Visitors

ಪತ್ರಿಕೋಧ್ಯಮದ ಚಿತ್ತ ಎತ್ತ?


ಮೊನ್ನೆ ಕಸ್ತೂರಿ ಚಾನಲ್ ನಲ್ಲಿ ನ್ಯೂಸ್ ನೋಡ್ತಾ ಕೂತಿದ್ದೆ. ಮೊದಲ ಹೆಡ್ ಲೈನ್ ಸುದ್ದಿ ’ಹೈಕೋರ್ಟ್ ಗೆ ಮೋಹಿನಿ ಕಾಟ’. ಈಸುದ್ದಿಯನ್ನು ಯಾವುದೋ ಪೇಪರಿನಲ್ಲಿ ನೋಡಿದ ನೆನಪು. ಒಂದು ಸೆಟೈರ್ ಬರಹಕ್ಕೆ ವಸ್ತುವಾಗಬೇಕಿದ್ದ ಈ ವದಂತಿ ದೃಶ್ಯಮಾಧ್ಯಮದಲ್ಲಿ ಪ್ರೈಮ್ ಟೈಮ್ ನಲ್ಲಿ ಸುದ್ದಿಯಾಗಬೇಕಿದ್ದರೆ...ಅದರ ಹಿಂದೆ ಕೆಲಸ ಮಾಡಿದ್ದ ವರದಿಗಾರ/ರ್ತಿ, ಇನ್ಪುಟ್ ಎಡಿಟರ್,ಔಟ್ಪುಟ್ ಎಡಿಟರ್ ಗಳ ತಲೆಯಲ್ಲಿ ಮೋಹಿನಿ ನಾಟ್ಯವಾಡುತ್ತಿದ್ದಳೆ? ಸಂಶಯ ಪಡಬೇಕಾದ ವಿಷಯ.

ಆ ಸುದ್ದಿ ನೋಡುತ್ತಿರುವಾಗ ನನ್ನ ಪಕ್ಕದಲ್ಲಿ ಹಿರಿಯ ಪತ್ರಕರ್ತರೊಬ್ಬರಿದ್ದರು.’ಏನ್ ಸರ್, ಪತ್ರಿಕೋಧ್ಯಮ ಹೀಗಾಗಿ ಹೋಯ್ತು’ ಅಂದೆ.
’ಎಲ್ಲಾ ಟಿಅರ್ ಪಿ ಮಹಿಮೆ’ ಅಂದರು. ’ಹಾಗಾದರೆ ಅದೆಲ್ಲೋ ನ್ಯೂಸ್ ಓದ್ತಾ ಓದ್ತಾ ಬಟ್ಟೆ ಕಳ್ಚ್ತಾ ಬೆತ್ತಲೆ ಆಗ್ತಾರಂತೆ. ಅದು ಇಲ್ಲಿಯೂ ಬರ್ಬಹುದಾ? ಅಂದೆ. ’ಖಂಡಿತಾ’ ಎಂದರವರು.

ಕುತೂಹಲಕ್ಕೆ ಮೋಹಿನಿಕಾಟದ ಪೇಪರು ಹುಡುಕಿದೆ. ಅದು ಬಿಜೆಪಿಯ ಪಂಚಾಂಗ ’ವಿಜಯ ಕರ್ನಾಟಕ’!. ’ಕೆಂಪು ಕಟ್ಟಡದಲ್ಲಿ ನಡೆದಿದೆ ಮೋಹಿನಿ ಆಟ್ಟಂ. ಅಮಾವಾಸ್ಯೆಯ ರಾತ್ರಿ ತಂಗಾಳಿಯಲ್ಲಿ ತೇಲುವ ಚೆಲುವೆ, ದೆವ್ವದ ಕಾಟಕ್ಕೀಡಾದ ಹೈಕೋರ್ಟ್?’ ಇಷ್ಟುದ್ದದ ಹೆಡ್ಡಿಂಗಿನ ಅರ್ದ ಪುಟಕ್ಕೆ ಹತ್ತಿರದ ಈ ಇನ್ವೆಸ್ಟಿಗೇಟಿವ್ ಸ್ಟೋರಿ ಬರೆದ ವರದಿಗಾರ ಯಾರಪ್ಪಾಂತ ನೋಡಿದರೆ,ಅದು ಧ್ಯಾನ್ ಪೂಣಚ್ಚ.

ಹೀಗೂ ಊಂಟೆ? ಸ್ಟೈಲಿನಲ್ಲಿ ಕತೆ ಹಣೆದದ್ದೇ ಹಣೆದದ್ದು. ಈತ ಹಿಂದೆ ಮುತ್ತಪ್ಪ ರೈ ನೇತೃತ್ವದ’ಗರ್ವ’ ಟಾಬ್ಲೈಡ್ ನಲ್ಲಿ ಕೆಲಸ ಮಾಡುತ್ತಿದ್ದ. ಆ ಪತ್ರಿಕೆ ಮುಚ್ಚಲು ಆತನೇ ನೆಪವಾಗಿದ್ದ. ಅದು ಹೇಗಂದರೆ; ಸುವರ್ಣ ಚಾನಲ್ ನ ಬಗ್ಗೆ ಆತ ಕವರ್ ಸ್ಟೋರಿ ಮಾಡಿದ್ದ. ಇದು ಅಲ್ಲಿನ ಸಿಬ್ಬಂದಿಯಲ್ಲಿ ಹಲವರ ಮನಸ್ಸನ್ನು ಘಾಸಿಗುಳಿಸಿತ್ತು. ಉನ್ನತ ಹುದ್ದೆಯಲ್ಲಿದ್ದ ಒಂದು ಹುಡುಗಿಯಂತು ಅವಮಾನ ಸಹಿಸಲಾರದೆ ಕೆಲಸ ಬಿಟ್ಟು ಹೋದಳು. ಇನ್ನೊಬ್ಬರು ಮುತ್ತಪ್ಪರೈಯವರ ಆಪ್ತರ ಮುಂದೆ ನೋವು ತೋಡಿಕೊಂಡರು. ಅದರ ಸರ್ಕ್ಯೂಲೇಶನ್ ಅಷ್ಟರಲ್ಲೇ ಇದೆ, ಎಂದುಕೊಂಡರೈ ಪತ್ರಿಕೆ ಮುಚ್ಚಲು ಆದೇಶ ನೀಡಿದರು.

ಅಂತಪ್ಪಾ ಧ್ಯಾನ್ ಪೂಣಚ್ಚನಿಂದ ಆರಂಭಗೊಂಡ ಮೋಹಿನಿ ಕಾಟ ವಿಜಯ ಕರ್ನಾಟಕವನ್ನು ಕಾಡಿ, ಕಸ್ತೂರಿಗೆ ಬಡಿದು, ಮುಂದೆ ನಿಗೂಢ ಜಗತ್ತನ್ನು ವ್ಯಾಪಿಸಿ,ಕರ್ನಾಟಕದ ಜನತೆ ’ಹೀಗೂ ಉಂಟೇ’ ಎಂದು ಮೂಗಿನ ಮೇಲೆ ಬೆರಳಿಡಬಹುದು.

0 comments:

Post a Comment