಕೂಡ ಗೊತ್ತಾದದ್ದು ಈಟೀವಿ ನ್ಯೂಸ್ ನಿಂದ.
ಟೀವಿ ರಿಮೋಟ್ ವೀಕ್ಷಕರ ಕೈಯಲ್ಲಿರುತ್ತೆ. ಹಾಗಾಗಿ ಬೇಕಾದ ಚಾನಲ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಸುದ್ದಿ ಚಾನಲ್ ಗಳ ಲೈವ್ ಕವರೇಜ್ ಕೆಲವೊಮ್ಮೆ ಮನಸ್ಸನ್ನು ಘಾಸಿಗೊಳಿಸುತ್ತೆ. ಅದರಲ್ಲೂ ದುರ್ಮರಣಕ್ಕಿಡಾದವರ ಆಪ್ತರ ಮುಂದೆ ಸೌಂಡ್ ಬೈಟ್ ಗಾಗಿ ಮೈಕ್ ಹಿಡಿಯುವುದಿದೆಯಲ್ಲಾ ಅದು ತುಂಬಾ ಅಮಾನವೀಯ ಅನ್ನಿಸುತ್ತೆ. ಹಿಂಸೆಯಾಗುತ್ತೆ. ಸಾವನ್ನು, ಅತ್ಯಾಚಾರವನ್ನು ಮಾರ್ಕೇಟ್ ಮಾಡಿಕೊಳ್ಳುವುದು ಅನಾಗರೀಕತೆ ಎನಿಸಿಕೊಳ್ಳುವುದಿಲ್ಲವೇ?
ಸುದ್ದಿ ಚಾನಲ್ ಗಳ ಹಿರಿಯಣ್ಣನಂತಿರುವ ಬಿ.ಬಿ.ಸಿ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ. ಅದಕ್ಕಾಗಿ ಅದು ತನ್ನ ಎಡಿಟೋರಿಯಲ್ ಗೈಡ್ ಲೈನ್ಸ್ ಅನ್ನು ಕಳೆದ ಜುಲೈ ಇಂದ ಜಾರಿಗೆ ತಂದಿದೆ.
ಹೀಗೊಂದು ಅಲೋಚನೆ ಅದಕ್ಕೆ ಬರಲು ಕಾರಣವಾದ ಘಟನೆಯೇ ರಷ್ಯನ್ ಫೆಡರೇಷನ್ ನ ಬೆಸ್ಲಾನ್ ಶಾಲಾ ಮಕ್ಕಳ ದುರಂತ
೨೦೦೪ರ ಸೆ.೧ರಂದು ಚೆಚನ್ಯಾ ಬಂಡುಕೋರರು ಬೆಸ್ಲಾನ್ ಶಾಲೆಯ ೧೧೦೦ ಮಕ್ಕಳನ್ನು ಮತ್ತು ಅವರ ಪೋಷಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಸತತ ೫ ದಿನ ಅವರನ್ನು ಸ್ಕೂಲಿನ ಜಿಮ್ ನಲ್ಲಿ ಕೂಡಿ ಹಾಕಲಾಗಿತ್ತು. ಅನ್ನ ನೀರು, ಔಷಧಿ ಸರಬರಾಜಿಗೂ ಉಗ್ರಗಾಮಿಗಳು ಅವಕಾಶ ಕೊಡಲಿಲ್ಲ. ಇಬ್ಬರು ಮಹಿಳೆಯರೂ ಸೇರಿದಂತೆ ಒಟ್ಟು ೩೪ ಉಗ್ರಗಾಮಿಗಳಿದ್ದರು. ಜಿಮ್ ನಲ್ಲಿ ಸೊಪೋಕೇಶನ್ ಉಂಟಾಗಿ ಆ ಪುಟ್ಟ ಮಕ್ಕಳು ಪ್ರಜ್ನಾಶೂನ್ಯರಾದರು. ಕ್ರಮೇಣ ಸಾಯತೊಡಗಿದರು. ರಷ್ಯನ್ ಸೈನ್ಯ ಬಂಡುಕೋರರಿಂದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಹೊತ್ತಿಗೆ ೩೩೪ ಜನ ಸತ್ತಿದ್ದರು. ಅವರಲ್ಲಿ ೧೮೬ ಮಕ್ಕಳಾಗಿದ್ದರು.
ಮೇಲಿನ ಘಟನೆಯನ್ನು ಬಿ.ಬಿ.ಸಿ ಸೇರಿದಂತೆ ಎಲ್ಲಾ ಸುದ್ದಿ ಚಾನಲ್ ಗಳು ಲೈವ್ ಕವರೇಜ್ ನೀಡಿದ್ದವು. ಸತ್ತ ಮಕ್ಕಳನ್ನು ಉಗ್ರಗಾಮಿಗಳು ಶಾಲೆಯಿಂದ ಹೊರಕ್ಕೆ ಎಸೆಯುತ್ತಿದ್ದರು. ಅದನ್ನೆಲ್ಲಾ ನಾವು ಲೈವ್ ಕವರೇಜ್ ನಲ್ಲಿ ನೋಡಿದ್ದೇವೆ. ಸೆ.೧ ಬಾಸ್ಲೇನ್ ಶಾಲೆಯಲ್ಲಿ ’ಡೇ ಅಫ್ ನಾಲೆಡ್ಜ್’ ದಿನ. ಅಂದರೆ ನಮ್ಮ ಶಿಕ್ಷಕರ ದಿನಾಚರಣೆಗೆ ಹತ್ತಿರದ ದಿನದಂತೆ. ಮಕ್ಕಳೆಲ್ಲಾ ತಮ್ಮ ಫೋಷಕರ ಕೈ ಹಿಡಿದುಕೊಂಡು ಪ್ರೀತಿಯ ಟೀಚರ್ ಗೆ ಹೂವು, ಗಿಪ್ಟ್, ಬೆಲೂನ್ ಗಳನ್ನು ಕೊಡಲು ಶಾಲೆಯೊಳಗೆ ಹೋದವರು ಹೆಣವಾಗಿ ಹೊರಬೀಳುತ್ತಿದ್ದರು.
ಬಿ.ಬಿ.ಸಿ ಇದನ್ನು ಲೈವ್ ಕವರೇಜ್ ಮಾಡಿದ ನಂತರದಲ್ಲಿ ಬಹುಶಃ ಬಹಳಷ್ಟು ವಿಚಾರ ವಿಮರ್ಶೆ ನಡೆಸಿರಬೇಕು. ಹಾಗಾಗಿ ಅದು ಸೆನ್ಸಿಟಿವ್ ಲೈವ್ ನ್ಯೂಸ್ ಕವರೇಜ್ ಗೆ ಎಡಿಟೋರಿಯಲ್ ಗೈಡ್ ಲೈನ್ಸ್ ಅನ್ನು ರೂಪಿಸಿತು. ಸುದ್ದಿಯಲ್ಲಿ ’ವೇಗಕ್ಕಿಂತಲೂ ನಿಖರತೆ ಮುಖ್ಯ’ ಎಂಬುದು ಬ್ರೇಕಿಂಗ್ ನ್ಯೂಸ್ ನ ಬದ್ದತೆ; ಸೆನ್ಸಿಟಿವ್ ನ್ಯೂಸ್ ಅನ್ನು ಪ್ರಸಾರ ಮಾಡುವಾಗ ವಿಳಂಬನೀತಿಯನ್ನು ಅನುಸರಿಸಬೇಕು. ಎಷ್ಟು ವಿಳಂಬಿಸಬೇಕು ಎಂಬುದನ್ನು ಸುದ್ದಿ ಮುಖ್ಯಸ್ಥರು ತೀರ್ಮಾನಿಸುತ್ತಾರೆ. ಇದು ವೀಕ್ಷಕರ ಜೊತೆಗೆ ನಮ್ಮ ಒಪ್ಪಂದ. ಅವರು ನಮ್ಮ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಇವು ನಮ್ಮ ಸಂಪಾದಕೀಯದ ನೀತಿ ಮತ್ತು ಮೌಲ್ಯಗಳು’ ಎಂದು ಬಿ.ಬಿ.ಸಿಯ ಸಂಪಾದಕೀಯ ಪಾಲೀಸಿಯ ನಿಯಂತ್ರಕರಾದ ಸ್ಟೀಪನ್ ವೈಟಲ್ ಹೇಳುತ್ತಾರೆ.
ಸಂಸ್ಥೆಯ ಉದೋಗಿಯೊಬ್ಬರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಅನ್ನಿಸಿದರೆ ಸಂಪಾದಕೀಯ ಪಾಲಿಸಿಯ ನಿಯಂತ್ರಕರೇ ಅದನ್ನು ಪರಿಸೀಲನೆಗೆ ಒಳಪಡಿಸುತ್ತಾರೆ. ಗೈಡ್ ಲೈನ್ಸ್ ೧೮ ವರ್ಷ ಕೆಳಗಿನ ವೀಕ್ಷಕರ ರಕ್ಶಣೆ, ಕ್ರೈಮ್, ಹಿಂಸೆ ಮತ್ತು ಅಪರಾಧ, ರಿಲೀಜಿಯನ್, ಪ್ರೈವಸಿ ಮತ್ತು ನಿಷ್ಪಕ್ಷಪಾತದ ಮೇಲೆ ಲಕ್ಷ್ಯವನ್ನು ಇಟ್ಟಿದೆ.
ಕ್ರೈಮ್ ಮತ್ತು ಸಮಾಜಘಾತುಕ ನಡವಳಿಕೆಗಳಿಗೆ ಸಂಬಂಧಿಸಿದ ವರಧಿಗಳು ಪ್ರಸಾರವಾಗಬೇಕಾದರೆ ಗೈಡ್ ಲೈನ್ಸ್ ಮುಖ್ಯಸ್ಥರ ಪರಿಶೀಲನೆಗೆ ಒಳಪಡಲೇ ಬೇಕು.
ನಮ್ಮಲ್ಲಿಯೂ ಇಂತಹದೊಂದು ಗೈಡ್ ಲೈನ್ಸ್ ಬೇಕು ಅನ್ನಿಸುತ್ತದೆಯಲ್ಲವೇ?
ಒಂದು ಸುದ್ದಿ ಹಲವು ಮುಖ
Posted by
Nishada Kanjari
on Tuesday, September 8, 2009
/
Comments: (1)
ಆಂದ್ರ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ದುರ್ಮರಣವನ್ನಪ್ಪಿದ ದಿನ ನಾನು ಬೆಂಗಳೂರಿನಲ್ಲಿರಲಿಲ್ಲ. ಹಾಗಾಗಿ ನಾನಿದ್ದ ಊರಿನಲ್ಲಿ ಟೀವಿ೯ ಎಂಬ ಸುದ್ದಿ ವಾಹಿನಿಯ ಲೈವ್ ಟೆಲಿಕಾಸ್ಟ್ ನ್ನು ಮಾತ್ರವೇ ನೆಚ್ಚಿಕೊಳ್ಳುವುದು ಅನಿರ್ವಾಯವಾಗಿತ್ತು. ಕೆಲಸದ ಮಧ್ಯೆ ಆಗಾಗ ಟೀವಿಯನ್ನು ಇಣುಕಿ ನೋಡುತ್ತಿದ್ದೆ. ಯಾವಾಗ ವೈಎಸ್ ಅರ್ ಮರಣ ಖಚಿತವಾಯ್ತೋ ಆಗ ಅವರ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಮತ್ತಷ್ಟು ವಿವರಗಳು ಬೇಕೆನಿಸಿತು.
ಟೀವಿ೯ನಲ್ಲಿ ಹಮೀದ್ ಪಾಳ್ಯ ಪ್ರೇಮ್ ಚಂದ್ರ ಸಾಗರ್ ರವರನ್ನು ಕೂರಿಸಿಕೊಂಡು ಅವರ ಸಹಪಾಠಿಯಾಗಿದ್ದ ವೈ ಎಸ್ ಆರ್ ಸ್ವಭಾವದ ಬಗ್ಗೆ ಅವರ ಮೆಡಿಕಲ್ ಕಾಲೇಜಿನಲ್ಲಿನ ವಿದ್ಯಾರ್ಥಿ ಬದುಕಿನ ಅನುಭವಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ಉದಯ ವಾರ್ತೆಗಳತ್ತ ಹೊರಳಿದರೆ ಅದು ಎಂದಿನಂತೆ ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಯಾವುದೋ ಸಂದರ್ಶನವನ್ನು ಮರುಪ್ರಸಾರ ಮಾಡುತ್ತಿತ್ತು. ಮಲೆಯಾಳದ ಏಷ್ಯಾನೆಟ್ ನ್ಯೂಸ್ ಚಾನಲ್ ಮಾತ್ರ ಒಂದೆರಡು ಪ್ಯಾಕೇಜ್ ಗಳನ್ನು ಮಾಡಿ ವೈಎಸ್ ಆರ್ ಬಗ್ಗೆ ಒಂದಷ್ಟು ವಿವರಗಳನ್ನು ನೀಡಿತು.
ನಿಜ. ಒಬ್ಬ ಜನಾನುರಾಗಿ ವ್ಯಕ್ತಿ ಸತ್ತಾಗ ಆತನ ಒಳ್ಳೆಯತನವನ್ನಷ್ಟೇ ಹಾಡಿ ಹೊಗಳಲಾಗುತ್ತದೆ. ಆತನ ದೌರ್ಬಲ್ಯಗಳನ್ನು ಉದಾರತೆಯಿಂದ ಕ್ಷಮಿಸಿಬಿಡಲಾಗುತ್ತದೆ. ಅದು ಜನತೆಯ ದೊಡ್ಡ ಗುಣ. ಆ ದೊಡ್ಡ ಗುಣ ಮಾಧ್ಯಮಗಳಿಗೆ ಇರಬಾರದು. ಅದು ನಿಷ್ಪಕ್ಷಪಾತವಾಗಿರಬೇಕು; ಸತ್ಯನಿಷ್ಠವಾಗಿರಬೇಕು; ನಿಷ್ಠೂರವಾಗಿರಬೇಕು. ಅದು ಜನಸಾಮಾನ್ಯರಂತೆ ಭಾವುಕ ನೆಲೆಯಲ್ಲಿ ಪ್ರತಿಕ್ರಿಯಿಸಬಾರದು. ಹಾಗಾಗಿ ವೈಎಸ್ ಅರ್ ಬಗ್ಗೆ ಒಂದು ಗಂಭೀರವಾದ ಚರ್ಚೆಯನ್ನು ನಾನು ದೃಶ್ಯಮಾಧ್ಯಮದಿಂದ ನಿರೀಕ್ಷಿಸಿದ್ದೆ. ಆದರೆ ನನ್ನ ಗಮನಕ್ಕೆ ಬಂದಂತೆ ಅಂತಹ ಚರ್ಚೆ ನಡೆದಿಲ್ಲ. ಯಾವ ದಿನಪತ್ರಿಕೆಗಳೂ ಗಂಭೀರವಾದ ಲೇಖನ ಪ್ರಕಟಿಸಿದಂತಿಲ್ಲ. ದಿ ವೀಕ್ ವಾರಪತ್ರಿಕೆಯಲ್ಲಿ ಕನ್ನಡದವರೇ ಆದ ಸಚ್ಚಿದಾನಂದ ಮೂರ್ತಿ ಕವರ್ ಸ್ಟೋರಿ ಬರೆದರೂ ಅದು ಪೂರ್ಣ ಮಾಹಿತಿಯನ್ನು ನೀಡಿದಂತಿರಲಿಲ್ಲ. ವೈಎಸ್ ಆರ್ ಊಳಿಗಮಾನ್ಯ ಪದ್ದತಿ ಇನ್ನೂ ಜೀವಂತವಾಗಿರುವ ರಾಯಲ ಸೀಮೆಯ ಶ್ರೀಮಂತ ಮನೆತನದಲ್ಲಿ ಹುಟ್ಟಿದವರಾದರೂ ನಕ್ಷಲ್ ನಾಯಕ ಪೆರಿಟಾಲ ರವಿಯ ಜೋತೆ ಆತ್ಮೀಯ ಸಂಬಂಧ ಹೊಂದಿದ್ದರು. ಈ ವಿರೋಧಾಬಾಸ ನನ್ನಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.
ಜೀವನ ಚರಿತ್ರೆಗಳನ್ನು ನಾನು ಬಹು ಇಷ್ಟಪಟ್ಟು ಓದುತ್ತೇನೆ. ಮನುಷ್ಯಸ್ವಭಾವಗಳ ಬಗ್ಗೆ ನನಗೆ ತೀವ್ರ ಕುತೂಹಲ.ನಿನ್ನೆಯ ಪ್ರಜಾವಾಣಿಯಲ್ಲಿ ದಿನೇಶ್ ಅಮಿನಮಟ್ಟು ತಮ್ಮ ಕಾಲಂ ’ಅನಾವರಣ’ದಲ್ಲಿ ”ವೈಎಸ್ ಆರ್ ಜನಪ್ರಿಯತೆಯ ದೀಪದ ಕೆಳಗಿನ ಕತ್ತಲು”ಎಂಬ ಲೇಖನ ಬರೆದಿದ್ದಾರೆ. ವಿಶ್ಲೇಷಣಾತ್ಮಕವಾದ ಈ ಲೇಖನ ನನ್ನ ಹಲವಾರು ಪ್ರಶ್ನೆ, ಸಂದೇಹ, ಕುತೂಹಲಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದೆ. ನಮ್ಮ ಎಷ್ಟು ಜನ ಪತ್ರಕರ್ತರಿಗೆ ಈ ಸಾಮರ್ಥ್ಯ ಇದೆ?
ಇವತ್ತಿನ ವಿಜಯಕರ್ನಾಟಕದ ೬ನೇ ’ವಿಶಾಲ’ ಪುಟದಲ್ಲಿ ಒಂದು ಸುದ್ದಿ ಪ್ರಕಟವಾಗಿದೆ. ೨೦೦೭ನೇ ವರ್ಷದ ಶ್ರೇಷ್ಠ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಕನ್ನಡದ ನಟಿ ಉಮಾಶ್ರೀ ಪಡೆದುಕೊಂಡಿದ್ದ ಸಂದರ್ಭದ ಲೇಖನವಿದು. ಅದನ್ನು ಬರೆದವರು ದೇವಶೆಟ್ಟಿ ಮಹೇಶ್ ಎಂಬ ಸಿನಿಮಾ ವರದಿಗಾರ. ಅದರ ಹೆಡ್ಡಿಂಗ್ ಹೇಗಿತ್ತು ಗೊತ್ತೆ? ’ಗಂಡ ಬಿಟ್ಟಿದ್ದಕ್ಕೇ ಅವಾರ್ಡ್ ಬಂತಾ?’ ಇದು ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾದವರನ್ನು ಗೌರವಿಸುವ ಪರಿಯೇ? ಸಮಯಪ್ರಜ್ನೆಯೆಂಬುದು ಇಲ್ಲದಿದ್ದರೆ ಇಂತಹ ಲೇಖನ ಪ್ರಕಟಗೊಳ್ಳುತ್ತದೆ. ಸಮಯಪ್ರಜ್ನೆ ಇದ್ದರೆ ’...ದೀಪದ ಕೆಳಗಿನ ಕತ್ತಲು’ ನಂತಹ ಸಮಯಸ್ಪೂರ್ತಿ ಬರಹ ಹುಟ್ಟಿಕೊಳ್ಳುತ್ತದೆ. ವಿಜಯಕರ್ನಾಟಕದ ಪುಟಗಳನ್ನು ವಿಹಾರ, ವಿರಾಜ, ವಿಶಾಲ, ವಿಚಾರ, ವಿಕಾಸ, ವಿರಾಟ, ವಿಜಯ ಎಂದು ವಿಂಗಡಿಸಿರುವುದಕ್ಕೂ ದೇವಶೆಟ್ಟಿಯ ಲೇಖನಕ್ಕೂ ಏನಾದರೂ ಸಂಬಂಧವಿರಬಹುದೇ?
ಪ್ರಜವಾಣಿಯ ಸಹ ಪ್ರಕಟಣೆಯಾದ ’ಸುಧಾ’ದ ಕವರ್ ಸ್ಟೋರಿ ಕೂಡ ವೈಎಸ್ ಆರ್ ಕುರಿತದ್ದೇ ’ದುರಂತ ನಾಯಕ’. ಹನೀಫ್ ಸುಧಾದ ಇನ್ ಚಾರ್ಜ್ ಆದ ಮೇಲೆ ಅದು ಸುದ್ದಿಗೆ ತಕ್ಷಣ ಪ್ರತಿಕ್ರಿಯಿಸುತ್ತಿದೆ. ಹಿಂದೆಲ್ಲಾದರೆ ವೈಎಸ್ ಆರ್ ಲೇಖನ ಮುಂದಿನ ವಾರದಲ್ಲಿ ಬರುತ್ತಿತ್ತು. ಅಥವಾ ಪ್ಯಾಮಿಲಿ ಮ್ಯಾಗಝಿನ್ ಗೆ ಅದು ಸುದ್ದಿಯೇ ಆಗುತ್ತಿರಲಿಲ್ಲವೆನೋ!
ಪ್ರತಿ ಮಂಗಳವಾರ ಬೆಳಿಗ್ಗೆ ೯ಘಂಟೆಗೆ ಆಕಾಶವಾಣಿ ಕಾಮನಬಿಲ್ಲಿನಲ್ಲಿ ’ಪತ್ರ-ಪತ್ರಕರ್ತ’ ಎಂಬ ಸಂದರ್ಶನ ಪ್ರಸಾರವಾಗುತ್ತದೆ. ಬೆಳ್ಳನೆಯ ಬೆಳಗಿಗೆ ಮುದ ನೀಡುವ ಕಾರ್ಯಕ್ರಮ. ಇಂದಿನ ಅತಿಥಿ ಖ್ಯಾತ ಬರಹಗಾರರಾದ ಜೋಗಿ. ಎಸ್. ಎಸ್. ಉಮೇಶ್ ನಡೆಸಿಕೊಟ್ಟ ಈ ಕಾರ್ಯಕ್ರಮ ಖುಷಿ ಕೊಟ್ಟಿತು. ಜೋಗಿ ಮನಸ್ಸು ಬಿಚ್ಚಿ ಮಾತಾಡಿದರು. ಧಾರಾವಾಹಿ ಸಂಭಾಷಣೆಗಳಿಗೆ ತಾನೊಂದು ಪ್ಯಾಕ್ಟರಿಯಾದೆ ಎಂದು ತಮ್ಮನ್ನು ತಾವೇ ಗೇಲಿ ಮಾಡಿಕೊಂಡು ನಕ್ಕರು. ತಮ್ಮ ಕನಸು ಕನವರಿಕೆಗಳನ್ನು, ನದಿ, ಕಾಡುಗಳ ಬಗೆಗಿನ ಮೋಹವನ್ನು ಹಂಚಿಕೊಂಡರು. ಟೀವಿ ಧಾರವಾಹಿಗಳು ನಮ್ಮನ್ನು ಒಣಗಿಸಿಬಿಡುತ್ತವೆ; ಅದರಿಂದ ಹೊರಬರುತ್ತೇನೆ; ಸಿನಿಮಾದ ಬಗ್ಗೆ ತನಗೆ ಆಕರ್ಷಣೆಯಿದೆ. ಎಂದು ಮತ್ತೊಮ್ಮೆ ನಕ್ಕರು. ಸಂವೇಧನಾಶೀಲ ಬರಹಗಾರರಾದ, ಅಂತರ್ಮುಖ ವ್ಯಕ್ತಿತ್ವದ ಜೋಗಿಯ ನಗು ಕಾಡಬೆಳದಿಂಗಳಾಗದಿರಲಿ ಎಂಬುದು ನಿಷಾದದ ಹಾರೈಕೆ.
ಅರೋಗ್ಯಕರ ಅಂತರದಲ್ಲಿ ನಿಂತು ಪತ್ರಿಕೋಧ್ಯಮವನ್ನು ಗಮನಿಸುವುದಕ್ಕೆ ನನಗೆ ನಿಜಕ್ಕೂ ಖುಷಿಯಿದೆ.
ಟೀವಿ೯ನಲ್ಲಿ ಹಮೀದ್ ಪಾಳ್ಯ ಪ್ರೇಮ್ ಚಂದ್ರ ಸಾಗರ್ ರವರನ್ನು ಕೂರಿಸಿಕೊಂಡು ಅವರ ಸಹಪಾಠಿಯಾಗಿದ್ದ ವೈ ಎಸ್ ಆರ್ ಸ್ವಭಾವದ ಬಗ್ಗೆ ಅವರ ಮೆಡಿಕಲ್ ಕಾಲೇಜಿನಲ್ಲಿನ ವಿದ್ಯಾರ್ಥಿ ಬದುಕಿನ ಅನುಭವಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ಉದಯ ವಾರ್ತೆಗಳತ್ತ ಹೊರಳಿದರೆ ಅದು ಎಂದಿನಂತೆ ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಯಾವುದೋ ಸಂದರ್ಶನವನ್ನು ಮರುಪ್ರಸಾರ ಮಾಡುತ್ತಿತ್ತು. ಮಲೆಯಾಳದ ಏಷ್ಯಾನೆಟ್ ನ್ಯೂಸ್ ಚಾನಲ್ ಮಾತ್ರ ಒಂದೆರಡು ಪ್ಯಾಕೇಜ್ ಗಳನ್ನು ಮಾಡಿ ವೈಎಸ್ ಆರ್ ಬಗ್ಗೆ ಒಂದಷ್ಟು ವಿವರಗಳನ್ನು ನೀಡಿತು.
ನಿಜ. ಒಬ್ಬ ಜನಾನುರಾಗಿ ವ್ಯಕ್ತಿ ಸತ್ತಾಗ ಆತನ ಒಳ್ಳೆಯತನವನ್ನಷ್ಟೇ ಹಾಡಿ ಹೊಗಳಲಾಗುತ್ತದೆ. ಆತನ ದೌರ್ಬಲ್ಯಗಳನ್ನು ಉದಾರತೆಯಿಂದ ಕ್ಷಮಿಸಿಬಿಡಲಾಗುತ್ತದೆ. ಅದು ಜನತೆಯ ದೊಡ್ಡ ಗುಣ. ಆ ದೊಡ್ಡ ಗುಣ ಮಾಧ್ಯಮಗಳಿಗೆ ಇರಬಾರದು. ಅದು ನಿಷ್ಪಕ್ಷಪಾತವಾಗಿರಬೇಕು; ಸತ್ಯನಿಷ್ಠವಾಗಿರಬೇಕು; ನಿಷ್ಠೂರವಾಗಿರಬೇಕು. ಅದು ಜನಸಾಮಾನ್ಯರಂತೆ ಭಾವುಕ ನೆಲೆಯಲ್ಲಿ ಪ್ರತಿಕ್ರಿಯಿಸಬಾರದು. ಹಾಗಾಗಿ ವೈಎಸ್ ಅರ್ ಬಗ್ಗೆ ಒಂದು ಗಂಭೀರವಾದ ಚರ್ಚೆಯನ್ನು ನಾನು ದೃಶ್ಯಮಾಧ್ಯಮದಿಂದ ನಿರೀಕ್ಷಿಸಿದ್ದೆ. ಆದರೆ ನನ್ನ ಗಮನಕ್ಕೆ ಬಂದಂತೆ ಅಂತಹ ಚರ್ಚೆ ನಡೆದಿಲ್ಲ. ಯಾವ ದಿನಪತ್ರಿಕೆಗಳೂ ಗಂಭೀರವಾದ ಲೇಖನ ಪ್ರಕಟಿಸಿದಂತಿಲ್ಲ. ದಿ ವೀಕ್ ವಾರಪತ್ರಿಕೆಯಲ್ಲಿ ಕನ್ನಡದವರೇ ಆದ ಸಚ್ಚಿದಾನಂದ ಮೂರ್ತಿ ಕವರ್ ಸ್ಟೋರಿ ಬರೆದರೂ ಅದು ಪೂರ್ಣ ಮಾಹಿತಿಯನ್ನು ನೀಡಿದಂತಿರಲಿಲ್ಲ. ವೈಎಸ್ ಆರ್ ಊಳಿಗಮಾನ್ಯ ಪದ್ದತಿ ಇನ್ನೂ ಜೀವಂತವಾಗಿರುವ ರಾಯಲ ಸೀಮೆಯ ಶ್ರೀಮಂತ ಮನೆತನದಲ್ಲಿ ಹುಟ್ಟಿದವರಾದರೂ ನಕ್ಷಲ್ ನಾಯಕ ಪೆರಿಟಾಲ ರವಿಯ ಜೋತೆ ಆತ್ಮೀಯ ಸಂಬಂಧ ಹೊಂದಿದ್ದರು. ಈ ವಿರೋಧಾಬಾಸ ನನ್ನಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.
ಜೀವನ ಚರಿತ್ರೆಗಳನ್ನು ನಾನು ಬಹು ಇಷ್ಟಪಟ್ಟು ಓದುತ್ತೇನೆ. ಮನುಷ್ಯಸ್ವಭಾವಗಳ ಬಗ್ಗೆ ನನಗೆ ತೀವ್ರ ಕುತೂಹಲ.ನಿನ್ನೆಯ ಪ್ರಜಾವಾಣಿಯಲ್ಲಿ ದಿನೇಶ್ ಅಮಿನಮಟ್ಟು ತಮ್ಮ ಕಾಲಂ ’ಅನಾವರಣ’ದಲ್ಲಿ ”ವೈಎಸ್ ಆರ್ ಜನಪ್ರಿಯತೆಯ ದೀಪದ ಕೆಳಗಿನ ಕತ್ತಲು”ಎಂಬ ಲೇಖನ ಬರೆದಿದ್ದಾರೆ. ವಿಶ್ಲೇಷಣಾತ್ಮಕವಾದ ಈ ಲೇಖನ ನನ್ನ ಹಲವಾರು ಪ್ರಶ್ನೆ, ಸಂದೇಹ, ಕುತೂಹಲಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದೆ. ನಮ್ಮ ಎಷ್ಟು ಜನ ಪತ್ರಕರ್ತರಿಗೆ ಈ ಸಾಮರ್ಥ್ಯ ಇದೆ?
ಇವತ್ತಿನ ವಿಜಯಕರ್ನಾಟಕದ ೬ನೇ ’ವಿಶಾಲ’ ಪುಟದಲ್ಲಿ ಒಂದು ಸುದ್ದಿ ಪ್ರಕಟವಾಗಿದೆ. ೨೦೦೭ನೇ ವರ್ಷದ ಶ್ರೇಷ್ಠ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಕನ್ನಡದ ನಟಿ ಉಮಾಶ್ರೀ ಪಡೆದುಕೊಂಡಿದ್ದ ಸಂದರ್ಭದ ಲೇಖನವಿದು. ಅದನ್ನು ಬರೆದವರು ದೇವಶೆಟ್ಟಿ ಮಹೇಶ್ ಎಂಬ ಸಿನಿಮಾ ವರದಿಗಾರ. ಅದರ ಹೆಡ್ಡಿಂಗ್ ಹೇಗಿತ್ತು ಗೊತ್ತೆ? ’ಗಂಡ ಬಿಟ್ಟಿದ್ದಕ್ಕೇ ಅವಾರ್ಡ್ ಬಂತಾ?’ ಇದು ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾದವರನ್ನು ಗೌರವಿಸುವ ಪರಿಯೇ? ಸಮಯಪ್ರಜ್ನೆಯೆಂಬುದು ಇಲ್ಲದಿದ್ದರೆ ಇಂತಹ ಲೇಖನ ಪ್ರಕಟಗೊಳ್ಳುತ್ತದೆ. ಸಮಯಪ್ರಜ್ನೆ ಇದ್ದರೆ ’...ದೀಪದ ಕೆಳಗಿನ ಕತ್ತಲು’ ನಂತಹ ಸಮಯಸ್ಪೂರ್ತಿ ಬರಹ ಹುಟ್ಟಿಕೊಳ್ಳುತ್ತದೆ. ವಿಜಯಕರ್ನಾಟಕದ ಪುಟಗಳನ್ನು ವಿಹಾರ, ವಿರಾಜ, ವಿಶಾಲ, ವಿಚಾರ, ವಿಕಾಸ, ವಿರಾಟ, ವಿಜಯ ಎಂದು ವಿಂಗಡಿಸಿರುವುದಕ್ಕೂ ದೇವಶೆಟ್ಟಿಯ ಲೇಖನಕ್ಕೂ ಏನಾದರೂ ಸಂಬಂಧವಿರಬಹುದೇ?
ಪ್ರಜವಾಣಿಯ ಸಹ ಪ್ರಕಟಣೆಯಾದ ’ಸುಧಾ’ದ ಕವರ್ ಸ್ಟೋರಿ ಕೂಡ ವೈಎಸ್ ಆರ್ ಕುರಿತದ್ದೇ ’ದುರಂತ ನಾಯಕ’. ಹನೀಫ್ ಸುಧಾದ ಇನ್ ಚಾರ್ಜ್ ಆದ ಮೇಲೆ ಅದು ಸುದ್ದಿಗೆ ತಕ್ಷಣ ಪ್ರತಿಕ್ರಿಯಿಸುತ್ತಿದೆ. ಹಿಂದೆಲ್ಲಾದರೆ ವೈಎಸ್ ಆರ್ ಲೇಖನ ಮುಂದಿನ ವಾರದಲ್ಲಿ ಬರುತ್ತಿತ್ತು. ಅಥವಾ ಪ್ಯಾಮಿಲಿ ಮ್ಯಾಗಝಿನ್ ಗೆ ಅದು ಸುದ್ದಿಯೇ ಆಗುತ್ತಿರಲಿಲ್ಲವೆನೋ!
ಪ್ರತಿ ಮಂಗಳವಾರ ಬೆಳಿಗ್ಗೆ ೯ಘಂಟೆಗೆ ಆಕಾಶವಾಣಿ ಕಾಮನಬಿಲ್ಲಿನಲ್ಲಿ ’ಪತ್ರ-ಪತ್ರಕರ್ತ’ ಎಂಬ ಸಂದರ್ಶನ ಪ್ರಸಾರವಾಗುತ್ತದೆ. ಬೆಳ್ಳನೆಯ ಬೆಳಗಿಗೆ ಮುದ ನೀಡುವ ಕಾರ್ಯಕ್ರಮ. ಇಂದಿನ ಅತಿಥಿ ಖ್ಯಾತ ಬರಹಗಾರರಾದ ಜೋಗಿ. ಎಸ್. ಎಸ್. ಉಮೇಶ್ ನಡೆಸಿಕೊಟ್ಟ ಈ ಕಾರ್ಯಕ್ರಮ ಖುಷಿ ಕೊಟ್ಟಿತು. ಜೋಗಿ ಮನಸ್ಸು ಬಿಚ್ಚಿ ಮಾತಾಡಿದರು. ಧಾರಾವಾಹಿ ಸಂಭಾಷಣೆಗಳಿಗೆ ತಾನೊಂದು ಪ್ಯಾಕ್ಟರಿಯಾದೆ ಎಂದು ತಮ್ಮನ್ನು ತಾವೇ ಗೇಲಿ ಮಾಡಿಕೊಂಡು ನಕ್ಕರು. ತಮ್ಮ ಕನಸು ಕನವರಿಕೆಗಳನ್ನು, ನದಿ, ಕಾಡುಗಳ ಬಗೆಗಿನ ಮೋಹವನ್ನು ಹಂಚಿಕೊಂಡರು. ಟೀವಿ ಧಾರವಾಹಿಗಳು ನಮ್ಮನ್ನು ಒಣಗಿಸಿಬಿಡುತ್ತವೆ; ಅದರಿಂದ ಹೊರಬರುತ್ತೇನೆ; ಸಿನಿಮಾದ ಬಗ್ಗೆ ತನಗೆ ಆಕರ್ಷಣೆಯಿದೆ. ಎಂದು ಮತ್ತೊಮ್ಮೆ ನಕ್ಕರು. ಸಂವೇಧನಾಶೀಲ ಬರಹಗಾರರಾದ, ಅಂತರ್ಮುಖ ವ್ಯಕ್ತಿತ್ವದ ಜೋಗಿಯ ನಗು ಕಾಡಬೆಳದಿಂಗಳಾಗದಿರಲಿ ಎಂಬುದು ನಿಷಾದದ ಹಾರೈಕೆ.
ಅರೋಗ್ಯಕರ ಅಂತರದಲ್ಲಿ ನಿಂತು ಪತ್ರಿಕೋಧ್ಯಮವನ್ನು ಗಮನಿಸುವುದಕ್ಕೆ ನನಗೆ ನಿಜಕ್ಕೂ ಖುಷಿಯಿದೆ.
ಬಿಯಾಂಡ್ ದಿ ನ್ಯೂಸ್ -ಇಂದಿನ ಅಗತ್ಯ
Posted by
Nishada Kanjari
on Tuesday, August 25, 2009
/
Comments: (1)
ಮೊನ್ನೆ ಯಾರೋ ಹೇಳುತ್ತಿದ್ದರು; ಈಗ ಜರ್ನಲಿಸ್ಟ್ ಗಳು ಪರಸ್ಪರ ಎದುರಾದಾಗ ಕೇಳಿಕೊಳ್ಳುವ ಮೊದಲ ಪ್ರಶ್ನೆ ಎಂದರೆ ’ನನ್ನ ಬ್ಲಾಗ್ ನೋಡಿದ್ಯಾ?’ ಅಂದರೆ ಇಂದಿನ ಪತ್ರಕರ್ತರ ಆದ್ಯತೆಗಳಲ್ಲಿ ಬ್ಲಾಗ್ ನಡೆಸುವುದೂ ಒಂದು.
ಹಿಂದೆಲ್ಲಾ ನನ್ನ ವರದಿ ನೋಡಿದ್ರಾ? ಲೇಖನ ಓದಿದ್ರಾ? ನಿಮಗೇನನ್ನಿಸಿತು ಎನ್ನುತ್ತಿದ್ದ ಪತ್ರಕರ್ತರೀಗ ಬ್ಲಾಗ್ ಓದುವಂತೆ ಒತ್ತಾಯಿಸುತ್ತಿದ್ದಾರೆ.
ಆ ಬ್ಲಾಗ್ ಗಳನ್ನು ನೀವು ಒಪನ್ ಮಾಡಿ ಓದಿದ್ರೆ ನಿಮ್ಮ ತಲೆ ಕೆಟ್ಟು ಕೆರ ಹಿಡಿದು ಹೋದೀತು. ಅತೃಪ್ತ ಆತ್ಮದ ಹಳವಂಡಗಳ ಸರಮಾಲೆ. ಮನುಷ್ಯ ಮೂಲತಃ ಕ್ರೂರಿ ಎಂಬ ಮನೋವಿಶ್ಲೇಷಕರ ಮಾತನ್ನು ಇವು ಸಾಬೀತು ಪಡಿಸುತ್ತವೆ. ಆತ ಯಾರ ಏಳಿಗೆಯನ್ನೂ ಸಹಿಸಲಾರ. ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸಲು ಅವಕಾಶವಿರುವ ಪತ್ರಕರ್ತರು ಕೂಡ ಕ್ಷುಲಕ ವಿಚಾರಗಳಿಗೆ ಪರಸ್ಪರ ಕೆಸರೆರಚಿಕೊಂಡು ತಮ್ಮ ಕರ್ತವ್ಯವನ್ನು ಮರೆತರೆ?
ಪತ್ರಕರ್ತರಲ್ಲಿ ವೃತ್ತಿಪರತೆ ಮಾಯವಾಗುತ್ತಿದೆ ಎಂದು ಎಲ್ಲರೂ ಹೇಳುತ್ತಾರೆ. ಅದಕ್ಕೆ ಉದಾಹರಣೆಗಳೂ ಸಿಗುತ್ತಿವೆ. ಈಗ ಮುದ್ರಣ ಮಾಧ್ಯಮದ ಬಹುತೇಕ ವರದಿಗಾರರು ಪತ್ರಿಕಾ ಗೋಷ್ಠಿಗಳಿಗೆ ಹಾಜರಾಗುವುದಿಲ್ಲ. ಆದರೆ ಸುದ್ದಿ ಬರೆದು ಕೊಡುತ್ತಾರೆ. ಹೇಗೆ ಗೊತ್ತೆ? ಹೇಗೂ ನ್ಯೂಸ್ ಚಾನಲ್ ನವರು ಕವರ್ ಮಾಡುತ್ತಾರಲ್ಲ...ಅದನ್ನೇ ನೋಡಿಕೊಂಡು ನಾಲ್ಕು ಸಾಲು ಗೀಚಿದರಾಯ್ತು ಎಂಬ ಉಢಾಪೆ. ಏನಾದರೂ ಸ್ಪಷ್ಟಿಕರಣ ಬೇಕೆಂದಾದರೆ ಸಂಚಾರಿ ದೂರವಾಣಿ ಇದೆಯಲ್ಲಾ. ಆದರೆ ಬಹಳಷ್ಟು ಪತ್ರಕರ್ತರಿಗೆ ಸಂಶಯಗಳೇ ಹುಟ್ಟುವುದಿಲ್ಲ. ಕುಳಿತಲ್ಲಿಯೇ ವರದಿ ಸಿದ್ದಗೊಳ್ಳುತ್ತದೆ; ತನಿಖಾ ವರದಿ ಹುಟ್ಟಿಕೊಳ್ಳುತ್ತದೆ. ರಾಜಕೀಯ ವಿಶ್ಲೇಷಣೆ ರೂಪು ಪಡೆಯುತ್ತದೆ.
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಂತೆ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾರಂಗವೂ ಸ್ವಸ್ಥ ಸಮಾಜ ರಚನೆಗಾಗಿ ದುಡಿಯುತ್ತಿರಬೇಕು. ಸದಾ ಎಚ್ಚರದಿಂದಿರಬೇಕು. ಆದರೆ ಪತ್ರಕರ್ತರು ತೂಕಡಿಸುತ್ತಿದ್ದಾರೆ. ಇಲ್ಲವೇ ರಾಜಕಾರಣ ಮಾಡುತ್ತಿದ್ದಾರೆ. ಅವರು ಸುದ್ದಿಯ ಬೆನ್ನು ಹತ್ತುವುದಿಲ್ಲ.
ಕಳೆದ ವಾರ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು ತಮ್ಮ ಆತ್ಮೀಯರಲ್ಲಿ ಹೇಳಿಕೊಂಡ ಮಾತೊಂದನ್ನು ನಿಷಾದ ಕೇಳಿಸಿಕೊಂಡಿದೆ. ಅವರೊಮ್ಮೆ ವಿಶ್ವವಿದ್ಯಾಲಯದ ಪರೀಕ್ಷೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ಕೊಟ್ಟರಂತೆ. ಹಾಲ್ ಹೊರಗಡೆ ಸೂಟ್ ಕೇಸ್ ಗಳು, ಟ್ರಾವಲ್ ಬ್ಯಾಗ್ ಗಳು ಸಾಲಾಗಿ ಇಟ್ಟುಕೊಂಡಿತ್ತಂತೆ. ವಿಚಾರಿಸಿದಾಗ ಅವೆಲ್ಲಾ ಪರೀಕ್ಷೆ ಬರೆಯಲು ಬಂದ ನಾರ್ತ್ ಇಂಡಿಯನ್ಸ್ ಸ್ಟೂಡೆಂಟ್ಸ್ ಗಳದು ಅಂತೆ. ಈ ವಿದ್ಯಾರ್ಥಿಗಳು ಕ್ಲಾಸಿಗೆ ಅಟೆಂಡ್ ಆಗುವುದಿಲ್ಲ. ಆದರೆ ಅವರಿಗೆ ಹಾಜರಿ ನೀಡಲಾಗುತ್ತದೆ. ಅವರು ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಫೈಲ್ ಆಗುತ್ತಾರೆ. ಅದಕ್ಕಾಗಿ ರಿವ್ಯಾಲ್ಯುವೇಷನ್ ಗೆ ಹಾಕುತ್ತಾರೆ. ಅಲ್ಲಿ ಅವರನ್ನು ಪಾಸು ಮಾಡಿಸಲಾಗುತ್ತದೆ. ಅಂತಹ ಒಂದು ಜಾಲವೇ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಪ್ರಮುಖ ರಾಜಕಾರಣಿಯೊಬ್ಬರು ಈ ಜಾಲದ ಹಿಂದಿದ್ದಾರೆ ಎನ್ನಲಾಗುತ್ತಿದ್ದಾರೆ.
ಮೇಲಿನ ವಿಷಯ ಬಿಡಿ; ಕಳೆದ ಅಲ್ಲ ಅದಕ್ಕೂ ಹಿಂದಿನ ವಾರ ಕರ್ನಾಟಕ ಮತ್ತು ಅಂಧ್ರ ಗಡಿ ವಿವಾದದ ಬಗ್ಗೆ ಓಬಳಾಪುರ ಗಣಿಗಾರಿಕೆ ಕುರಿತಂತೆ ಕೇಂದ್ರ ಸರ್ವೆ ತಂಡ ಆಗಮಿಸಿದ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ ನಿಜ ವಿಷಯ ಏನೆಂದರೆ; ಸರ್ವೆ ತಂಡ ಬಂದದ್ದು ನಿಜ,ಆದರೆ ಅದು ಬಂದಿದ್ದು ಅಂದ್ರದ ಎರಡು ಗಣಿಗಳ ನಡುವಿನ ಬಿಕ್ಕಟ್ಟು ಪರಿಶೀಲನೆಗೆ. ಪತ್ರಕರ್ತರು ಕೌಂಟರ್ ಚೆಕ್ ಮಾಡಬೇಡವೇ?
ಮೊನ್ನೆ ಗೋವಿಂದರಾಜನಗರ ಉಪಚುನಾವಣೆ ನಡೆಯಿತ್ತಲ್ಲಾ... ಬಹಿರಂಗ ಪ್ರಚಾರ ನಡೆದ ಸಂಜೆ ೬ ಘಂಟೆಗೆ ಸುವರ್ಣ ಚಾನಲ್ ನಲ್ಲಿ ಕಾಂಗ್ರೇಸ್ ಅಬ್ಯರ್ಥಿ ಪ್ರಿಯಾಕೃಷ್ಣನ ಸಂದರ್ಶನ ಪ್ರಸಾರ ಆರಂಭವಾಗಿತ್ತು. ಸುಂದರವಾದ ಸಂದರ್ಶಕಿ ಪ್ರಶ್ನೆ ಹಾಕುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಟೀವಿ ಪರದೆಯ ಮೇಲೆ ಪ್ರಾಯೋಜಿತ ಕಾರ್ಯಕ್ರಮ ಎಂಬ ಮಾಹಿತಿ ಮೂಡಿಬಂತು. ಅದಾದ ಸ್ವಲ್ಪ ಹೊತ್ತಿನಲ್ಲಿ ಕಾರ್ಯಕ್ರಮವೇ ನಿಂತು ಹೋಗಿ ಬೇರೆ ಕಾರ್ಯಕ್ರಮ ಬಂತು. ಅಲ್ಲಿ-ಇಲ್ಲಿ ವಿಚಾರಿಸಿದಾಗ ಪೇಪರುಗಳನ್ನು ಸೆಂಟಿಮೀಟರ್ ಗಳಲ್ಲಿ ಖರೀದಿ ಮಾಡಿ ಸುದ್ದಿಗಳನ್ನು ಪ್ರಚಾರ ಮಾಡಿದ ಹಾಗೆ ಸುವರ್ಣ ನ್ಯೂಸ್ ಚಾನಲ್ ನ ಅರ್ಧ ಘಂಟೆಯ ಸ್ಲಾಟ್ ಪರ್ಚೇಸ್ ಮಾಡಿದ್ದರು. ಆದರೆ ’ಪ್ರಾಯೋಜಿತ’ ಎಂಬ ಸ್ಟಿಕ್ಕರ್ ಬಂದಾಗ ಅವರು ಹಿಂತೆಗೆದರು. ಯಾಕೆಂದರೆ ಚುನಾವಣಾ ಆಯೋಗ ಅದಕ್ಕೂ ಲೆಖ್ಖ ಕೇಳುತ್ತೆ.
ಮುಂದೆ ನಡೆದ ಬೆಳವಣಿಗೆಗಳು ಟಾಬ್ಲಾಯ್ಡ್ ಪತ್ರಿಕೆಗಳಿಗೆ ಲೇಖನವಾಗಬಲ್ಲುದು. ಕಾಂಗ್ರೇಸ್ ಸಂಪರ್ಕಿಸಿದ್ದು ಟೀವಿ೯ ಚಾನಲ್ ಇರಬಹುದೇ? ಯಾಕೆಂದರೆ ಮರುದಿನದಿಂದಲೇ ಬಿಜೇಪಿ ಅಭ್ಯರ್ಥಿ ಸೋಮಣ್ಣನ ವಿರೋಧಿ ನ್ಯೂಸ್ ಗಳು ಮತ್ತೆ ಮತ್ತೆ ಟೀವಿ ೯ನಲ್ಲಿ ಪ್ರಸಾರಗೊಂಡವು.
ಇದನ್ನೆಲ್ಲಾ ಪತ್ರಕರ್ತನಾದವನು ಗಮನಿಸುತ್ತಿರಬೇಕು. ಟೀವಿ ಚಾನಲ್ ಗಳಲ್ಲಿ ಬರೆಯಲು ಬರುವವರು ಕಡಿಮೆ. ವಾರ್ತಾವಾಚಕಿಯರು ಗೊಂಬೆಗಳು. ಬರೆದ್ದದ್ದನ್ನಷ್ಟೇ ಓದುತ್ತಾರೆ. ಕ್ಯಾಮರವೇ ಬಹಳಷ್ಟನ್ನು ಹೇಳುತ್ತದೆ. ದಿನಪತ್ರಿಕೆಗಳು ಸುದ್ದಿಯನ್ನಷ್ಟೇ ನೀಡುತ್ತವೆ. ನಿನ್ನೆ ಟೀವಿಯಲ್ಲಿ ನೋಡಿದ್ದಷ್ಟೇ ವಿವರಗಳು ಇಂದು ಪತ್ರಿಕೆಯಲ್ಲಿ ಬರುವುದಾದರೆ ಪತ್ರಿಕೆಗಳು ಯಾಕೆ ಬೇಕು? ಸುದ್ದಿಯಾಚೆಗಿನ ಸುದ್ದಿ ನಮಗೆ ಬೇಕು- ’ಬಿಯಾಂಡ್ ದಿ ನ್ಯೂಸ್’ ಅದು ಇಂದಿನ ಅಗತ್ಯ.
ಹಿಂದೆಲ್ಲಾ ನನ್ನ ವರದಿ ನೋಡಿದ್ರಾ? ಲೇಖನ ಓದಿದ್ರಾ? ನಿಮಗೇನನ್ನಿಸಿತು ಎನ್ನುತ್ತಿದ್ದ ಪತ್ರಕರ್ತರೀಗ ಬ್ಲಾಗ್ ಓದುವಂತೆ ಒತ್ತಾಯಿಸುತ್ತಿದ್ದಾರೆ.
ಆ ಬ್ಲಾಗ್ ಗಳನ್ನು ನೀವು ಒಪನ್ ಮಾಡಿ ಓದಿದ್ರೆ ನಿಮ್ಮ ತಲೆ ಕೆಟ್ಟು ಕೆರ ಹಿಡಿದು ಹೋದೀತು. ಅತೃಪ್ತ ಆತ್ಮದ ಹಳವಂಡಗಳ ಸರಮಾಲೆ. ಮನುಷ್ಯ ಮೂಲತಃ ಕ್ರೂರಿ ಎಂಬ ಮನೋವಿಶ್ಲೇಷಕರ ಮಾತನ್ನು ಇವು ಸಾಬೀತು ಪಡಿಸುತ್ತವೆ. ಆತ ಯಾರ ಏಳಿಗೆಯನ್ನೂ ಸಹಿಸಲಾರ. ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸಲು ಅವಕಾಶವಿರುವ ಪತ್ರಕರ್ತರು ಕೂಡ ಕ್ಷುಲಕ ವಿಚಾರಗಳಿಗೆ ಪರಸ್ಪರ ಕೆಸರೆರಚಿಕೊಂಡು ತಮ್ಮ ಕರ್ತವ್ಯವನ್ನು ಮರೆತರೆ?
ಪತ್ರಕರ್ತರಲ್ಲಿ ವೃತ್ತಿಪರತೆ ಮಾಯವಾಗುತ್ತಿದೆ ಎಂದು ಎಲ್ಲರೂ ಹೇಳುತ್ತಾರೆ. ಅದಕ್ಕೆ ಉದಾಹರಣೆಗಳೂ ಸಿಗುತ್ತಿವೆ. ಈಗ ಮುದ್ರಣ ಮಾಧ್ಯಮದ ಬಹುತೇಕ ವರದಿಗಾರರು ಪತ್ರಿಕಾ ಗೋಷ್ಠಿಗಳಿಗೆ ಹಾಜರಾಗುವುದಿಲ್ಲ. ಆದರೆ ಸುದ್ದಿ ಬರೆದು ಕೊಡುತ್ತಾರೆ. ಹೇಗೆ ಗೊತ್ತೆ? ಹೇಗೂ ನ್ಯೂಸ್ ಚಾನಲ್ ನವರು ಕವರ್ ಮಾಡುತ್ತಾರಲ್ಲ...ಅದನ್ನೇ ನೋಡಿಕೊಂಡು ನಾಲ್ಕು ಸಾಲು ಗೀಚಿದರಾಯ್ತು ಎಂಬ ಉಢಾಪೆ. ಏನಾದರೂ ಸ್ಪಷ್ಟಿಕರಣ ಬೇಕೆಂದಾದರೆ ಸಂಚಾರಿ ದೂರವಾಣಿ ಇದೆಯಲ್ಲಾ. ಆದರೆ ಬಹಳಷ್ಟು ಪತ್ರಕರ್ತರಿಗೆ ಸಂಶಯಗಳೇ ಹುಟ್ಟುವುದಿಲ್ಲ. ಕುಳಿತಲ್ಲಿಯೇ ವರದಿ ಸಿದ್ದಗೊಳ್ಳುತ್ತದೆ; ತನಿಖಾ ವರದಿ ಹುಟ್ಟಿಕೊಳ್ಳುತ್ತದೆ. ರಾಜಕೀಯ ವಿಶ್ಲೇಷಣೆ ರೂಪು ಪಡೆಯುತ್ತದೆ.
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಂತೆ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾರಂಗವೂ ಸ್ವಸ್ಥ ಸಮಾಜ ರಚನೆಗಾಗಿ ದುಡಿಯುತ್ತಿರಬೇಕು. ಸದಾ ಎಚ್ಚರದಿಂದಿರಬೇಕು. ಆದರೆ ಪತ್ರಕರ್ತರು ತೂಕಡಿಸುತ್ತಿದ್ದಾರೆ. ಇಲ್ಲವೇ ರಾಜಕಾರಣ ಮಾಡುತ್ತಿದ್ದಾರೆ. ಅವರು ಸುದ್ದಿಯ ಬೆನ್ನು ಹತ್ತುವುದಿಲ್ಲ.
ಕಳೆದ ವಾರ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು ತಮ್ಮ ಆತ್ಮೀಯರಲ್ಲಿ ಹೇಳಿಕೊಂಡ ಮಾತೊಂದನ್ನು ನಿಷಾದ ಕೇಳಿಸಿಕೊಂಡಿದೆ. ಅವರೊಮ್ಮೆ ವಿಶ್ವವಿದ್ಯಾಲಯದ ಪರೀಕ್ಷೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ಕೊಟ್ಟರಂತೆ. ಹಾಲ್ ಹೊರಗಡೆ ಸೂಟ್ ಕೇಸ್ ಗಳು, ಟ್ರಾವಲ್ ಬ್ಯಾಗ್ ಗಳು ಸಾಲಾಗಿ ಇಟ್ಟುಕೊಂಡಿತ್ತಂತೆ. ವಿಚಾರಿಸಿದಾಗ ಅವೆಲ್ಲಾ ಪರೀಕ್ಷೆ ಬರೆಯಲು ಬಂದ ನಾರ್ತ್ ಇಂಡಿಯನ್ಸ್ ಸ್ಟೂಡೆಂಟ್ಸ್ ಗಳದು ಅಂತೆ. ಈ ವಿದ್ಯಾರ್ಥಿಗಳು ಕ್ಲಾಸಿಗೆ ಅಟೆಂಡ್ ಆಗುವುದಿಲ್ಲ. ಆದರೆ ಅವರಿಗೆ ಹಾಜರಿ ನೀಡಲಾಗುತ್ತದೆ. ಅವರು ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಫೈಲ್ ಆಗುತ್ತಾರೆ. ಅದಕ್ಕಾಗಿ ರಿವ್ಯಾಲ್ಯುವೇಷನ್ ಗೆ ಹಾಕುತ್ತಾರೆ. ಅಲ್ಲಿ ಅವರನ್ನು ಪಾಸು ಮಾಡಿಸಲಾಗುತ್ತದೆ. ಅಂತಹ ಒಂದು ಜಾಲವೇ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಪ್ರಮುಖ ರಾಜಕಾರಣಿಯೊಬ್ಬರು ಈ ಜಾಲದ ಹಿಂದಿದ್ದಾರೆ ಎನ್ನಲಾಗುತ್ತಿದ್ದಾರೆ.
ಮೇಲಿನ ವಿಷಯ ಬಿಡಿ; ಕಳೆದ ಅಲ್ಲ ಅದಕ್ಕೂ ಹಿಂದಿನ ವಾರ ಕರ್ನಾಟಕ ಮತ್ತು ಅಂಧ್ರ ಗಡಿ ವಿವಾದದ ಬಗ್ಗೆ ಓಬಳಾಪುರ ಗಣಿಗಾರಿಕೆ ಕುರಿತಂತೆ ಕೇಂದ್ರ ಸರ್ವೆ ತಂಡ ಆಗಮಿಸಿದ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ ನಿಜ ವಿಷಯ ಏನೆಂದರೆ; ಸರ್ವೆ ತಂಡ ಬಂದದ್ದು ನಿಜ,ಆದರೆ ಅದು ಬಂದಿದ್ದು ಅಂದ್ರದ ಎರಡು ಗಣಿಗಳ ನಡುವಿನ ಬಿಕ್ಕಟ್ಟು ಪರಿಶೀಲನೆಗೆ. ಪತ್ರಕರ್ತರು ಕೌಂಟರ್ ಚೆಕ್ ಮಾಡಬೇಡವೇ?
ಮೊನ್ನೆ ಗೋವಿಂದರಾಜನಗರ ಉಪಚುನಾವಣೆ ನಡೆಯಿತ್ತಲ್ಲಾ... ಬಹಿರಂಗ ಪ್ರಚಾರ ನಡೆದ ಸಂಜೆ ೬ ಘಂಟೆಗೆ ಸುವರ್ಣ ಚಾನಲ್ ನಲ್ಲಿ ಕಾಂಗ್ರೇಸ್ ಅಬ್ಯರ್ಥಿ ಪ್ರಿಯಾಕೃಷ್ಣನ ಸಂದರ್ಶನ ಪ್ರಸಾರ ಆರಂಭವಾಗಿತ್ತು. ಸುಂದರವಾದ ಸಂದರ್ಶಕಿ ಪ್ರಶ್ನೆ ಹಾಕುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಟೀವಿ ಪರದೆಯ ಮೇಲೆ ಪ್ರಾಯೋಜಿತ ಕಾರ್ಯಕ್ರಮ ಎಂಬ ಮಾಹಿತಿ ಮೂಡಿಬಂತು. ಅದಾದ ಸ್ವಲ್ಪ ಹೊತ್ತಿನಲ್ಲಿ ಕಾರ್ಯಕ್ರಮವೇ ನಿಂತು ಹೋಗಿ ಬೇರೆ ಕಾರ್ಯಕ್ರಮ ಬಂತು. ಅಲ್ಲಿ-ಇಲ್ಲಿ ವಿಚಾರಿಸಿದಾಗ ಪೇಪರುಗಳನ್ನು ಸೆಂಟಿಮೀಟರ್ ಗಳಲ್ಲಿ ಖರೀದಿ ಮಾಡಿ ಸುದ್ದಿಗಳನ್ನು ಪ್ರಚಾರ ಮಾಡಿದ ಹಾಗೆ ಸುವರ್ಣ ನ್ಯೂಸ್ ಚಾನಲ್ ನ ಅರ್ಧ ಘಂಟೆಯ ಸ್ಲಾಟ್ ಪರ್ಚೇಸ್ ಮಾಡಿದ್ದರು. ಆದರೆ ’ಪ್ರಾಯೋಜಿತ’ ಎಂಬ ಸ್ಟಿಕ್ಕರ್ ಬಂದಾಗ ಅವರು ಹಿಂತೆಗೆದರು. ಯಾಕೆಂದರೆ ಚುನಾವಣಾ ಆಯೋಗ ಅದಕ್ಕೂ ಲೆಖ್ಖ ಕೇಳುತ್ತೆ.
ಮುಂದೆ ನಡೆದ ಬೆಳವಣಿಗೆಗಳು ಟಾಬ್ಲಾಯ್ಡ್ ಪತ್ರಿಕೆಗಳಿಗೆ ಲೇಖನವಾಗಬಲ್ಲುದು. ಕಾಂಗ್ರೇಸ್ ಸಂಪರ್ಕಿಸಿದ್ದು ಟೀವಿ೯ ಚಾನಲ್ ಇರಬಹುದೇ? ಯಾಕೆಂದರೆ ಮರುದಿನದಿಂದಲೇ ಬಿಜೇಪಿ ಅಭ್ಯರ್ಥಿ ಸೋಮಣ್ಣನ ವಿರೋಧಿ ನ್ಯೂಸ್ ಗಳು ಮತ್ತೆ ಮತ್ತೆ ಟೀವಿ ೯ನಲ್ಲಿ ಪ್ರಸಾರಗೊಂಡವು.
ಇದನ್ನೆಲ್ಲಾ ಪತ್ರಕರ್ತನಾದವನು ಗಮನಿಸುತ್ತಿರಬೇಕು. ಟೀವಿ ಚಾನಲ್ ಗಳಲ್ಲಿ ಬರೆಯಲು ಬರುವವರು ಕಡಿಮೆ. ವಾರ್ತಾವಾಚಕಿಯರು ಗೊಂಬೆಗಳು. ಬರೆದ್ದದ್ದನ್ನಷ್ಟೇ ಓದುತ್ತಾರೆ. ಕ್ಯಾಮರವೇ ಬಹಳಷ್ಟನ್ನು ಹೇಳುತ್ತದೆ. ದಿನಪತ್ರಿಕೆಗಳು ಸುದ್ದಿಯನ್ನಷ್ಟೇ ನೀಡುತ್ತವೆ. ನಿನ್ನೆ ಟೀವಿಯಲ್ಲಿ ನೋಡಿದ್ದಷ್ಟೇ ವಿವರಗಳು ಇಂದು ಪತ್ರಿಕೆಯಲ್ಲಿ ಬರುವುದಾದರೆ ಪತ್ರಿಕೆಗಳು ಯಾಕೆ ಬೇಕು? ಸುದ್ದಿಯಾಚೆಗಿನ ಸುದ್ದಿ ನಮಗೆ ಬೇಕು- ’ಬಿಯಾಂಡ್ ದಿ ನ್ಯೂಸ್’ ಅದು ಇಂದಿನ ಅಗತ್ಯ.
ಶಶಿಧರ್ ಭಟ್ v/s ರಂಗನಾಥ ಸಂಕೇತಿ
Posted by
Nishada Kanjari
on Thursday, August 13, 2009
/
Comments: (0)

ಸುವರ್ಣ ನ್ಯೂಸ್ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕನ್ನಡ ಪ್ರಭದ ಎಚ್. ಆರ್ ರಂಗನಾಥ್ ನೇಮಕಗೊಂಡಿದ್ದಾರೆ. ಇದುವರೆಗೆ ಸುವರ್ಣ ನ್ಯೂಸ್ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾಗಿದ್ದ ಶಶಿಧರ್ ಭಟ್ ಗೆ ಪ್ರಮೋಶನ್ ನೀಡಿ ಜ್ಯುಪಿಟರಿಗೆ ಕರೆಸಿಕೊಳ್ಳಲಾಗಿದೆ. ಜ್ಯುಪಿಟರ್, ಸುವರ್ಣ ನ್ಯೂಸ್ ಚಾನಲ್ ನ ಮಾಲಕರಾದ ಸಂಸದ ರಾಜೀವ್ ಚಂದ್ರಶೇಖರವರ ಬ್ಯುಸಿನೆಸ್ ಜಾಲದ ಕೇಂದ್ರ ಆಡಳಿತ ಸಂಸ್ಥೆ. ಭವಿಷ್ಯದಲ್ಲಿ ಈ ಸಂಸ್ಥೆಯಿಂದ ಆರಂಭವಾಗಲಿರುವ ಕನ್ನಡ ದಿನ ಪತ್ರಿಕೆಯ ಜವಾಬ್ದಾರಿ ಭಟ್ಟರದೇ.
ಸುವರ್ಣ ಚಾನಲ್ ಆರಂಭವಾಗಿ ಎರಡೂವರೆ ವರ್ಷಗಳಷ್ಟೇ ಉರುಳಿವೆ. ಬಹುಶಃ ನ್ಯೂಸ್ ಚಾನಲ್ ಗೆ ಒಂದು ವರ್ಷ. ಯಾವಾಗಲೂ ಒಂದು ಸಂಸ್ಥೆಯನ್ನು ಕಟ್ಟುವುದು ಕಷ್ಟದ ಕೆಲಸ. ಅದು ಬಟ್ಟ ಬಯಲಲ್ಲಿ ದಿಕ್ಕು ಕಾಣದೆ ನಿಂತಂತೆ. ಒಳ್ಳೆಯ ಪೌಂಡೇಶನ್ ಹಾಕಿ ಕಟ್ಟಡ ನಿರ್ಮಿಸಿದಂತೆ. ಕಟ್ಟಿದ ಮೇಲೆ ಅದಕ್ಕೆ ಸುಣ್ಣ ಬಣ್ಣ ಬಳಿಯುವ ಕೆಲಸ ಯಾರು ಬೇಕಾದರು ಮಾಡಬಹುದು. ಮಹಡಿ ಕೂಡ ಕಟ್ಟಬಹುದು. ಈಗ ಸುಣ್ಣ ಬಣ್ಣ ಬಳಿಯುವ, ಮಹಡಿ ಕಟ್ಟುವ ಕೆಲಸಕ್ಕೆ ರಂಗನಾಥ್ ಬರುತ್ತಿದ್ದಾರೆ. ಇದರ ಬಗ್ಗೆ ಹಲವಾರು ಬ್ಲಾಗ್ ಗಳಲ್ಲಿ ಈಗಾಗಲೇ ಚರ್ಚೆ ನಡೆದಿದೆ. ವಿಮರ್ಶಕಿ ಮೊದಲು ಬರೆದಳು. ನಂತರ ಸುದ್ದಿಮಾತು ಬರೆಯಿತು. ಸ್ವತಃ ಭಟ್ಟರೇ ತಮ್ಮ ಬ್ಲಾಗ್ ’ಕುಮ್ರಿ’ಯಲ್ಲಿ ಬರೆದುಕೊಂಡರು. ನಾನು ನನ್ನ ಪರಿಚಯದಲ್ಲೇ ಹೇಳಿಕೊಂಡಂತೆ ಅಲೆಮಾರಿ. ಎಲ್ಲೋ ತಿರುಗಾಡಲು ಹೋಗಿದ್ದೆ. ಬಂದೊಡನೆ ಇದನ್ನು ಬರೆಯಲಾರಂಭಿಸಿದೆ.ಉಳಿದ ಬ್ಲಾಗ್ ಗಳಲ್ಲಿ ಪ್ರಸ್ತಾಪವಾದ ಸಂಗತಿಗಳನ್ನು ನಾನು ಮತ್ತೆ ಪ್ರಸ್ತಾಪಿಸುವುದಿಲ್ಲ.
ನನಗೆ ತಿಳಿದು ಬಂದಂತೆ ರಂಗನಾಥ ಮತ್ತು ಶಶಿಧರ ಭಟ್ಟರ ಪರಿಚಯಕ್ಕೆ ಕಾಲು ಶತಮಾನದ ಇತಿಹಾಸವಿದೆ.ಅದು ಗೆಳೆತನವೂ ಆಗಿರಬಹುದು ಅಥವಾ ವೃತ್ತಿ ಬಂಧವೂ ಆಗಿರಬಹುದು. ಕೌಟುಂಬಿಕ ಸೇಹವೂ ಆಗಿರಬಹುದು. ಹೀಗೆ ಸಂಶಯ ಪಡಲು ಕಾರಣವಿದೆ. ಬ್ಯಾಚುಲರ್ ಬದುಕಿನಲ್ಲಿ ಶಶಿಧರ್ ಮತ್ತು ರಂಗನಾಥ್ ಒಂದೇ ಮನೆಯಲ್ಲಿದ್ದರು. ಭಟ್ಟರು ಮದುವೆಯಾದ ಮೇಲೂ ರಂಗನಾಥ ಅದೇ ಮನೆಯಲ್ಲಿ ಸ್ವಲ್ಪ ಕಾಲ ಇದ್ದರು.
ಶಶಿಧರ್ ಭಟ್ ಕೆಲಸ ಮಾಡುತ್ತಿದ್ದ ಕನ್ನಡ ಪ್ರಭಕ್ಕೆ ರಂಗನಾಥ್ ಕ್ರೈಮ್ ರಿಪೋರ್ಟರ್ ಆಗಿ ಸೇರಿಕೊಂಡವರು. ಕ್ರಮೇಣ ಮ್ಯಾನೇಜ್ ಮೆಂಟಿಗೆ ಹತ್ತಿರವಾಗತೊಡಗಿದರು. ಶಶಿಧರ್ ಭಟ್ಟರ ಮುಖ್ಯವರದಿಗಾರನ ಹುದ್ದೆ ಮೇಲೆ ರಂಗನಾಥ್ ಕಣ್ಣು ಬಿತ್ತು. ಭಟ್ಟರು ಏನು ಮಾಡುವುದೆಂದು ತೋಚದೆ ಒದ್ದಾಡುತ್ತಿರುವಾಗ ಅವರಿಗೆ ಎಷ್ಯಾನೆಟ್ ಚಾನಲ್ ನಿಂದ ಕರೆ ಬಂತು. ’ಕಾವೇರಿ’ ಚಾನಲ್ ಭಟ್ಟರು ಕಟ್ಟಿದರು. ಅದು ಬಾಗಿಲು ಮುಚ್ಚಿದ ಮೇಲೆ ಸ್ವಂತ ಪ್ರೋಡಕ್ಷನ್ ಹೌಸ್ ಆರಂಭಿಸಿದರು. ಕಾವೇರಿಯನ್ನು ಕಟ್ಟಿಕೊಂಡು ಭಟ್ಟರು ಒಬ್ಬರೇ ಹೆಣಗಾಡಿದ್ದನ್ನು ಮರೆಯದ ಏಷ್ಯಾನೆಟ್ ಆಡಳಿತ ಮಂಡಳಿ ಮತ್ತೆ ಅವರನ್ನು ಸುವರ್ಣಕ್ಕೆ ಕರೆಸಿಕೊಂಡಿತು. ಸುವರ್ಣ ಉಳಿದ ಚಾನಲ್ ಗಳ ಜೋತೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆಯತೊಡಗಿತು. ಉತ್ತೇಜಿತರಾದ ಮ್ಯಾನೇಜ್ ಮೆಂಟ್ ಸುವರ್ಣ ನ್ಯೂಸ್ ಚಾನಲ್ ಆರಂಬಿಸಿತು. ಅದು ಕೂಡ ಉಳಿದೆರಡು ಚಾನಲ್ ಗಳ ಮಧ್ಯೆ ತನ್ನ ಕ್ರೆಡಿಬಿಲಿಟಿಯನ್ನು ಕಾಯ್ದುಕೊಂಡಿತು. ಆದರೆ ಟಿ.ಆರ್.ಪಿ ಏರಲಿಲ್ಲ. ಭಟ್ಟರ ಕುರ್ಚಿಯ ಮೇಲೆ ರಂಗನಾಥನ ಕಣ್ಣು ಬಿತ್ತು.
ಶಶಿಧರ್ ಮತ್ತು ರಂಗನಾಥನ ಗುಣ ಸ್ವಭಾವವನ್ನು ಸ್ವಲ್ಪ ವಿಶ್ಲೇಷಿಸಿದರೂ ಸಾಕು ಯಾಕೆ ಹೀಗಾಗುತ್ತದೆ ಎಂಬುದು ಗೊತ್ತಾಗಿಬಿಡುತ್ತದೆ. ಶಶಿಧರ್ ಗುಂಪುಗಾರಿಕೆ ಮಾಡುವವರಲ್ಲ. ತನಗನ್ನಿಸಿದ್ದನ್ನು ಒಬ್ಬಂಟಿಯಾಗಿಯೇ ಮಾಡುತ್ತಾರೆ; ಎದುರಿಸುತ್ತಾರೆ. ಅದು ತನ್ನ ಮೇಲಿರುವ ಅತಿಯಾದ ನಂಬಿಕೆಯೂ ಇರಬಹುದೇನೋ. ಹತ್ತಾರು ಪತ್ರಿಕೆಗಳನ್ನು ಹತ್ತಿಳಿದು ಇಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬಂದವರು. ಹಾಗೆ ಪಥ ಬದಲಿಸಿದಾಗಲೆಲ್ಲ ವಾರಗಟ್ಟಲೆ ನಿದ್ದೆ ಮಾಡುತ್ತಾ, ಪಾನ್ ಜಗಿದುಕೊಂಡು, ಫಿಲಾಸಪಿ ಬುಕ್ ಓದುತ್ತಾ ಕಾಲ ಕಳೆಯುವ ಅಸಾಮಿ ಅವರು. ಕರಪ್ಟ್ ಆಲ್ಲ. ಅವರ ಮೇಲೆ ಆಪಾದನೆಗಳಿಲ್ಲ. ಆದರೆ ಸ್ನೇಹವನ್ನಾಗಲಿ, ಬಂಧುತ್ವವನ್ನಾಗಲಿ ಅಧಿಕಾರವನ್ನಾಗಲಿ ಸಂಭಾಳಿಸುವ ಕಲೆ ಗೊತ್ತಿಲ್ಲದವರು. ಹಾಗಾಗಿ ಅವರ ಹಿಂದೆ ’ಹೌದಪ್ಪ’ಗಳಿಲ್ಲ. ಅಪೀಸಿನಲ್ಲಿ ಯಾರಾದರೂ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ ಅವರನ್ನು ಸೌಮ್ಯವಾಗಿಯೇ ಗದರುತ್ತಾರೆ. ಅವರು ತಿದ್ದಿಕೊಳ್ಳದಿದ್ದರೆ ತಾವೇ ಅದನ್ನು ಮಾಡುತ್ತಾರೆ. ಕತ್ತೆ ದುಡಿದ ಹಾಗೆ ದುಡಿಯುತ್ತಾರೆ.ಅದು ಅವರ ದೌರ್ಬಲ್ಯವೂ ಹೌದು; ಶಕ್ತಿಯೂ ಹೌದು.
ರಂಗನಾಥ್ ಮಹತ್ವಾಕಾಂಕ್ಷಿ. ಮೈಸೂರಿನ ’ಮಹಾನಂದಿ’ ದಿನ ಪತ್ರಿಕೆಯಿಂದ ಪತ್ರಿಕಾರಂಗಕ್ಕೆ ಬಂದವರು. ವಿ. ಎನ್. ಸುಬ್ಬಾರಾವ್ ನೇತೃತ್ವದ’ ನಾವು-ನೀವು’ ವಾರಪತ್ರಿಕೆಯ ಮೂಲಕ ಬೆಂಗಳೂರಿಗೆ ಬಂದರು. ಅಲ್ಲಿಯೂ ಶಶಿಧರ್ ಭಟ್ಟರೇ ಮುಖ್ಯ ವರದಿಗಾರರಾಗಿದ್ದರು. ಅಲ್ಲಿಯೂ ರಂಗನಾಥ್ ಚಿಕ್ಕ ಪುಟ್ಟ ತರಲೆ ಮಾಡುತ್ತಿದ್ದರು. ತುಂಬಾ ಸುಂದರವಾಗಿ ಹೊರಬರುತ್ತಿದ್ದ ಆ ಪತ್ರಿಕೆ ಬಹು ಕಾಲ ಬಾಳಲಿಲ್ಲ. ಅನಂತರ ಶಶಿಧರ್ ಕನ್ನಡಪ್ರಭ ಸೇರಿದರು. ರಂಗನಾಥ್ ಇಂಗ್ಲಿಷ್ ಪತ್ರಿಕೆಗಳಿಗೆ ಬರೆಯುತ್ತಾ ಅಲ್ಲಿ- ಇಲ್ಲಿ ಓಡಾಡಿಕೊಂಡಿದ್ದರು. ಮುರ್ನಾಲ್ಕು ವರ್ಷಗಳ ನಂತರ ರಂಗನಾಥ್ ಕೂಡಾ ಕನ್ನಡ ಪ್ರಭ ಸೇರಿಕೊಂಡರು.
ಈಗ ಇತಿಹಾಸ ಮರುಕಳಿಸುತ್ತಿದೆ. ಭಟ್ಟರು ಕನ್ನಡಪ್ರಭ ಬಿಟ್ಟು ಹತ್ತು ವರ್ಷ ಕಳೆದಿದೆ. ಆದರೆ ಇನ್ನೂ ಅವರು ತಾಂತ್ರಿಕವಾಗಿ ಅಲ್ಲಿಯ ಉದ್ಯೋಗಿಯೇ. ಯಾಕೆಂದರೆ ಅವರ ಅಕೌಂಟ್ ಇನ್ನೂ ಸೆಟ್ಲಾಗಿಲ್ಲ.
ಭಟ್ಟರ ಹಾಗೆ ರಂಗನಾಥ್ ಸೌಮ್ಯ ಅಲ್ಲ. ಅವರೊಬ್ಬ ಡಿಕ್ಟೇಟರ್. ತನ್ನ ಸಬಾರ್ಡಿನೇಟರನ್ನು ಸದಾ ಮುಷ್ಟಿಯಲ್ಲಿಟ್ಟುಕೊಳ್ಳಲು ಬಯಸುತ್ತಾರೆ. ಒಂದು ಉದಾಹರಣೆಯನ್ನು ಕೊಡುತ್ತೇನೆ. ಕಳೆದ ಚುನಾವಣೆಯಲ್ಲಿ ಕನ್ನಡಪ್ರಭದ ಹಿರಿಯ ವರದಿಗಾರರೊಬ್ಬರನ್ನು ಟೀವಿ ಚಾನಲ್ಲೊಂದು ಡಿಸ್ಕಷನ್ ಗೆ ಕರೆದಿತ್ತು. ಆದರೆ ಅವರು ಬರಲಿಲ್ಲ. ಯಾಕೆಂದರೆ ಟೀವಿ ಡಿಸ್ಕಷನ್ ಗೆ ಹೋಗಬಾರದೆಂದು ಸಂಪಾದಕರ ಅಪ್ಪಣೆಯಾಗಿತ್ತಂತೆ.
ಒಂದು ಪತ್ರಿಕೆಯ ಸಂಪಾದಕರಾಗಿದ್ದರೂ ಸಂಪಾದಕಿಯ ಬರೆಯದ ಸಂಪಾದಕರು ಅವರು. ಆದರೆ ತಮ್ಮ ಸುತ್ತ ಹೊಗಳು ಭಟ್ಟರ ಪಡೆಯೊಂದನ್ನು ಕಟ್ಟಿಕೊಂಡಿರುತ್ತಾರೆ. ತಮ್ಮ ಮೇಲೆಯೇ ನಂಬಿಕೆಯಿಲ್ಲದ, ಕೀಳರಿಮೆಯಿಂದ ಬಳಲುತ್ತಿರುವ ವ್ಯಕ್ತಿಗಳು ಹೀಗಿರುತ್ತಾರೆ. ಅವರು ಯಾರನ್ನೂ ನಂಬುವುದಿಲ್ಲ. ನಂಬಿದಂತೆ ನಟಿಸುತ್ತಾರೆ. ಸುಳ್ಳು ಆಶ್ವಾಸನೆಗಳನ್ನು ಕೊಡುತ್ತಾರೆ. ಅದಕ್ಕೆ ಇರಬಹುದು ರಂಗನಾಥರಿಗೆ ಪತ್ರಿಕೋಧ್ಯಮದಲ್ಲಿ ’ರೀಲ್ ರಂಗ’ ಎಂಬ ಹೆಸರಿದೆ. ಬಹುಶಃ ಈ ಗುಣಗಳೇ ರಾಜೀವ್ ಚಂದ್ರಶೇಖರ್ ನ್ನು ಮರಳು ಮಾಡಿರಬಹುದು. ’ಸೆಲ್ಫ್ ಮಾರ್ಕೇಟಿಂಗ್’ ಎಂಬುದು ರಂಗನಾಥರ ಗುಣ ವಿಶೇಷ. ಆದರೆ ಅದು ಟೀವಿ ಮುಂದೆ ನಡೆಯದು. ಕ್ಯಾಮರ ಎಲ್ಲವನ್ನೂ ಬಿಚ್ಚಿಡುತ್ತದೆ. ಡಿಷ್ಕಷನ್ ನಲ್ಲಿ ನೀವು ಗಮನಿಸಿರಬಹುದು.ಅವರು ಕ್ಯಾಮರ ನೋಡಿ ಮಾತಾಡುವುದಿಲ್ಲ; ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ. ಆದರೆ ಟೀವಿಗೆ ಅದೇ ಮುಖ್ಯ.
ಈಗ ರಂಗನಾಥ್ ಸುವರ್ಣ ನ್ಯೂಸ್ ಚಾನಲ್ ಅನ್ನು ನಂ.ಒಂದು ಚಾನಲ್ ಮಾಡಲು ಹೊರಟಿದ್ದಾರೆ. ರವಿ ಹೆಗಡೆ ಎಂಬ ಪೇಜ್ ಲೇಔಟ್ ಅರ್ಟಿಸ್ಟ್, ಜೋಗಿ-ಉದಯಮರಕಿಣಿ ಎಂಬ ಸಿನಿಮಾ ಬರಹಗಾರರು ಅವರ ಹಿಂದೆ ಹೊರಟು ನಿಂತಿದ್ದಾರೆ. ವಿಜಯ ಕರ್ನಾಟಕದ ಆರ್ಟಿಸ್ಟ್ ಒಬ್ಬರು ರಂಗನಾಥ್ ಬಳಗ ಸೇರಲು ರಾಜಿನಾಮೆ ಕೊಟ್ಟರಂತೆ ಎಂಬ ಸುದ್ದಿ ದಟ್ಟವಾಗಿ ಹರಡಿದ್ದು ಹಾಗೆಯೇ ಕರಗಿ ಹೋಗಿದೆ. ಟೀವಿ೯ಗೂ ರಂಗನಾಥ್ ಬಲೆ ಬೀಸಿದ್ದಾರಂತೆ. ’ಮೊದಲು ನೀವು ಹೋಗಿ ಸ್ಟಾಂಡ್ ಆಗಿ ಆಮೇಲೆ ನೋಡೋಣ’ ಎಂದಿದ್ದಾರಂತೆ ರಂಗನಾಥ್ ಭಾರದ್ವಾಜ್. ಪ್ರಿಂಟ್ ಮೀಡಿಯಾದಿಂದ ಇಷ್ಟು ದೊಡ್ಡ ದಂಡು ಸುವರ್ಣಕ್ಕೆ ಹೋದರೆ ಅಲ್ಲೊಂದಷ್ಟು ಜನ ಕೆಲಸ ಕಳೆದುಕೊಳ್ಳಬಹುದು. ಸೀಮಿತ ಅವಕಾಶಗಳುಳ್ಳ ಕನ್ನಡ ಪತ್ರಿಕಾರಂಗ ಈ ಎಲ್ಲಾ ಬೆಳವಣಿಗೆಗಳನ್ನು ಕುತೂಹಲದಿಂದ ಗಮನಿಸುತ್ತಿದೆ.